TV10 Kannada Exclusive

ಜಮೀನಿನಲ್ಲಿ ಹುಲಿ ಹೆಜ್ಜೆ ಪತ್ತೆ…ಗ್ರಾಮಸ್ಥರಲ್ಲಿ ಆತಂಕ…ರಕ್ಷಣಾ ಬೇಲಿಯ ಕಿಂಡಿಗಳಿಂದ ಕಾಡು ಪ್ರಾಣಿಗಳು ಗ್ರಾಮ ಪ್ರವೇಶಿಸುತ್ತಿರುವ ಆರೋಪ…

ಹುಣಸೂರು,ಜೂ3,Tv10 ಕನ್ನಡಜಮೀನಿನಲ್ಲಿ ಹುಲಿ ಹೆಜ್ಜೆ ಕಂಡುಬಂದಿದ್ದು ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.ಹುಣಸೂರು ತಾಲೂಕಿನ ಕುಪ್ಪೆಕೊಳಘಟ್ಟ ಗ್ರಾಮದ ಕುಮಾರ್ ಎಂಬುವರ ಜಮೀನಿನಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದೆ.ಮತ್ತೊಂದೆಡೆ ಕಾಡುಪ್ರಾಣಿಗಳು ಸಾಕು ಪ್ರಾಣಿಗಳನ್ನ ಹೊತ್ತೊಯ್ಯುತ್ತಿರುವುದು ಗ್ರಾಮಸ್ಥರಲ್ಲಿ ಭೀತಿ ಮನೆ ಮಾಡಿದೆ.ಕಾಡು ಪ್ರಾಣಿಗಳು ಗ್ರಾಮಕ್ಕೆ ಪ್ರವೇಶಿಸದಂತೆ ಅಂಚಿನಲ್ಲಿ ಅರಣ್ಯ ಇಲಾಖೆ ವತಿಯಿಂದ ರಕ್ಷಣಾ ಬೇಲಿ ನಿರ್ಮಿಸಲಾಗಿದೆ.ಬೇಲಿಯಲ್ಲಿ ಕಿಂಡಿಗಳು ನಿರ್ಮಣವಾಗಿದೆ.ಕಿಂಡಿಗಳ ಮೂಲಕ ಕಾಡು ಪ್ರಾಣಿಗಳು ಗ್ರಾಮ ಪ್ರವೇಶಿಸುತ್ತಿದೆ ಎಂದು ಸ್ಥಳೀಯರಾದ ಕುಮಾರ್ ಆರೋಪಿಸಿದ್ದಾರೆ.ಕೂಡಲೇ ರಕ್ಷಣಾ ಬೇಲಿಯಲ್ಲಿ ನಿರ್ಮಾಣವಾಗಿರುವ ಕಿಂಡಿಗಳನ್ನ
Read More

ವಿಶ್ವ ಬೈಸಿಕಲ್ ದಿನಾಚರಣೆ…ಉತ್ತಮ ಆರೋಗ್ಯಕ್ಕಾಗಿ ಜಾಥಾ ಮೂಲಕ ಜಾಗೃತಿ…

ವಿಶ್ವ ಬೈಸಿಕಲ್ ದಿನಾಚರಣೆ…ಉತ್ತಮ ಆರೋಗ್ಯಕ್ಕಾಗಿ ಜಾಥಾ ಮೂಲಕ ಜಾಗೃತಿ… ಮೈಸೂರು,ಜೂ3,Tv10 ಕನ್ನಡಇಂದು ವಿಶ್ವ ಬೈಸಿಕಲ್ ದಿನಾಚರಣೆ ಪ್ರಯುಕ್ತ ಸೈಕಲ್ ಜಾಥಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಆರೋಗ್ಯಕ್ಕಾಗಿ ಸೈಕಲ್ ಎಂಬ ಕಾನ್ಸೆಪ್ಟ್ ನಲ್ಲಿ ಜಾಥಾ ಆಯೋಜಿಸಲಾಗಿತ್ತು. ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಕಚೇರಿ ವತಿಯಿಂದ ಜಾಥಾ ಆಯೋಜಿಸಲಾಗಿತ್ತು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಿಂದ ಹೊರಟು ಎಸ್ ಪಿ ಆಫೀಸ್ ವೃತ್ತದಿಂದ ಹಾಗೂ ಗೋಪಾಲಗೌಡ ಆಸ್ಪತ್ರೆಯ ವೃತ್ತದಿಂದ ಮರಳಿ ಜಿಲ್ಲಾ ಆರೋಗ್ಯ
Read More

