ಭೂಗಳ್ಳರಿಗೆ ಬಿಸಿ…ಜೆಸಿಬಿ ಘರ್ಜನೆ…140 ಕೋಟಿ ಮೌಲ್ಯದ ಆಸ್ತಿ ಮೈಸೂರು ಅಭಿವೃದ್ದಿ ಪ್ರಾಧಿಕಾರದ ವಶಕ್ಕೆ…
- TV10 Kannada Exclusive
- February 7, 2026
- No Comment
- 44


ಭೂಗಳ್ಳರಿಗೆ ಬಿಸಿ…ಜೆಸಿಬಿ ಘರ್ಜನೆ…140 ಕೋಟಿ ಮೌಲ್ಯದ ಆಸ್ತಿ ಮೈಸೂರು ಅಭಿವೃದ್ದಿ ಪ್ರಾಧಿಕಾರದ ವಶಕ್ಕೆ…

ಮೈಸೂರು,ಫೆ7,Tv10 ಕನ್ನಡ
ಬೆಳ್ಳಬೆಳಗ್ಗೆ ಮೈಸೂರು ಅಭಿವೃದ್ದ ಪ್ರಾಧಿಕಾರ ಭೂಗಳ್ಳರಿಗೆ ಬಿಸಿ ಮುಟ್ಟಿಸಿದೆ.ಮೈಸೂರು ತಾಲೂಕು ಕಸಬ ಹೋಬಳಿ ಹಿನಕಲ್ ಗ್ರಾಮ ಸರ್ವೆ ನಂ 264 ರ ವಿಜಯನಗರ 3 ನೇ ಹಂತದಲ್ಲಿ ಒತ್ತುವರಿ ಮಾಡಿಕೊಂಡಿದ್ದ 140 ಕೋಟಿ ಮೌಲ್ಯದ 7 ಎಕ್ರೆ ಜಮೀನು ವಶಪಡಿಸಿಕೊಂಡಿದ್ದಾರೆ.ಪ್ರಾಧಿಕಾರದ ಆಯುಕ್ತ ಕೆ.ಆರ್.ರಕ್ಷಿತ್ ನೇತೃತ್ವದಲ್ಲಿ ವಿಜಯನಗರ ಠಾಣೆ ಪೊಲೀಸರ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಿ ತಮ್ಮ ಆಸ್ತಿಯನ್ನ ರಕ್ಷಿಸಿದ್ದಾರೆ.ಪ್ರಾಧಿಕಾರದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಶೆಡ್ ಗಳನ್ನ ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದ್ದಾರೆ.ಕಾರ್ಯಾಚರಣೆ ವೇಳೆ ವಿರೋಧ ವ್ಯಕ್ತವಾದರೂ ಲೆಕ್ಕಿಸದೆ ಆಸ್ತಿ ರಕ್ಷಣೆಗೆ ಆಧ್ಯತೆ ನೀಡಲಾಗಿದೆ…