ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…
- TV10 Kannada Exclusive
- August 30, 2026
- No Comment
- 33





ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…
ಮೈಸೂರು,ಆ30,Tv10 ಕನ್ನಡ
ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ ಸಾರ್ಥಕವಾಗಿದೆ.ವಲಯ ಕಚೇರಿ 5 ರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ GVB ಯೋಜನೆ ವಾರ್ಡ್ ನಂ 7 ರಲ್ಲಿ ಅರ್ಥಪೂರ್ಣವಾಗಿ ಜಾರಿಗೆ ಬಂದಿದೆ.ಕಸದ ರಾಶಿ ತುಂಬಿದ್ದ ಸ್ಥಳವೀಗ ಸಾರ್ವಜನಿಕರ ಆಶ್ರಯ ತಾಣವಾಗಿ ಪರಿವರ್ತನೆಯಾಗಿದೆ.
ಮೈಸೂರಿನ ಮೇಟಗಳ್ಳಿಯ ವೆಂಕಟರಮಣಸ್ವಾಮಿ ದೇವಾಲಯ ಮುಂಭಾಗದ ರೈಲ್ವೆ ಟ್ರಾಕ್ ಬಳಿ ಸಂಗ್ರಹವಾಗಿದ್ದ ಕಸದ ರಾಶಿ ಇದೀಗ ಮುಕ್ತವಾಗಿದೆ.ಮೈಸೂರಿನಲ್ಲಿ ಗುರುತಿಸಲಾಗಿದ್ದ ಒಟ್ಟು 80 ಸ್ಥಳಗಳನ್ನ ಕಸದ ಮುಕ್ತ ಸ್ಥಳವನ್ನಾಗಿ ಮಾಡಲು GVB ಯೋಜನೆ ಜಾರಿಗೆ ತರಲಾಗಿತ್ತು.ಆಗಸ್ಟ್ 30 ರೊಳಗೆ ಕಸದ ಮುಕ್ತ ಸ್ಥಳವಾಗಿಸಲು ಡೆಡ್ ಲೈನ್ ನೀಡಲಾಗಿತ್ತು.ಎಲ್ಲಾ ಪಾಯಿಂಟ್ ಗಳನ್ನ ಕಸದ ರಾಶಿಯಿಂದ ಮುಕ್ತವಾಗಿಸಿರುವ ಅಧಿಕಾರಿಗಳು ಇಂದು ವಾರ್ಡ್ ನಂ.7 ರಲ್ಲೂ ಸಹ ಸಾರ್ಥಕಪಡಿಸಿದರು.ಕಸ ತುಂಬಿದ್ದ ಸ್ಥಳವೀಗ ಸಾರ್ವಜನಿಕರ ಬಳಕೆ ಕೇಂದ್ರವಾಗಿದೆ.ಸ್ಥಳವನ್ನ ಸ್ವಚ್ಛಗೊಳಿಸಿ ಅಂದವಾದ ಚಿತ್ರಗಳನ್ನ ಬಿಡಿಸಿ ವಿರಮಿಸಲು ಆಸನಗಳನ್ನ ಅಳವಡಿಸಿದ್ದಾರೆ.ಕಸ ಹಾಕದಂತೆ ಗೋಡೆ ಬರಹಗಳ ಮೂಲಕ ಸಂದೇಶ ರವಾನಿಸಿದ್ದಾರೆ.ವಲಯ ಕಚೇರಿ 5 ರ ಪರಿಸರ ಅಭಿಯಂತರ ಕೃಷ್ಣಮೂರ್ತಿ,ಆರೋಗ್ಯ ಪರಿವೀಕ್ಷಕರಾದ ಗೀತ,ಸೂಪರ್ ವೈಸರ್ ರಾಮಾಂಜನೇಯ ಸೇರಿದಂತೆ ಪೌರಕಾರ್ಮಿಕರು ಯೋಜನೆ ಯಶಸ್ವಿಗೊಳಿಸಿದ್ದಾರೆ…