ಆನೆ ದಾಳಿ…ವ್ಯಕ್ತಿ ಸಾವು…ಕಾವಲಿಗೆ ತೆರಳಿದ ವೇಳೆ ಘಟನೆ…

ಸರಗೂರು,ಜೂ2,Tv10 ಕನ್ನಡಆನೆ ತುಳಿತಕ್ಕೆ ವ್ಯಕ್ತಿ ಸಾವನ್ನಪ್ಪಿದ ಘಟನೆ ಸರಗೂರು ತಾಲೂಕಿನ ಬಿ ಮಟ್ಟಕೆರೆ ಗ್ರಾಮದಲ್ಲಿ ನಡೆದಿದೆ.ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಿರೇಹಳ್ಳಿ ಗ್ರಾಮದ ರವಿ ಕುಮಾರ್ ಎಂಬುವರು ಸಾವನ್ನಪ್ಪಿದ್ದಾರೆ. ಸೀಗೇವಾಡಿ ಎಂಬ ಕಾಡಂಚಿನ ತಮ್ಮ ಜಮೀನಿನಲ್ಲಿ ಕಾವಲಿಗೆ ತೆರಳಿದಾಗ ಆನೆ ದಾಳಿ ನಡೆಸಿದೆ.ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸರ್ಕಾರದಿಂದ ಬರುವ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ…
Read More

ಮುಖ್ಯಮಂತ್ರಿ ಕಾನೂನು ಸಲಹೆಗಾರರಾಗಿ ವಿರಾಜಪೇಟೆ ಶಾಸಕ ಎ.ಎಸ್.ಹೊನ್ನಣ್ಣ ನೇಮಕ…ಸಿದ್ದರಾಮಯ್ಯ ರಿಂದ ಆದೇಶ…

ವಿರಾಜಪೇಟೆ,ಜೂ2,Tv10 ಕನ್ನಡವಿರಾಜಪೇಟೆ ಶಾಸಕ ಎ.ಎಸ್.ಹೊನ್ನಣ್ಣರವರನ್ನ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ.ತಕ್ಷಣವೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ಸಚಿವ ಸಂಪುಟ ದರ್ಜೆಯ ಸ್ಥಾನಮಾನಗಳ ಎಲ್ಲಾ ಸೌಲಭ್ಯಗಳನ್ನ ಒದಗಿಸುವಂತೆ ಸೂಚನೆ ನೀಡಲಾಗಿದೆ…
Read More

ಇಂದಿನಿಂದ ಶಾಲೆ ಆರಂಭ…ಹೂವು,ಸಿಹಿ, ಪಠ್ಯಪುಸ್ತಕ ವಿತರಿಸಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಿದ ಶಿಕ್ಷಕರು…

ಮೈಸೂರು,ಮೇ31,Tv10 ಕನ್ನಡಇಂದಿನಿಂದ ಶಾಲೆಗಳು ಪುನರಾರಂಭವಾಗಿದೆ.ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯವಿದ್ಯಾರ್ಥಿಗಳಿಗೆ ಹೂವು ಎರಚಿ, ಸಿಹಿ ನೀಡಿ ಸ್ವಾಗತಿಸಲಾಗಿದೆ.ಶಾಲೆಗಳನ್ನು ಮಾವಿನ ತಳಿರು ಮತ್ತು ಹೂವುಗಳಿಂದ ಅಲಂಕರಿಸಿ, ಶಿಕ್ಷಕರು ಹೂ ಹಿಡಿದು ಶಾಲಾ ದ್ವಾರದಲ್ಲಿ ನಿಂತು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.ಇಲ್ಲಿನ ಅಕ್ಕನ ಬಳಗ ಶಾಲೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ರಂಗೋಲಿಯ ಚಿತ್ತಾರದೊಂದಿಗೆ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಆರತಿ ಎತ್ತಿ, ಹಣೆಗೆ ತಿಲಕ ಇಟ್ಟು, ಹೂವು ನೀಡಿ, ಸಿಹಿ
Read More

