ಅಶ್ಲೀಲ ಫೋಟೋ ಕ್ರಿಯೇಟ್ ಮಾಡಿ ಅತಿಥಿ ಉಪನ್ಯಾಸಕನಿಗೆ ಬ್ಲಾಕ್ ಮೇಲ್…ಸೆನ್ ಪೊಲೀಸ್ ಠಾಣೆಗೆ ದೂರು…

ಮೈಸೂರು,ಜೂ1,Tv10 ಕನ್ನಡ
ಆನ್ ಲೈನ್ ಆಪ್ ಗಳಲ್ಲಿ ಲೋನ್ ಪಡೆಯುವ ಪ್ಲಾನ್ ಹಾಕಿದ್ದೀರಾ ಹಾಗಿದ್ರೆ ಹುಷಾರ್.ನೀವು ಬ್ಲಾಕ್ ಮೇಲ್ ಗೆ ಒಳಗಾಗೋದು ಖಚಿತ.ಮೈಸೂರಿನ ಅತಿಥಿ ಉಪನ್ಯಾಸಕರೊಬ್ಬರಿಗೆ ಇಂತಹ ಕಹಿ ಘಟನೆ ನಡೆದು ರಕ್ಷಣೆಗಾಗಿ ಸೆನ್ ಪೊಲೀಸರ ಮೊರೆ ಹೋಗಿದ್ದಾರೆ.ಮಾನಸಗಂಗೋತ್ರಿಯಲ್ಲಿ ಅತಿಥಿ ಉಪನ್ಯಾಸಕರಾಗಿರುವ ಚಂದ್ರಗುಪ್ತ ರವರಿಗೆ ಇಂತಹ ಕಹಿ ಘಟನೆ ನಡೆದಿದೆ.ಸೂಪರ್ ಲೋನ್ ಆಪ್ ನಲ್ಲಿ ಸಾಲ ಪಡೆದ ಚಂದ್ರಗುಪ್ತ ರವರನ್ನ ಬ್ಲಾಕ್ ಮೇಲ್ ಮಾಡಿ ಹಣ ಕಸಿಯುವ ಯತ್ನ ನಡೆಸಿದ ಕಿಡಿಗೇಡಿಗಳಿಗೆ ಸೆನ್ ಪೊಲೀಸರು ಬ್ರೇಕ್ ಹಾಕಿದ್ದಾರೆ.ಕೇವಲ ಮೂರು ಸಾವಿರ ಸಾಲ ಪಾಡೆಯಲು ಮುಂದಾದ ಚಂದ್ರಗುಪ್ತ ಇನ್ನಿಲ್ಲದ ಕಿರಿ ಕಿರಿ ಅನುಭವಿಸಿದ್ದಾರೆ.ಮೂರು ಸಾವಿರ ಸಾಲಕ್ಕಾಗಿ ಆಪ್ ನವರು ಕೇಳಿದ ದಾಖಲೆಗಳನ್ನ ಕೊಟ್ಟಿದ್ದಾರೆ.ದಾಖಲೆ ಕೊಟ್ಟ ಮರುಕ್ಷಣವೇ ಮೇ 20 ರಂದು ಮೂರು ಸಾವಿರ ಬದಲಾಗಿ ಕೇವಲ 1800 ರೂ ಜಮಾ ಮಾಡಿದ್ದಾರೆ.ಜಮಾ ಮಾಡಿದ ಏಳು ದಿನಗಳಿಗೆ ಅವಧಿ ಮುಗಿದಿದೆ ಹಣ ಹಿಂದಿರುಗಿಸಬೇಕೆಂದು ಮೆಸೇಜ್ ಹಾಕಿದ್ದಾರೆ.1800 ರೂ ಪಾವತಿಸಿದ ನಂತರ ಮತ್ತೆ ಮತ್ತೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ.ಪಡೆದ 1800 ಸಾಲಕ್ಕೆ ಮೂರು ಸಾವಿರ ಪಾವತಿಸಿದ್ದರೂ ಮತ್ತಷ್ಟು ಹಣಕ್ಕಾಗಿ ಒತ್ತಾಯಿಸಿದ್ದಾರೆ.ಹಣ ಕೊಡಲು ನಿರಾಕರಿಸಿದಾಗ ಚಂದ್ರಗುಪ್ತ ರವರ ಅಕೌಂಟ್ ಹ್ಯಾಕ್ ಮಾಡಿ ಸಂಪೂರ್ಣ ಮಾಹಿತಿ ಕಲೆ ಹಾಕಿ ನಂತರ ಅಶ್ಲೀಲ ಫೋಟೋ ಒಂದನ್ನ ಕ್ರಿಯೇಟ್ ಮಾಡಿ ಸ್ನೇಹಿತರು ಹಾಗೂ ಸಂಭಂಧಿಕರಿಗೆ ರವಾನಿಸುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ.ಕೂಡಲೇ ಚಂದ್ರಗುಪ್ತ ರವರು ಮೈಸೂರು ನಗರದ ಸೆನ್ ಠಾಣೆ ಪೊಲೀಸರ ಮೊರೆ ಹೋಗಿ ದೂರು ನೀಡಿದ್ದಾರೆ.ಸೆನ್ ಪೊಲೀಸರ ಸಲಹೆ ಪಡೆದ ನಂತರ ಆಪ್ ನವರ ಬ್ಲಾಕ್ ಮೇಲ್ ನಿಂದ ಬಚಾವ್ ಆಗಿದ್ದಾರೆ.ಅನಾಮಧೇಯ ಆಪ್ ಗಳಲ್ಲಿ ಸಾಲ ಪಡೆಯುವ ಮುನ್ನ ಮುಂದಾಗುವ ಪ್ರಮಾದಗಳ ಬಗ್ಗೆ ಒಮ್ಮೆ ಚಿಂತಿಸುವುದು ಒಳಿತು…

