ಕೊರೊನಾ ನಿಯಂತ್ರಣ ಸಮಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಆಗಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮೈಸೂರಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸುತ್ತಿದ್ದಾರೆ.
ಉಸ್ತುವಾರಿ ಜೊತೆ ಇಂದು ಸಂಜೆ ಸಭೆ ಇದೆ.ಎಲ್ಲರಿಗೂ ಸಭೆಗೆ ಬರುವಂತೆ ಆಹ್ವಾನ ಇದೆ.ಉಸ್ತುವಾರಿಗಳ ಜೊತೆ
ಪ್ರತ್ಯೇಕವಾಗಿ ಮಾತನಾಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಅವಕಾಶ ಸಿಕ್ಕರೆ ಪ್ರತ್ಯೇಕ ಭೇಟಿ ಮಾಡುತ್ತೇನೆ.ಅವರು ಹೇಗೆ ಮಾಡುತ್ತಾರೆ ನೋಡೋಣ ಎಂದರು.
ಬಿಜೆಪಿಯಲ್ಲಿ ಹೊರಗಿನಿಂದ ಬಂದವರು ಒಳಗಿಂದ ಬಂದವರು ಎಂಬ ಪ್ರಶ್ನೆಯೇ ಇಲ್ಲ.
ಮನೆಗೆ ಒಂದು ಸಾರಿ ಸೊಸೆ ಬಂದ ಮೇಲೆ ಮೊಳೆ ಬಡಿದು ಬಂದಾ ಹಾಗೇ.ಆ ತರಹದ ಯಾವ ಭಾವನೆಗಳು ನಮ್ಮಲ್ಲಿ ಇಲ್ಲ.
ಟೀಕೆ ಟಿಪ್ಪಣಿಗಳು ಸಹಜ ಐದು ಬೆರಳುಗಳ ಸಮಾನಗಿರುವುದಿಲ್ಲ.
ಮನೆಯಲ್ಲಿ ಅಣ್ಣ ತಮ್ಮಂದರ ನಡುವೆ ವ್ಯತ್ಯಾಸಗಳು ಇರುತ್ತದೆ ಹಾಗೇ ಇದು ಎಂದು ಸಮರ್ಥಿಸಿಕೊಂಡರು.
ನನ್ನ ಅಧಿಕಾರ ನನ್ನ ಮಗ ಚಲಾಯಿಸುವುದು ನನಗೆ ಇಷ್ಟ ಇಲ್ಲ ಎಂದು ಸಚಿವ ಸಿ ಪಿ ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್
ಯೋಗೇಶ್ವರ್ ಅಡ್ಡಗೊಡೆ ಮೇಲೆ ದೀಪವಿಟ್ಟಂತೆ ಮಾತನಾಡಬಾರದು.
ಏನಾದರೂ ಹೇಳುವುದಿದ್ದರೆ ಸ್ಪಷ್ಟವಾಗಿ ಹೇಳಲಿ ಎಂದು ಸಲಹೆ ನೀಡಿದರು.
ಯಡಿಯೂರಪ್ಪ ಪರವಾಗಿ ಸಹಿ ಸಂಗ್ರಹ ವಿಚಾರ.ಸಹಿ ಸಂಗ್ರಹ ಸರಿಯಲ್ಲ.
ಇಂತಹ ಸಂಧರ್ಭದಲ್ಲಿ ಈ ರೀತಿಯ ಯಾವ ಬೆಳವಣಿಗೆಗಳೂ ಸರಿಯಲ್ಲಾ.
ಬಿಜೆಪಿ ರಾಷ್ಟ್ರೀಯ ಪಕ್ಷ ಪಕ್ಷದ ಚೌಕಟ್ಟಿನಲ್ಲೇ ಚರ್ಚೆಯಾಗಬೇಕು ಎಂದರು…