ಕೆ.ಆರ್.ನಗರ:ಜೋಡಿ ಕೊಲೆ ಪ್ರಕರಣ…21 ದಿನಗಳಾದರೂ ದೊರೆಯದ ಹಂತಕರ ಸುಳಿವು…ಮೃತರ ಮಾಹಿತಿಯೂ ಇಲ್ಲ…

  • Crime
  • January 10, 2024
  • No Comment
  • 315

ಕೆ.ಆರ್.ನಗರ,ಜ10,Tv10 ಕನ್ನಡ

ಕೆ.ಆರ್.ನಗರ ಸಾಗರಕಟ್ಟೆ ಹಿನ್ನೀರಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ದೊರೆತ ಇಬ್ಬರು ಯುವಕರ ಮೃತದೇಹ ಪ್ರಕರಣ ಕುರಿತಂತೆ ಪೊಲೀಸರಿಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.ಜೋಡಿ ಕೊಲೆ ಪ್ರಕರಣ ನಡೆದು 21 ದಿನಗಳಾದರೂ ಮೃತರು ಯಾರೆಂಬ ಮಾಹಿತಿಯೇ ದೊರೆತಿಲ್ಲ.ತಲೆನೋವಾಗಿರುವ ಪ್ರಕರಣದ ನಿಗೂಢ ರಹಸ್ಯ ಭೇಧಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾದ ಯುವಕರ ಶವದ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮಿಸ್ಸಿಂಗ್ ಕಂಪ್ಲೇಂಟ್ ಗಳು ಮೃತರ ಚಹರೆಗೆ ಹೋಲಿಕೆಯಾಗದಿರುವುದು ಪ್ರಕರಣದ ನಿಗೂಢತೆಯನ್ನ ಬಯಲಿಗೆಳೆಯಲು ಹಿನ್ನಡೆಯಾಗಿದೆ.ಸಧ್ಯದ ಪೊಲೀಸರ ತನಿಖೆಯಲ್ಲಿ ಮೃತರು ಹೊರರಾಜ್ಯದವರು ಇರಬಹುದೆಂದು ಶಂಕಿಸಿದ್ದಾರೆ.ಮೃತರ ಮಾಹಿತಿಯೇ ದೊರೆಯದ ಕಾರಣ ಹಂತಕರ ಪತ್ತೆ ಮತ್ತಷ್ಟು ಕಗ್ಗಂಟಾಗಿದೆ.ಯುವಕರ ಮಾಹಿತಿ ಪತ್ತೆಗೆ ಜಿಲ್ಲಾ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.ಹೀಗಿದ್ದೂ ಯುವಕರ ಮಾಹಿತಿ ಪತ್ತೆ ವಿಳಂಬವಾಗಿದೆ.ಮೃತದೇಹವೊಂದರ ಕೈ ಮೇಲೆ VR POSTER 4B LEGEND ಎಂದು ಉಲ್ಲೇಖವಿರುವ ಹಚ್ಚೆ ಕಂಡು ಬಂದಿದೆ.ಮೃತರ ಬಗ್ಗೆ ಮಾಹಿತಿ ತಿಳಿದಲ್ಲಿ ಕೆ.ಆರ್.ನಗರ ಠಾಣೆ ಪೊಲೀಸರಿಗಾಗಲಿ ಅಥವಾ ಜಿಲ್ಲಾ ಪೊಲೀಸರಿಗೆ ತಿಳಿಸಬಹುದಾಗಿದೆ…

Spread the love

Related post

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…
ಮೈಸೂರು ಪೊಲೀಸ್ ಅಲರ್ಟ್…ರೌಡಿ ಪ್ರತಿಬಂಧಕ ದಳದಿಂದ ವಿಶೇಷ ಕಾರ್ಯಾಚರಣೆ…ಕಾನೂನು ಬಾಹಿರ ಚಟುವಟಿಕೆಗೆ ಬ್ರೇಕ್…400 ಕ್ಕೂ ಹೆಚ್ಚು ಪ್ರಕರಣ ದಾಖಲು…

ಮೈಸೂರು ಪೊಲೀಸ್ ಅಲರ್ಟ್…ರೌಡಿ ಪ್ರತಿಬಂಧಕ ದಳದಿಂದ ವಿಶೇಷ ಕಾರ್ಯಾಚರಣೆ…ಕಾನೂನು ಬಾಹಿರ ಚಟುವಟಿಕೆಗೆ…

ಮೈಸೂರು,ಅ12,Tv10 ಕನ್ನಡ ಇತ್ತೀಚೆಗೆ ನಡೆದ ಭೀಕರ ಕೊಲೆ ರೇಪ್ ಅಂಡ್ ಮರ್ಡರ್ ಮೈಸೂರು ಪೊಲೀಸರ ಕಾರ್ಯಚಟುವಟಿಕೆಯನ್ನ ಪ್ರಶ್ನಿಸುವಂತೆ ಮಾಡಿದೆ.ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸ್ ಪಡೆ ಸನ್ನದ್ದಾಗಿ…

Leave a Reply

Your email address will not be published. Required fields are marked *