Tv10 ಕನ್ನಡ ನ್ಯೂಸ್ ಫಲಶೃತಿ…ಅಕ್ರಮ ಕಟ್ಟಡಗಳ ತೆರುವು…ವರದಿ ಮಾಡಿದ 24 ಗಂಟೆ ಒಳಗೆ ಕ್ರಮ…
- TV10 Kannada Exclusive
- February 18, 2024
- No Comment
- 101
ಮೈಸೂರು,ಫೆ17,Tv10 ಕನ್ನಡ
ಮೈಸೂರು ತಾಲೂಕು ಕಚೇರಿ(ಮಿನಿ ವಿಧಾನಸೌಧ) ಹಿಂಭಾಗ ನಿರ್ಮಾಣವಾಗಿದ್ದ ಅಕ್ರಮ ಕಟ್ಟಡಗಳನ್ಮ ಜಿಲ್ಲಾಡಳಿತ ತೆರುವುಗೊಳಿಸಿದೆ.ಅಕ್ರಮ ಕಟ್ಟಡಗಳು ರಾಜಾರೋಷವಾಗಿ ಎದ್ದು ನಿಂತಿರುವ ಬಗ್ಗೆ Tv10 ಕನ್ನಡ ಸುದ್ದಿ ವಾಹಿನಿ ನಿನ್ನೆ ಪ್ರಸಾರ ಮಾಡಿತ್ತು.ಈ ಬಗ್ಗೆ ಎಚ್ಚೆತ್ತ ಜಿಲ್ಲಾಡಳಿತ ಕೇವಲ 24 ಗಂಟೆಯೊಳಗೆ ಕ್ರಮ ಕೈಗೊಂಡಿದೆ.ಜಿಲ್ಲಾಧಿಕಾರಿ
ಡಾ.ಕೆ.ವಿ.ರಾಜೇಂದ್ರ ಆದೇಶದ ಮೇರೆಗೆ ಮೈಸೂರು ತಾಲೂಕು ತಹಸೀಲ್ದಾರ್ ಮಹೇಶ್ ಕುಮಾರ್, ರೆವಿನ್ಯೂ ಇನ್ಸ್ಪೆಕ್ಟರ್ ರಾಘವೇಂದ್ರ ನಾಯಕ್,ಗ್ರಾಮ ಆಡಳಿತಾಧಿಕಾರಿ ಮಹೇಶ್ ,ನಾಗೇಶ್ ಕುಮಾರ್,ಅಜೀಮ್ ಖಾನ್ ಮೈಸೂರು ಯುಪಿಆರ್ ನ ತಾಲೂಕು ಸರ್ವೆಯರ್ ಸುರೇಶ್ ರವರು ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳನ್ನ ತೆರುವುಗೊಳಿಸಿ ತಾಲೂಕು ಆಡಳಿತದ ವಶಕ್ಕೆ ಪಡೆದಿದ್ದಾರೆ.ಇದು Tv10 ಕನ್ನಡ ಸುದ್ದಿ ವಾಹಿನಿಯ ಇಂಪ್ಯಾಕ್ಟ್…