Spread the love

Related post

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಎಂ ಮಹದೇವಸ್ವಾಮಿ ನ್ಯಾಯಾಧೀಶರಾಗಿ ಆಯ್ಕೆ – ಹೆಮ್ಮೆಯ ಕ್ಷಣ

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಎಂ…

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಎಂ ಮಹದೇವಸ್ವಾಮಿ ನ್ಯಾಯಾಧೀಶರಾಗಿ ಆಯ್ಕೆ – ಹೆಮ್ಮೆಯ ಕ್ಷಣ ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ…
ಮಂಡ್ಯ ಪೊಲೀಸರ ಭರ್ಜರಿ ಕಾರ್ಯಾಚರಣೆ…ಬೈಕ್ ಕಳ್ಳರ ಬಂಧನ…14 ಲಕ್ಷ ಮೌಲ್ಯದ 27 ಬೈಕ್ ಮೂರು ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಮಂಡ್ಯ ಪೊಲೀಸರ ಭರ್ಜರಿ ಕಾರ್ಯಾಚರಣೆ…ಬೈಕ್ ಕಳ್ಳರ ಬಂಧನ…14 ಲಕ್ಷ ಮೌಲ್ಯದ 27…

ಮಂಡ್ಯ ಪೊಲೀಸರ ಭರ್ಜರಿ ಕಾರ್ಯಾಚರಣೆ…ಬೈಕ್ ಕಳ್ಳರ ಬಂಧನ…14 ಲಕ್ಷ ಮೌಲ್ಯದ 27 ಬೈಕ್ ಮೂರು ಲಕ್ಷ ಮೌಲ್ಯದ ಚಿನ್ನಾಭರಣ ವಶ… ಮಂಡ್ಯ,ಮಾ13,Tv10 ಕನ್ನಡ ಮಂಡ್ಯ ಪೂರ್ವ ಹಾಗೂ ಪಶ್ಚಿಮ…
MDA ವಿಶೇಷ ಭೂ ಸ್ವಾಧೀನ ಇಲಾಖೆ ವ್ಯವಸ್ಥಾಪಕಿ ಬಿ.ಶೃತಿ ಎತ್ತಂಗಡಿ…ಕ್ರಿಮಿನಲ್ ಪ್ರಕರಣದಲ್ಲಿ ಭಾಗಿ ಆರೋಪ ಹಿನ್ನಲೆ…ಮಾತೃ ಇಲಾಖೆಗೆ ಹಿಂದಿರುಗುವಂತೆ ಸೂಚನೆ…ಸೇವೆಯಿಂದ ಬಿಡುಗಡೆ ಮಾಡಲು ಎಂಡಿಎ ಮೀನಾಮೇಷ…

MDA ವಿಶೇಷ ಭೂ ಸ್ವಾಧೀನ ಇಲಾಖೆ ವ್ಯವಸ್ಥಾಪಕಿ ಬಿ.ಶೃತಿ ಎತ್ತಂಗಡಿ…ಕ್ರಿಮಿನಲ್ ಪ್ರಕರಣದಲ್ಲಿ…

MDA ವಿಶೇಷ ಭೂ ಸ್ವಾಧೀನ ಇಲಾಖೆ ವ್ಯವಸ್ಥಾಪಕಿ ಬಿ.ಶೃತಿ ಎತ್ತಂಗಡಿ…ಕ್ರಿಮಿನಲ್ ಪ್ರಕರಣದಲ್ಲಿ ಭಾಗಿ ಆರೋಪ ಹಿನ್ನಲೆ…ಮಾತೃ ಇಲಾಖೆಗೆ ಹಿಂದಿರುಗುವಂತೆ ಸೂಚನೆ…ಸೇವೆಯಿಂದ ಬಿಡುಗಡೆ ಮಾಡಲು ಎಂಡಿಎ ಮೀನಾಮೇಷ… ಮೈಸೂರು,ಮಾ10,Tv10 ಕನ್ನಡ…

Leave a Reply

Your email address will not be published. Required fields are marked *