ಮೈಸೂರು ಮಹಾನಗರ ಪಾಲಿಕೆ ಇಂಜಿನಿಯರ್ ಮಹೇಶ್ ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ…ದಾಖಲೆಗಳ ಪರಿಶೀಲನೆ…

ಮೈಸೂರು,ಜೂ1,Tv10 ಕನ್ನಡಬೆಳ್ಳಬೆಳಗ್ಗೆ ಮೈಸೂರಿನಲ್ಲಿ ಲೋಕಾಯುಕ್ತ ಮೈಸೂರು ಮಹಾನಗರ ಪಾಲಿಕೆ ಇಂಜಿನಿಯರ್ ಮನೆ ಮೇಲೆ ದಾಳಿ ನಡೆಸಿದೆ.ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ ಮಹೇಶ್ ಕುಮಾರ್ ವಿರುದ್ದ ಕಾರ್ಯಾಚರಣೆ ನಡೆದಿದೆ.ಮೈಸೂರಿನ ನಿವೇದಿತಾ ನಗರ ಸಂಕ್ರಾಂತಿ ವೃತ್ತದಲ್ಲಿರುವ ಮನೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.ತೋಟದ ಮನೆ ಸೇರಿ ಹಲವು ಕಡೆ ದಾಳಿ ನಡೆಸಲಾಗಿದೆ. 13 ತಂಡದಿಂದ ಏಕಕಾಲಕ್ಕೆ‌ ದಾಳಿ ನಡೆಸಲಾಗಿದೆ.ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ಬಂದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.ದಾಖಲೆಗಳ
Read More

ಕಾಂಬೋಡಿಯಾ ಸಾರ್ವತ್ರಿಕ ಚುನಾವಣೆ…ಮೈಲ್ಯಾಕ್ ನಿಂದ ಶಾಯಿ ರವಾನೆ…

ಮೈಸೂರು,ಮೇ30,Tv10 ಕನ್ನಡಕಾಂಬೋಡಿಯಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನಲೆ ಮೈಸೂರಿನ ಮೈಲ್ಯಾಕ್ ನಿಂದ ೫೨ ಸಾವಿರ ಬಾಟಲ್ ಅಳಿಸಲಾಗದ ಶಾಯಿ ರವಾನೆಯಾಗಿದೆ. ಮೈಸೂರು ಅರಗು ಮತ್ತು ‌ಬಣ್ಣದ ಕಾರ್ಖಾನೆಯಿಂದ ಅಳಿಸಲಾಗದ ಶಾಯಿ ರವಾನಿಸಲಾಯಿತು.ಬೇಡಿಕೆಯಂತೆ ೭೦ ಮಿ.ಲೀ ಅಳತೆಯ ೫೨,೦೦೦ ಬಾಟಲ್‌ ಅಳಿಸಲಾಗದ ಶಾಯಿಯನ್ನು ಮಂಗಳವಾರ ರಫ್ತು ಮಾಡಲಾಯಿತು.ಸದರಿ ಸಾಮಗ್ರಿಯನ್ನು ರಫ್ತು ಮಾಡುವಾಗ ವಿಶ್ವೇಶ್ವರಯ್ಯ ರಫ್ತು ಉತ್ತೇಜನಾ ಕೇಂದ್ರದ‌ ನಿರ್ದೇಶಕ ಸತೀಶ್‌, ಎಂಪಿವಿಎಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ. ಕುಮಾರಸ್ವಾಮಿ, ಪ್ರಧಾನ ವ್ಯವಸ್ಥಾಪಕ
Read More

ಸರಸ್ವತಿಪುರಂ ರೈಲ್ವೆ ಅಂಡರ್ ಬ್ರಿಡ್ಜ್ ಗೆ ಮೇಯರ್ ಭೇಟಿ…ಮಳೆ ನೀರು ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ…

