ಹೊಸವರ್ಷಾಚರಣೆ…ಟೂರಿಸ್ಟ್ ಗಳ ಜೊತೆ ಸೌಜನ್ಯದಿಂದ ವರ್ತಿಸಿ…ಆಟೋಚಾಲಕರಿಗೆ ಖಾಕಿ ಎಚ್ಚರಿಕೆ…
- TV10 Kannada Exclusive
- December 29, 2023
- No Comment
- 246

ಮೈಸೂರು,ಡಿ29,Tv10 ಕನ್ನಡ

ಹೊಸವರ್ಷಾಚರಣೆ ಹಿನ್ನಲೆ ಆಟೋ ಚಾಲಕರಿಗೆ ಇಂದು ಮೈಸೂರು ನಗರ ಪೊಲೀಸರು ಪ್ರವಾಸಿಗರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಆಟೋ ಚಾಲಕರಿಗೆ ಕಿವಿಮಾತು

ಹೇಳಿದರು.ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮೈಸೂರಿನ ಪುರಭವನದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಪ್ರವಾಸಿ ಕೇಂದ್ರವಾದ ಸಾಂಸ್ಕೃತಿಕ ನಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.ಈ ವೇಳೆ ಯಾವುದೇ ರೀತಿ ತೊಂದರೆ ಆಗದಂತೆ ಎಚ್ಚರಿಕೆಯಿಂದ ವರ್ತಿಸಬೇಕೆಂದು ದೇವರಾಜ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ಸಲಹೆ ನೀಡಿದರು.ಅವಸರದಲ್ಲಿ ಪ್ರಯಾಣಿಕರು ಪದಾರ್ಥಗಳನ್ನ ಆಟೋದಲ್ಲಿ ಮರೆತರೆ ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಮನವಿ ಮಾಡಿದರು.ಪ್ರಾಮಾಣಿಕತೆ ಮರೆವ ಚಾಲಕರಿಗೆ ಬಹುಮಾನ ನೀಡಲಾಗುವುದೆಂದು ತಿಳಿಸಿದರು.ಆಟೋ ಚಾಲನೆ ಮಾಡುವಾಗ ಸಮವಸ್ತ್ರ ಧರಿಸುವುದು,ಮೀಟರ್ ಬಳಸುವುದು ಸೇರಿದಂತೆ ಸಂಚಾರಿ ನಿಯಮಗಳನ್ನ ಪಾಲಿಸುವಂತೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಲಷ್ಕರ್ ಠಾಣೆ ಇನ್ಸ್ಪೆಕ್ಟರ್ ಪ್ರಸಾದ್,ದೇವರಾಜ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್,ಆಲನಹಳ್ಳಿ ಠಾಣೆ ಇನ್ಸ್ಪೆಕ್ಟರ್ ಶ್ರೀಕಾಂತ್ ಹಾಗೂ ಪಿಎಸ್ಸೈ ಗಳಾದ ಆನಂದ್,ಜೈಕೀರ್ತಿ,ಪ್ರಭು ಭಾಗವಹಿಸಿ ಆಟೋ ಚಾಲಕರಿಗೆ ಸಲಹೆ ನೀಡಿದರು.
ನಗರ ಪೊಲೀಸ್ ಆಯುಕ್ತ ಡಾ
ಬಿ.ರಮೇಶ್,ಡಿಸಿಪಿ ಮುತ್ತುರಾಜ್ ಹಾಗೂ ಜಾಹ್ನವಿ ರವತ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು…