ಮೊದಲ ಪತ್ನಿ ಇದ್ದರೂ ಲೇಡೀಸ್ ಪಿಜಿ ಓನರ್ ನ ಬಲೆಗೆ ಬೀಳಿಸಿದ…ಗರ್ಭಿಣಿ ಮಾಡಿ 9 ಲಕ್ಷಕ್ಕೆ ಉಂಡನಾಮ…ಉಂಡೂ ಹೋದ ಕೊಂಡೂ ಹೋದ ಐನಾತಿ ವಿರುದ್ದ FIR ದಾಖಲು

ಮೊದಲ ಪತ್ನಿ ಇದ್ದರೂ ಲೇಡೀಸ್ ಪಿಜಿ ಓನರ್ ನ ಬಲೆಗೆ ಬೀಳಿಸಿದ…ಗರ್ಭಿಣಿ ಮಾಡಿ 9 ಲಕ್ಷಕ್ಕೆ ಉಂಡನಾಮ…ಉಂಡೂ ಹೋದ ಕೊಂಡೂ ಹೋದ ಐನಾತಿ ವಿರುದ್ದ FIR ದಾಖಲು

ಮೈಸೂರು,ನ19,Tv10 ಕನ್ನಡ

ಮೊದಲನೇ ಹೆಂಡತಿ ಜೊತೆ ಸಂಸಾರ ನಡೆಸುತ್ತಿದ್ದರೂ ಲೇಡೀಸ್ ಪಿಜಿ ಓನರ್ ಜೊತೆ ಪ್ರೀತಿಸುವ ನಾಟಕವಾಡಿ ಮದುವೆ ಮಾಡಿಕೊಂಡ ಭೂಪ ಆಕೆಯನ್ನ ಗರ್ಭಿಣಿ ಮಾಡಿ ಸುಮಾರು 9 ಲಕ್ಷ ಹಣಕ್ಕೆ ಉಂಡೆನಾಮ ಇಟ್ಟು ವಂಚಿಸಿದ ಪ್ರಕರಣವೊಂದು ಮೈಸೂರಿನ ವಿವಿ ಮೊಹಲ್ಲಾದಲ್ಲಿ ಬೆಳಕಿಗೆ ಬಂದಿದೆ.ಈ ಸಂಭಂಧ ವಂಚನೆಗೆ ಇಳಗಾದ ಗೃಹಿಣಿ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪತಿ,ಅತ್ತೆ,ಮಾವನ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು ನಿವಾಸಿ ಭರತ್ ಗೌಡ ಹಾಗೂ ಈತನ ತಂದೆ ಸುರೇಶ್ ತಾಯಿ ಅಂಕತಲತಾ ಎಂಬುವರ ವಿರುದ್ದ ವಂಚನೆಗೆ ಒಳಗಾದ ಗೃಹಿಣಿ ಪ್ರಕರಣ ದಾಖಲಿಸಿದ್ದಾರೆ.
ಗೋಕುಲಂ ನಲ್ಲಿ ಲೇಡೀಸ್ ಪಿಜಿ ನಡೆಸುತ್ತಿರುವ ಭಾಗ್ಯಲಕ್ಷ್ಮಿ (31) ವಂಚನೆಗೆ ಒಳಗಾದವರು.2022 ರಲ್ಲಿ ಭರತ್ ಗೌಡ(29) ಇನ್ಸ್ಟಾಗ್ರಾಂ ಮೂಲಕ ಭಾಗ್ಯಲಕ್ಷ್ಮಿಯನ್ನ ಪರಿಚಯ ಮಾಡಿಕೊಂಡಿದ್ದಾನೆ.ತನಗಿಂತ ಎರಡು ವರ್ಷ ದೊಡ್ಡವರಾದ ಭಾಗ್ಯಲಕ್ಷ್ಮಿ ಜೊತೆ ಪ್ರೀತಿಯ ನಾಟಕವಾಡಿ ಮದುವೆ ಆಗುವುದಾಗಿ ತಿಳಿಸಿದ್ದಾನೆ.ಈ ಹಿಂದೆ ಮೋನಿಕಾ ಎಂಬುವಳ ಜೊತೆ ಮದುವೆ ಆಗಿದ್ದೇನೆ ಕಾರಣಾಂತರದಿಂದ ಡೈವೋರ್ಸ್ ನೀಡಿದ್ದೇನೆ ಎಂದು ನಂಬಿಸಿದ್ದಾನೆ.ಈ ಬಗ್ಗೆ ನ್ಯಾಯಾಲಯದ ತೀರ್ಪಿನ ದಾಖಲೆ ಕೊಡುವುದಾಗಿ ನಂಬಿಸಿದ್ದಾನೆ.ಅಲ್ಲದೆ ಭರತ್ ಗೌಡ ತಂದೆ ಸುರೇಶ್,ತಾಯಿ ಅಂಕಿತ ಲತಾ ಸಹ ಸಾಥ್ ನೀಡಿ ಮೊದಲ ಪತ್ನಿಗೆ ಡೈವೋರ್ಸ್ ಆಗಿದೆ ಎಂದು ಸುಳ್ಳು ಹೇಳಿ ನಂಬಿಸಿದ್ದಾರೆ.