ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ…
- TV10 Kannada Exclusive
- March 8, 2026
- No Comment
- 31
ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ…
ನಂಜನಗೂಡು,ಮಾ8,Tv10 ಕನ್ನಡ
ನಂಜನಗೂಡು ಕಪಿಲಾ ನದಿ ಪಾತ್ರದ ಭಾರಿ ಮರಗಳ ಮಾರಣಹೋಮವಾಗಿದೆ.ಶ್ರೀಕಂಠೇಶ್ವರನ ದೇವಾಲಯ ಸಮೀಪ ಹದಿನಾರುಕಾಲು ಮಂಟಪದ ಬಳಿ ಬೆಳೆದಿದ್ದ ಬೃಹತ್ ಗಾತ್ರದ ಮರಗಳು ದುಷ್ಕರ್ಮಿಗಳ ಸಂಚಿಗೆ ಬಲಿಯಾಗಿದೆ.ಹಾಡುಹಗಲೇ ರಾಜಾರೋಷವಾಗಿ ಅನುಮತಿ ಇಲ್ಲದೆ ಮರಗಳನ್ನ ಕಡಿದು ಧರೆಗೆ ಉರುಳಿಸಲಾಗಿದೆ.ಅರಣ್ಯ ಇಲಾಖೆ ಸಿಬ್ಬಂದಿಗಳು ಧಾವಿಸುತ್ತಿದ್ದಂತೆಯೇ ಖದೀಮರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಸುಮಾರು ಹತ್ತಕ್ಕೂ ಹೆಚ್ಚು ಮರಗಳ ಹನನವಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸಂಬಂಧಿಕ ಹೆಜ್ಜಿಗೆ ರಾಮಯ್ಯ ಕುಟುಂಬದವರು ಮರಗಳನ್ನ ಕಟ್ ಮಾಡಿದ್ದಾರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಹೆಜ್ಜಿಗೆ ರಾಮಯ್ಯ ಮಗ ಕೃಷ್ಟ ಸಧ್ಯ ಶ್ರೀಕಂಠೇಶ್ವರ ದೇವಾಲಯ ಆಡಳಿತ ಮಂಡಳಿಯ ಧರ್ಮದರ್ಶಿ.ಈತನ ಕೃಪಾಕಟಾಕ್ಷದಿಂದ ಮರಗಳ ಮಾರಣಹೋಮ ನಡೆದಿದೆ ಎನ್ನಲಾಗಿದೆ.ಬೃಹತ್ ಮರಗಳು ಧರೆಗೆ ಉರುಳಿಸಿದ್ದರೂ ತಹಸೀಲ್ದಾರ್ ಸ್ಥಳಕ್ಕೆ ಬಂದಿಲ್ಲ.ಜೊತೆಗೆ ಇದುವರೆಗೆ ಯಾವುದೇ ದೂರು ಸಹ ದಾಖಲಾಗದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಕೂಡಲೇ ತಾಲೂಕು ಆಡಳಿತ ಎಚ್ಚೆತ್ತು ಮರಗಳಿಗೆ ಕೊಡಲಿ ಹಾಕಿದ ದುಷ್ಕರ್ಮಿಗಳ ಹೆಡೆಮುರಿ ಕಟ್ಟಬೇಕಿದೆ.ಇಲ್ಲದಿದ್ದಲ್ಲಿ ಕಿಡಿಗೇಡಿಗಳ ಸಂಚಿಗೆ ಮತ್ತಷ್ಟು ಮರಗಳು ಬಲಿಯಾಗಲಿವೆ…