ಕಾನೂನು ಬಾಹಿರ ತಂತ್ರಜ್ಞಾನ ಬಳಕೆ…ಪೊಲೀಸ್ ಕಮೀಷನರ್ ಮೊಬೈಲ್ ನಂಬರ್ ನಕಲಿ ಮಾಡಿದ ಭೂಪ…ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ಕಾನೂನು ಬಾಹಿರ ತಂತ್ರಜ್ಞಾನ ಬಳಕೆ…ಪೊಲೀಸ್ ಕಮೀಷನರ್ ಮೊಬೈಲ್ ನಂಬರ್ ನಕಲಿ ಮಾಡಿದ ಭೂಪ…ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ಮೈಸೂರು,ನ14,Tv10 ಕನ್ನಡ

ಮೈಸೂರು ನಗರ ಪೊಲೀಸ್ ಆಯುಕ್ತರ ಮೊಬೈಲ್ ನಂಬರ್ ಅನ್ನು ಕಾನೂನು ಬಾಹಿರ ತಂತ್ರಜ್ಞಾನ ಬಳಸಿ ವ್ಯಕ್ತಿಯೊಬ್ಬರಿಗೆ ಕಾಲ್ ಮರ್ಜ್ ಮಾಡುವ ಮೂಲಕ ಧಂಕಿ ಹಾಕಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.ಪೊಲೀಸ್ ಕಮೀಷನರ್ ಮೊಬೈಲ್ ಸಂಖ್ಯೆ ಡಿಸ್ಲ್ಲೇ ಆಗುವಂತೆ ನಕಲಿ ಕರೆ ಮಾಡಿ ಧಂಕಿ ಹಾಕಿದ ಐನಾತಿ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಮಹಮದ್ ಸೈಫ್ ಎಂಬಾತನ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.ಬನ್ನಿಮಂಟಪದ ನಿವಾಸಿ ಸಮೀರ್ ಹುಸೇನ್ ಎಂಬುವರು ಪ್ರಕರಣ ದಾಖಲಿಸಿದ್ದಾರೆ.

ಸಮೀರ್ ಹುಸೇನ್ ರವರು ಸೆಪ್ಟೆಂಬರ್ ನಲ್ಲಿ ಮಹಮದ್ ಸೈಫ್ ರಿಂದ ಆಡಿಕ್ಯೂ4 ಕಾರ್ ಅನ್ನು 8 ಲಕ್ಷಕ್ಕೆ ಖರೀದಿಸಿದ್ದರು. ಮುಂಗಡವಾಗಿ ಅಬ್ದುಲ್ ನಸೀರ್ ಎಂಬುವರ ಮೂಲಕ 5 ಲಕ್ಷ ಪಾವತಿಸಿದ್ದರು.ಒಪ್ಪಂದದಂತೆ ಮುಂಗಡ ಹಣ ಪಡೆದ ಮಹಮದ್ ಸೈಫ್ ಕಾರು ನೀಡಲಿಲ್ಲ.ಹಲವು ಬಾರಿ ಕಾರು ನೀಡುವಂತೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ.ಕಾರ್ ಕೊಡು ಅಥವಾ ಹಣ ಹಿಂದಿರುಗಿಸಬೇಕೆಂದು ಸಮೀರ್ ಹುಸೇನ್ ಒತ್ತಡ ಹೇರಿದಾಗ ನನಗೆ ಪೊಲೀಸ್ ಕಮೀಷನರ್ ಗೊತ್ತು ಅವರಿಂದ ಫೋನ್ ಮಾಡಿಸ್ತೀನಿ ಅಂತ ಧಂಕಿ ಹಾಕಿದ.ಇದರಂತೆ ನವೆಂಬರ್ 7 ರಂದು ಪೊಲೀಸ್ ಕಮೀಷನರ್ ರವರ ಮೊಬೈಲ್ ನಂಬರ್ 9480802201 ರಿಂದ ಸಮೀರ್ ಹುಸೇನ್ ರವರಿಗೆ ಕರೆಬಂದಿದೆ.ರಿಸೀವ್ ಮಾಡಿದಾಗ ಬಿಪ್ ಸೌಂಡ್ ಬಂದಿದೆ.ನಂತರ ಬೇರೆ ಕಾಲ್ ಜೊತೆ ಮರ್ಜ್ ಆಗಿದೆ.ಮೊಬೈಲ್ ನಲ್ಲಿ ಮೇಡಂ ಮಾತನಾಡಿದ್ದಾರೆ.ಹೇಳಿ ಮೇಡಂ ಎಂದು ಸಮೀರ್ ಹುಸೇನ್ ಹೇಳಿದ್ದಾರೆ.ನಾನು ಕಾಲ್ ಮಾಡಿಲ್ಲ ನೀವೇ ಮಾಡಿದ್ದು ಹೇಳಿ ಅಂತ ಮೇಡಂ ತಿಳಿಸಿದ್ದಾರೆ.ನಂತರ ಕಾಲ್ ಕಟ್ ಆಗಿದೆ.ಕಾನೂನು ಬಾಹಿರ ತಂತ್ರಜ್ಞಾನ ಬಳಸಿ ಪೊಲೀಸ್ ಕಮೀಷನರ್ ಮೊಬೈಲ್ ಸಂಖ್ಯೆ ಡಿಸ್ಪ್ಲೇ ಆಗುವಂತೆ ನಕಲಿ ಮಾಡಿ ಮಹಮದ್ ಸೈಫ್ ಬೆದರಿಕೆ ಹಾಕಿದ್ದಾನೆಂದು ಆರೋಪಿಸಿರುವ ಸಮೀರ್ ಹುಸೇನ್ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪೊಲೀಸ್ ಕಮೀಷನರ್ ಮೊಬೈಲ್ ಸಂಖ್ಯೆಯನ್ನ ನಕಲಿಯಾಗಿ ಬಳಸಿ ಬೆದರಿಕೆ ಹಾಕಿ ತನಗೆ ಕಾರು ನೀಡದೆ ಹಣ ಹಿಂದಿರುಗಿಸದೆ ವಂಚಿಸಿರುವ ಮಹಮದ್ ಸೈಫ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಮಂಡ್ಯ,ಜೂ30,Tv10 ಕನ್ನಡ ಕೆ.ಆರ್.ಎಸ್.ಡ್ಯಾಂ ಒಡಲನ್ನು ತುಂಬಿದ ಕಾವೇರಿ ಮಾತೆಗೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.ಈ ಹಿನ್ನೆಲೆ ಕೆ ಆರ್.ಎಸ್.ನವವಧುವಿನಂತೆ ಶೃಂಗಾರಗೊಂಡಿದೆ.ಕನ್ನಡ ಬಾವುಟದಿಂದ ಕಂಗೊಳಿಸುತ್ತಿದೆ.ಹಸಿರು ತೋರಣ, ಹೂಗಳ ಮೂಲಕ…
ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…

Leave a Reply

Your email address will not be published. Required fields are marked *