ಅಶ್ಲೀಲ ಫೋಟೋ ಕ್ರಿಯೇಟ್ ಮಾಡಿ ಅತಿಥಿ ಉಪನ್ಯಾಸಕನಿಗೆ ಬ್ಲಾಕ್ ಮೇಲ್…ಸೆನ್ ಪೊಲೀಸ್ ಠಾಣೆಗೆ ದೂರು…

ಮೈಸೂರು,ಜೂ1,Tv10 ಕನ್ನಡ
ಆನ್ ಲೈನ್ ಆಪ್ ಗಳಲ್ಲಿ ಲೋನ್ ಪಡೆಯುವ ಪ್ಲಾನ್ ಹಾಕಿದ್ದೀರಾ ಹಾಗಿದ್ರೆ ಹುಷಾರ್.ನೀವು ಬ್ಲಾಕ್ ಮೇಲ್ ಗೆ ಒಳಗಾಗೋದು ಖಚಿತ.ಮೈಸೂರಿನ ಅತಿಥಿ ಉಪನ್ಯಾಸಕರೊಬ್ಬರಿಗೆ ಇಂತಹ ಕಹಿ ಘಟನೆ ನಡೆದು ರಕ್ಷಣೆಗಾಗಿ ಸೆನ್ ಪೊಲೀಸರ ಮೊರೆ ಹೋಗಿದ್ದಾರೆ.ಮಾನಸಗಂಗೋತ್ರಿಯಲ್ಲಿ ಅತಿಥಿ ಉಪನ್ಯಾಸಕರಾಗಿರುವ ಚಂದ್ರಗುಪ್ತ ರವರಿಗೆ ಇಂತಹ ಕಹಿ ಘಟನೆ ನಡೆದಿದೆ.ಸೂಪರ್ ಲೋನ್ ಆಪ್ ನಲ್ಲಿ ಸಾಲ ಪಡೆದ ಚಂದ್ರಗುಪ್ತ ರವರನ್ನ ಬ್ಲಾಕ್ ಮೇಲ್ ಮಾಡಿ ಹಣ ಕಸಿಯುವ ಯತ್ನ ನಡೆಸಿದ ಕಿಡಿಗೇಡಿಗಳಿಗೆ ಸೆನ್ ಪೊಲೀಸರು ಬ್ರೇಕ್ ಹಾಕಿದ್ದಾರೆ.ಕೇವಲ ಮೂರು ಸಾವಿರ ಸಾಲ ಪಾಡೆಯಲು ಮುಂದಾದ ಚಂದ್ರಗುಪ್ತ ಇನ್ನಿಲ್ಲದ ಕಿರಿ ಕಿರಿ ಅನುಭವಿಸಿದ್ದಾರೆ.ಮೂರು ಸಾವಿರ ಸಾಲಕ್ಕಾಗಿ ಆಪ್ ನವರು ಕೇಳಿದ ದಾಖಲೆಗಳನ್ನ ಕೊಟ್ಟಿದ್ದಾರೆ.ದಾಖಲೆ ಕೊಟ್ಟ ಮರುಕ್ಷಣವೇ ಮೇ 20 ರಂದು ಮೂರು ಸಾವಿರ ಬದಲಾಗಿ ಕೇವಲ 1800 ರೂ ಜಮಾ ಮಾಡಿದ್ದಾರೆ.ಜಮಾ ಮಾಡಿದ ಏಳು ದಿನಗಳಿಗೆ ಅವಧಿ ಮುಗಿದಿದೆ ಹಣ ಹಿಂದಿರುಗಿಸಬೇಕೆಂದು ಮೆಸೇಜ್ ಹಾಕಿದ್ದಾರೆ.1800 ರೂ ಪಾವತಿಸಿದ ನಂತರ ಮತ್ತೆ ಮತ್ತೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ.ಪಡೆದ 1800 ಸಾಲಕ್ಕೆ ಮೂರು ಸಾವಿರ ಪಾವತಿಸಿದ್ದರೂ ಮತ್ತಷ್ಟು ಹಣಕ್ಕಾಗಿ ಒತ್ತಾಯಿಸಿದ್ದಾರೆ.ಹಣ ಕೊಡಲು ನಿರಾಕರಿಸಿದಾಗ ಚಂದ್ರಗುಪ್ತ ರವರ ಅಕೌಂಟ್ ಹ್ಯಾಕ್ ಮಾಡಿ ಸಂಪೂರ್ಣ ಮಾಹಿತಿ ಕಲೆ ಹಾಕಿ ನಂತರ ಅಶ್ಲೀಲ ಫೋಟೋ ಒಂದನ್ನ ಕ್ರಿಯೇಟ್ ಮಾಡಿ ಸ್ನೇಹಿತರು ಹಾಗೂ ಸಂಭಂಧಿಕರಿಗೆ ರವಾನಿಸುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ.ಕೂಡಲೇ ಚಂದ್ರಗುಪ್ತ ರವರು ಮೈಸೂರು ನಗರದ ಸೆನ್ ಠಾಣೆ ಪೊಲೀಸರ ಮೊರೆ ಹೋಗಿ ದೂರು ನೀಡಿದ್ದಾರೆ.ಸೆನ್ ಪೊಲೀಸರ ಸಲಹೆ ಪಡೆದ ನಂತರ ಆಪ್ ನವರ ಬ್ಲಾಕ್ ಮೇಲ್ ನಿಂದ ಬಚಾವ್ ಆಗಿದ್ದಾರೆ.ಅನಾಮಧೇಯ ಆಪ್ ಗಳಲ್ಲಿ ಸಾಲ ಪಡೆಯುವ ಮುನ್ನ ಮುಂದಾಗುವ ಪ್ರಮಾದಗಳ ಬಗ್ಗೆ ಒಮ್ಮೆ ಚಿಂತಿಸುವುದು ಒಳಿತು…