ನಯವಂಚಕರ ಮಾತನ್ನ ನಂಬಿದ ಭಾಗ್ಯಲಕ್ಷ್ಮಿ ಮದುವೆಗೆ ಒಪ್ಪಿದ್ದಾರೆ.ಸ್ನೇಹಿತರು,ಸಂಭಂಧಿಕರು ಹಾಗೂ ಪೋಷಕರ ಸಮಕ್ಷಮದಲ್ಲಿ 2023 ರಲ್ಲಿ ಖಾಸಗಿ ಫಂಕ್ಷನ್ ಹಾಲ್ ನಲ್ಲಿ ಮದುವೆ ನಡೆದಿದೆ.ಈ ವೇಳೆ ಬುಸಿನೆಸ್ ಗಾಗಿ 10 ಲಕ್ಷ ಕ್ಯಾಶ್ ಹಾಗೂ 100 ಗ್ರಾಂ ಚಿನ್ನ ವರದಕ್ಷಿಣೆಗೆ ಡಿಮ್ಯಾಂಡ್ ಮಾಡಿದ್ದಾರೆ.ಮದುವೆ ನಂತರ ಕೊಡುವುದಾಗಿ ಭಾಗ್ಯಲಕ್ಷ್ಮಿ ಹೆತ್ತವರು ಒಪ್ಪಿದ್ದಾರೆ.ಮದುವೆ ಆದ ನಂತರ ಹಣಕ್ಕಾಗಿ ಭರತ್ ಗೌಡ ಪೀಡಿಸಿದ್ದಾನೆ.ತಂದೆ ತಾಯಿಯನ್ನ ಒಪ್ಪಿಸಿದ ಭಾಗ್ಯಲಕ್ಷ್ಮಿ 8 ಲಕ್ಷ ನೀಡಿ ಕಾರ್ ವಾಶಿಂಗ್ ಬುಸಿನೆಸ್ ಹಾಕಿಕೊಟ್ಟಿದ್ದಾರೆ.ಅಲ್ಲದೆ ಕ್ರೆಡಿಟ್ ಕಾರ್ಡ್ ನಿಂದ ಭರತ್ ಗೌಡ 1.25 ಲಕ್ಷ ಡ್ರಾ ಮಾಡಿಕೊಂಡಿದ್ದಾನೆ.ಈ ಮಧ್ಯೆ ಮೊದಲ ಪತ್ನಿ ಮೊನಿಕಾ ಮೆಸೇಜ್ ಮಾಡಿ ಭರತ್ ಗೌಡ ಮೋಸಗಾರ ಎಂದು ಎಚ್ಚರಿಕೆ ನೀಡಿದಾಗ ನಮ್ಮ ಸಂಸಾರ ಹಾಳು ಮಾಡುತ್ತಿದ್ದಾಳೆ ನಂಬಬೇಡ ಎಂದು ನಾಡಕವಾಡಿದ್ದಾನೆ.ನಂತರದ ದಿನಗಳಲ್ಲಿ ಭರತ್ ಗೌಡ ಬಣ್ಣ ಬಯಲಾಗಿದೆ.ಮೊನಿಕಾ ಜೊತೆ ನಂಟು ಉಳಿಸಿಕೊಂಡು ಡೈವೋರ್ಸ್ ನಾಟಕವಾಡಿ ತನ್ನನ್ನ ವಂಚಿಸಿರುವುದು ಭಾಗ್ಯಲಕ್ಷ್ಮಿ ಅವರಿಗೆ ಮನದಟ್ಟಾಗಿದೆ.ಈ ಬಗ್ಗೆ ಪ್ರಶ್ನಿಸಿದಾಗ ನಿನ್ನ ಜೊತೆ ದೈಹಿಕ ಸಂಭಂಧ ಬೆಳೆಸಿ ಆಸ್ತಿ ಲಪಟಾಯಿಸುವ ಉದ್ದೇಶದಿಂದ ಮಾಡಿರುವುದಾಗಿ ತಿಳಿಸಿದ್ದಾನೆ.ಅಲ್ಲದೆ ಕೊಲೆ ಮಾಡುವುದಾಗಿ ಹೆದರಿಸಿದ್ದಾನೆ.ನಯವಂಚಕನ ಮಾತಿಗೆ ಮರುಳಾದ ಭಾಗ್ಯಲಕ್ಷ್ಮಿ ಇದೀಗ ಗರ್ಭಿಣಿ.ಸುಳ್ಳು ಹೇಳಿ ವಂಚಿಸಿ ಗರ್ಭಿಣಿ ಮಾಡಿ ಹಣ ಲಪಟಾಯಿಸಿ ಮೋಸ ಮಾಡಿದ ಭರತ್ ಗೌಡ,ಸುರೇಶ್,ಅಂಕಿತಲತಾ ವಿರುದ್ದ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸುವಂತೆ ಭಾಗ್ಯಲಕ್ಷ್ಮಿ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ ಬಾಯ್ಸ್…ಅಭಿಮಾನಿಗಳ ಮುಖದ ಮೇಲೆ ರಾರಾಜಿಸಿದ ತ್ರಿವಣ ಧ್ವಜ…ಮೈಸೂರಿನಲ್ಲಿ ಹರಿದುಬಂದ ವಿಶಸ್ ಮಹಾಪೂರ…

