ಬನ್ನೂರು,ಜ.16. Tv10 Kannada
ಪತಿಯ ಹೆಸರಿನಲ್ಲಿದ್ದ ಖಾಲಿನಿವೇಶನ ಪತ್ನಿ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡುವ ವಿಚಾರದಲ್ಲಿ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಟಿ.ನರಸೀಪುರ ತಾಲೂಕು ಬನ್ನೂರಿನ ವ್ಯಾಸರಾಜಪುರ ಗ್ರಾಮದಲ್ಲಿ ನಡೆದಿದೆ.ಚಿನ್ನಸ್ವಾಮಿ(46) ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ಆರೋಪಿ ಪ್ರತಾಪ್.ಆ.ಗಿಲ್ಲಿಸಿದ್ದನಾಯಕ(34) ಪರಾರಿ.ವ್ಯಾಸರಾಜಪುರದಲ್ಲಿರುವ ಖಾಲಿ ನಿವೇಶನವೊಂದು ಮನಸಿದ್ದನಾಯಕ ಎಂಬುವರ ಹೆಸರಿನಲ್ಲಿದೆ.ಕೆಲವು ವರ್ಷಗಳ ಹಿಂದೆ ಮನಸಿದ್ದನಾಯಕ ತೀರಿಕೊಂಡಿದ್ದು ಖಾಲಿನಿವೇಶನವನ್ನ ಪತ್ನಿ ಚಿಕ್ಕಣ್ಣಮ್ನ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.ಇದಕ್ಕಾಗಿ ನಾಲ್ಕು ತಿಂಗಳ ಹಿಂದೆ ಮಾಜಿ ಛೇರ್ಮನ್ ನಾಗರಾಜು ರವರಿಗೆ ಚಿಕ್ಕಣ್ಣಮ್ಮ 10 ಸಾವಿರ ಕೊಟ್ಟಿದ್ದಾರೆ.ಹಣ ಕೊಟ್ಟಿದ್ದರೂ ನಿವೇಶನ ತಮ್ಮ ಹೆಸರಿಗೆ ಬದಲಾಯಿಸುವಲ್ಲಿ ನಾಗರಾಜ್ ವಿಫಲರಾಗಿದ್ದಾರೆ.ಈ ವಿಚಾರದಲ್ಲಿ ಚಿಕ್ಕಣ್ಣಮ್ಮ ಮಗ ಚಿನ್ನಸ್ವಾಮಿ ತಮ್ಮ ಮನೆ ಮುಂದೆ ನಿಂತು ನಾಗರಾಜ್ ಗೆ ಬೈಯುತ್ತಿರುತ್ತಾರೆ.ಇದನ್ನ ಕೇಳಿಸಿಕೊಂಡ ಪ್ರತಾಪ್ ನಮ್ಮ ಚಿಕ್ಕಪ್ಪನಿಗೆ ಬೈಯುತ್ತೀಯ ಎಂದು ಜಗಳ ತೆಗೆದಿದ್ದಾನೆ.ಮರದ ತುಂಡಿನಿಂದ ಚಿನ್ನಸ್ವಾಮಿ ತಲೆಗೆ ಹೊಡೆದಿದ್ದಾನೆ.ಪ್ರಜ್ಞೆ ತಪ್ಪಿದ ಚಿನ್ನಸ್ವಾಮಿಯನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಚಿನ್ನಸ್ವಾಮಿ ಮೃತಪಟ್ಟಿದ್ದಾರೆ.ಕೊಲೆ ಮಾಡಿದ ಪ್ರತಾಪ್ ತಲೆ ಮರೆಸಿಕೊಂಡಿದ್ದಾನೆ.ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…