ಸರಸ್ವತಿಪುರಂ ರೈಲ್ವೆ ಅಂಡರ್ ಬ್ರಿಡ್ಜ್ ಗೆ ಮೇಯರ್ ಭೇಟಿ…ಮಳೆ ನೀರು ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ… ಮೈಸೂರು,ಮೇ30,Tv10 ಕನ್ನಡಇಂದು ಸರಸ್ವತಿ ಪುರಂನ ರೈಲ್ವೆ ಅಂಡರ್ ಬ್ರಿಡ್ಜ್ ರಸ್ತೆಗೆ ಮೇಯರ್ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆ ಬಂದಾಗ ನೀರು ಸರಾಗವಾಗಿ ಹರಿದು ಹೋಗದ ಹಿನ್ನಲೆ ವಾಹನ ಸವಾರರಿಗೆ ಕಿರಿಕಿರಿ ಆಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನಲೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬೆಂಗಳೂರಿನಲ್ಲಿ ನಡೆದ ದುರಂತದ ನಂತರ
Read More

ರಿವರ್ ಸ್ವಿಮ್ಮಿಂಗ್ ಸ್ಪರ್ಧೆ…ಮೈಸೂರು ವಿವಿ ಈಜುಪಟುಗಳ ಸಾಧನೆ…

ಮಡಿಕೇರಿ,ಮೇ28,Tv10 ಕನ್ನಡಮಡಿಕೇರಿ ನಾಪೋಕ್ಲು ತಾಲೂಕಿನಲ್ಲಿ ನಡೆದ ರಾಜ್ಯಮಟ್ಟದ ರಿವರ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಈಜು ಪಟುಗಳು ಅಮೋಘ ಸಾಧನೆ ಮಾಡಿದ್ದಾರೆ.ಕಕ್ಕಬ್ಬೆ ಹೊಳೆಯಲ್ಲಿ ನಡೆದ ರಿವರ್ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಮೈಸೂರಿಗೆ ಹೆಮ್ಮೆ ತಂದಿದ್ದಾರೆ.ಬೆಂಗಳೂರು,ಮಂಗಳೂರು,ಮೈಸೂರಿನಿಂದ ಆಗಮಿಸಿದ್ದ 80 ಈಜುಪಟುಗಳ ಪೈಕಿ ಮೈಸೂರಿನ ಪಟುಗಳು ಬಹುಮಾನಗಳನ್ನ ಬಾಚಿದ್ದಾರೆ. 15 ವರ್ಷದೊಳಗಿನ ವಿಭಾಗದಲ್ಲಿ ರಾಹುಲ್.ಕೆ 400 ಮೀಟರ್,200 ಮೀಟರ್ ಹಾಗೂ 50 ಮೀಟರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಶ್ರೀಹರಿ
Read More

ಅಯೋಧ್ಯೆಯಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶಾಖೆಗೆ ಭೂಮಿಪೂಜೆ‌…81 ನೇ ಜನ್ಮದಿನಾಚರಣೆ ಸಂಭ್ರಮ…

ಅಯೋದ್ಯೆ,ಮೇ27, Tv10 ಕನ್ನಡಮೈಸೂರಿನ ಶ್ರೀ ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಪೀಠಾಧೀಶರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ 81ನೇ ಜನ್ಮದಿನದ ಸಂಭ್ರಮ ಮನೆ ಮಾಡಿದೆ.ಸಾಮಾನ್ಯವಾಗಿ ಸ್ವಾಮೀಜಿಯವರ ಜನ್ಮದಿನ ಆಚರಣೆಯನ್ನು ಮೈಸೂರಿನ ಅವಧೂತ ದತ್ತಪೀಠದಲ್ಲಿ ನೆರವೇರಿಸಲಾಗುತಿತ್ತು. ಈ ಸಂದರ್ಭದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು,ಆಶ್ರಮದ ಆವರಣದಲ್ಲಿರುವ ದೇವಾಲಯಗಳಲ್ಲಿ ದೇವರುಗಳಿಗೆ ವಿಶೇಷ ಪೂಜೆಗಳು ನಡೆಯುತ್ತಿದ್ದವು.ಈ ಬಾರಿ ಸ್ವಾಮೀಜಿಯವರ ಅನುಪಸ್ಥಿತಿಯಲ್ಲಿ ಅವಧೂತ ದತ್ತಪೀಠದಲ್ಲಿಶ್ರೀಗಳ ಜನ್ಮದಿನದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ನೆರವೇರಿವೆ.ಆದರೆ ಈ
Read More