Spread the love

Related post

ಸರ್ಕಾರಿ ಜಮೀನು ಒತ್ತುವರಿ ತೆರುವು…ತಾಲೂಕು ಆಡಳಿತದಿಂದ ಕಾರ್ಯಾಚರಣೆ…

ಸರ್ಕಾರಿ ಜಮೀನು ಒತ್ತುವರಿ ತೆರುವು…ತಾಲೂಕು ಆಡಳಿತದಿಂದ ಕಾರ್ಯಾಚರಣೆ…

ಮೈಸೂರು,ಜು26,Tv10ಕನ್ನಡ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡ ಖಾಸಗಿ ವ್ಯಕ್ತಿಗಳಿಗೆ ತಾಲೂಕು ಆಡಳಿತ ಚಾಟಿ ಬೀಸಿದೆ.ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾದ ರಸ್ತೆ ಹಾಗೂ ಕಟ್ಟಡಗಳನ್ನ ತೆರುವುಗೊಳಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಮೈಸೂರು ತಾಲೂಕು…

ದರ್ಶನ್ ಬಿಡುಗಡೆಗೆ ಪ್ರಾರ್ಥನೆ…ಭಾವಚಿತ್ರ ಹಿಡಿದು ಚಾಮುಂಡಿಬೆಟ್ಟ ಮೆಟ್ಟಿಲು ಹತ್ತಿದ ಅಭಿಮಾನಿಗಳು

… ಮೈಸೂರು,ಜು26,Tv10 ಕನ್ನಡp ಕೊಲೆ ಆರೋಪದ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗಾಗಿ ಅಭಿಮಾನಿಗಳು ಉತ್ಸುಕರಾಗಿ ಕಾಯುತ್ತಿದ್ದಾರೆ.ಆರೋಪದಿಂದ ನಿರ್ದೋಷಿಯಾಗಿ ಬರಲೆಂದು ಹಾರೈಸಿ ಮೂರನೇ ಆಷಾಢ ಶುಕ್ರವಾರವಾದ…
ಬೆಳ್ಳಂಬೆಳಗ್ಗೆ ಭೂಗಳ್ಳರಿಗೆ ಶಾಕ್…ಸರ್ಕಾರಿ ಜಾಗದಲ್ಲಿ ನಿರ್ಮಿಸಿದ ಕಟ್ಟಡ ನೆಲಸಮ…ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ…

ಬೆಳ್ಳಂಬೆಳಗ್ಗೆ ಭೂಗಳ್ಳರಿಗೆ ಶಾಕ್…ಸರ್ಕಾರಿ ಜಾಗದಲ್ಲಿ ನಿರ್ಮಿಸಿದ ಕಟ್ಟಡ ನೆಲಸಮ…ತಹಸೀಲ್ದಾರ್ ಮಹೇಶ್ ಕುಮಾರ್…

ಮೈಸೂರು,ಜು25,Tv10 ಕನ್ನಡಬೆಳ್ಳಂಬೆಳಗ್ಗೆ ಮೈಸೂರಿನಲ್ಲಿ ಭೂಗಳ್ಳರಿಗೆ ತಹಸೀಲ್ದಾರ್ ಮಹೇಶ್ ಕುಮಾರ್ ಶಾಕ್ ಕೊಟ್ಟಿದ್ದಾರೆ.ಸರ್ಕಾರಿ ಜಾಗವನ್ನ ಕಬಳಿಸಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನ ನಿರ್ಮಿಸಿದ್ದ ಖದೀಮರಿಗೆ ಚಾಟಿಬೀಸಿದ್ದಾರೆ.ಸುಮಾರು 10 ರಿಂದ 12 ವಾಣಿಜ್ಯ…

Leave a Reply

Your email address will not be published. Required fields are marked *