ಕಾಮಗಾರಿ ಬಿಲ್ ಗಾಗಿ ಕೆರೆಯ ಹೆಸರನ್ನೇ ಬದಲಿಸಿದ ಪ್ರಕರಣ …ಮೂವರು ಅಧಿಕಾರಿಗಳಿಂದ ಬಿಲ್ ಹಣ ವಸೂಲಿ ಮಾಡುವಂತೆ ಓಂಬಡ್ಸ್ ಮನ್ ಆದೇಶ…

ಹುಣಸೂರು,ಮಾ5,Tv10 ಕನ್ನಡ

ಕಾಮಗಾರಿ ಬಿಲ್ ಪಾವತಿಗಾಗಿ ಕೆರೆಯ ಹೆಸರನ್ನೇ ಬದಲಿಸಿದ ಪ್ರಕರಣಕ್ಕೆ ಓಂಬಡ್ಸ್ ಮನ್ ಅಧಿಕಾರಿಗಳು ಚಾಟಿ ಬೀಸಿದ್ದಾರೆ.ಬಿಲ್ ಪಾವತಿಸಿದ ಅಧಿಕಾರಿಗಳಿಂದ ವಸೂಲಿ ಮಾಡುವಂತೆ ಓಂಬುಡ್ಸ್ ಮೆನ್ ನ ಮಹಾತ್ಮಗಾಂಧಿ ನರೇಗಾ ಯೋಜನೆ ಅಧಿಕಾರಿ ಡಾ.ರಮೇಶ್ ರವರು ಆದೇಶಿಸಿದ್ದಾರೆ. ಮೂವರು ಅಧಿಕಾರಿಗಳು 1.12,497/- ರೂಗಳನ್ನ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲ ಖಾತೆಗೆ ಜಮಾ ಮಾಡಬೇಕಿದೆ.ಹುಲ್ಲುಕೆರೆ ಗ್ರಾಮ ಪಂಚಾಯ್ತಿ ಹಾಲಿ ಅಧ್ಯಕ್ಷ ಸತೀಶ್,ಪಾಂಚಾಯ್ತಿ ಅಭಿವೃದ್ದಿ ಅಧಿಕಾರಿ ರವಿ ಹಾಗೂ ತಾಂತ್ರಿಕ ಸಹಾಯಕ ಅಭಿಯಂತರ ನಂದ ಶ್ರೀನಿವಾಸ್ ರವರು ತಲಾ 37,499/ – ರೂ ಪಾವತಿಸಬೇಕಿದೆ.

ಹುಣಸೂರು ತಾಲೂಕು ಚಿಲ್ಕುಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.ಚಿಲ್ಕುಂದ ಗ್ರಾಮದ ತೊಂಡೆಕೆರೆ ಅಭಿವೃದ್ದಿಗಾಗಿ ಗುತ್ತಿಗೆದಾರನಿಗೆ ಕಾಮಗಾರಿ ಜವಾಬ್ದಾರಿ ನೀಡಲಾಗಿತ್ತು.ಆದರೆ ತೊಂಡೆಕೆರೆ ಬದಲು ಹುಲ್ಲುಕೆರೆಯಲ್ಲಿ ಕಾಮಗಾರಿ ನಡೆಸಿದ್ದಾರೆ.ಈ ವಿಚಾರ ಗ್ರಾಮದ ಮುಖಂಡ ಪ್ರೇಂಕುಮಾರ್ ಎಂಬುವರು ಬೆಳಕಿಗೆ ತಂದಿದ್ದರು.ತಮ್ಮ ತಪ್ಪನ್ನ ಮುಚ್ಚಿಕೊಳ್ಳಲು ಹುಲಿಕೆರೆಗೆ ತೊಂಡೆಕೆರೆ ಎಂಬ ನಾಮಫಲಕ ಅಳವಡಿಸಿದ್ದ ಅಧಿಕಾರಿಗಳು ಮತ್ತೊಂದು ಎಡವಟ್ಟು ಮಾಡಿದ್ದರು.ಸರ್ಕಾರಿ ದಾಖಲೆಗಳ ಪ್ರಕಾರ ಸಧ್ಯ ಅಳವಡಿಸಿರುವ ತೊಂಡೆಕೆರೆ ಪ್ರದೇಶ ಹುಲ್ಲುಕೆರೆ ಎಂದು ತೋರಿಸುತ್ತಿದೆ.ಸ್ಥಳೀಯರೂ ಸಹ ಹುಲ್ಲುಕೆರೆ ಎಂದೇ ಹೇಳುತ್ತಿದ್ದಾರೆ.ಕೇವಲ ಬಿಲ್ ಪಾವತಿಗಾಗಿ ಕೆರೆಯ ಹೆಸರನ್ನ ಬದಲಿಸಿರುವ ಭೂಪರಿಗೆ ಶಿಕ್ಷೆ ಆಗಬೇಕೆಂದು ಪ್ರೇಂಕುಮಾರ್ ರವರು ಮೈಸೂರಿನ ಜಿಲ್ಲಾ ಲಂಚಾಯತ್ ಕಚೇರಿಯಲ್ಲಿರುವ ಓಂಬುಡ್ಸ್ ಮನ್ ಗೆ ದೂರು ನೀಡಿದ್ದರು.ಈಗಾಗಲೇ ಈ ಅಕ್ರಮದ ಬಗ್ಗೆ ತನಿಖೆ ನಡೆಸುವುದಾಗಿ ತಾಲೂಕು ಇಓ ಮನು ರವರು ತಿಳಿಸಿದ್ದರು.ಸಧ್ಯ ಈ ಹಗರಣದ ಬಗ್ಗೆ ಫೆ21 ರಂದು ಓಂಬಡ್ಸ್ ಮನ್ ನಲ್ಲಿ ವಿಚಾರಣೆ ನಿಗದಿಯಾಗಿತ್ತು.ಕೇವಲ 1.12 ಲಕ್ಷ ಬಿಲ್ ಗಾಗಿ ಕೆರೆಯ ಹೆಸರನ್ನೇ ಬದಲಿಸಿದ ಭೂಪರ ಬಣ್ಣ ಬಯಲು ಮಾಡಲಾಗಿದೆ.ಮೂವರು ಅಧಿಕಾರಿಗಳಿಂದ ಹಣ ವಸೂಲಿ ಮಾಡುವಂತೆ ಆದೇಶಿಸಲಾಗಿದೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *