ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…
- TV10 Kannada Exclusive
- August 3, 2026
- No Comment
- 6
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…
ಹುಣಸೂರು,ಆ3,Tv10 ಕನ್ನಡ
ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ ತಂಡದ ಕಾರ್ಯಚರಣೆಗೆ ಟ್ರಾಪ್ ಆಗಿದ್ದಾರೆ.
5.50. ಲಕ್ಷ ರೂ ಹಣ ಪಡೆಯುವ ವೇಳೆ ಬಲೆಗೆ ಬಿದ್ದಿದ್ದಾರೆ.
ಗುಮಾಸ್ತ ಶಿವಕುಮಾರ್ ಮೂಲಕ ಹಣ ಪಡೆದಿದ್ದ ಕಾವ್ಯರಾಣಿ.
ಹೆಚ್ ಡಿ ಕೋಟೆ ತಾಲೂಕಿನ 4.5 ಎಕರೆ ಜಮೀನು ವಿಚಾರವಾಗಿ 10.50 ಲಕ್ಷಕ್ಕೆ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು.
5 ಲಕ್ಷ ಮುಂಗಡವಾಗಿ ಹಣ ಪಡೆದಿದ್ದರು.
ಕಂದಾಯ ಮೇಲ್ಮನವಿ ಇತ್ಯರ್ಥ ಪಡಿಸಲು ಬೇಡಿಗೆ ಇಟ್ಟಿದ್ದ ಕಾವ್ಯರಾಣಿ.ಮಧ್ಯಾಹ್ನ 5:50 ಲಕ್ಷ ಹಣವನ್ನ ಗುಮಾಸ್ತ ಶಿವಕುಮಾರ್ ಮೂಲಕ ಪಡೆದಿದ್ದರು.
ಹಣ ಪಡೆಯಲು ಗುಮಾಸ್ತನನ್ನ ಮನೆಗೆ ಕರೆದಿದ್ದರು.ಈ ವೇಳೆ ಲೋಕಾಯುಕ್ತ ಪೊಲೀಸರು
ದಾಳಿ ಮಾಡಿ ಗುಮಾಸ್ತನ ಸಮೇತ ಹಣ ವಶಕ್ಕೆ ಪಡೆದಿದ್ದಾರೆ.
ಎಸಿ ಕಚೇರಿಯಲ್ಲಿ ಹಾಗೂ ನಿವಾಸದಲ್ಲಿ ಕಡತಗಳ ಪರಿಶೀಲನೆ ನಡೆಯುತ್ತಿದೆ.
ಎಸಿ ಕಾವ್ಯರಾಣಿ, ಗುಮಾಸ್ತ ಶಿವಕುಮಾರ್ ಲೋಕಾಯುಕ್ತ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ…