ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?
- Uncategorized
- September 13, 2026
- No Comment
- 43
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?


ಮೈಸೂರು,ಸೆ13,Tv10 ಕನ್ನಡ
ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್ ಜೀಪ್ ನಿಲ್ಲಿಸಲಾಗಿದೆ.ಇದು ಮುನ್ನೆಚ್ಚರಿಕೆ ಕ್ರಮವೆಂದೇ ಹೇಳಲಾಗಿದೆ.ಸದರಿ ಸ್ಥಳದಲ್ಲಿ ಒಂದು ಗುಂಪು ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕೆಂದು ಮತ್ತೊಂದು ಗುಂಪು ಕುವೆಂಪು ರವರ ಪ್ರತಿಮೆ ಅನಾವರಣ ಮಾಡಬೇಕೆಂದು ಪಟ್ಟು ಹಿಡಿದಿತ್ತು.ಈ ನಿರ್ಧಾರ ವಿವಾದಕ್ಕೆ ಕಾರಣವಾಗಿ ಸಂಘರ್ಷಕ್ಕೂ
ಕಾರಣವಾಗಿತ್ತು.ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಯಾವುದೇ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡದೆ ಮುನ್ನೆಚ್ಚರಿಕೆ ವಹಿಸಿತ್ತು.ಘಟನೆ ನಡೆದು ಕೆಲವು ವರ್ಷಗಳೇ ಉರುಳಿದ್ರೂ ಈ ಸ್ಥಳವನ್ನ ಸೂಕ್ಷ್ಮ ಪ್ರದೇಶವೆಂದೇ ಪರಿಗಣಿಸಿ 24 ಗಂಟೆ ಪೊಲೀಸ್ ಭದ್ರತೆ ನೀಡಲಾಗಿತ್ತು.ಇದೀಗ ಗೌರಿ ಗಣೇಶ ಹಬ್ಬದ ಸಂಭ್ರಮವಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ತಮ್ಮದೇ ಉಪಾಯ ಹುಡುಕಿಕೊಂಡಿದ್ದಾರೆ.ಯಾವುದೇ ಪ್ರತಿಮೆ ಸ್ಥಾಪನೆ ಆಗದಂತೆ ಹಾಗೂ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಪೊಲೀಸ್ ಜೀಪ್ ನಿಲ್ಲಿಸಿದ್ದಾರೆ.ವಿವಾದಿತ ಸರ್ಕಲ್ ನಲ್ಲಿ ಜೀಪ್ ರಾಜಾರೋಷವಾಗಿ ನಿಂತಿದೆ…