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ…

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ ಬಾಯ್ಸ್…ಅಭಿಮಾನಿಗಳ ಮುಖದ ಮೇಲೆ ರಾರಾಜಿಸಿದ ತ್ರಿವಣ ಧ್ವಜ…ಮೈಸೂರಿನಲ್ಲಿ ಹರಿದುಬಂದ ವಿಶಸ್ ಮಹಾಪೂರ… ಮೈಸೂರು,ಮಾ8,Tv10 ಕನ್ನಡ ವಿಶ್ವಕಪ್…
ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ…

ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ…

ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ… ನಂಜನಗೂಡು,ಮಾ8,Tv10 ಕನ್ನಡ ನಂಜನಗೂಡು ಕಪಿಲಾ ನದಿ ಪಾತ್ರದ ಭಾರಿ ಮರಗಳ ಮಾರಣಹೋಮವಾಗಿದೆ.ಶ್ರೀಕಂಠೇಶ್ವರನ ದೇವಾಲಯ ಸಮೀಪ…
ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು ಮೀನಾಮೇಷ…ಸರ್ಕಾರದ ಪತ್ರಕ್ಕೂ ಡೋಂಟ್ ಕೇರ್…ಪ್ರಾಧಿಕಾರದ ಕಾನೂನು ಶಾಖೆ ಬಣ್ಣಬಯಲು…ಶಿಸ್ತುಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಪ್ರಾಧಿಕಾರಕ್ಕೆ ಖಡಕ್ ವಾರ್ನಿಂಗ್…

ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು…

ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು ಮೀನಾಮೇಷ…ಸರ್ಕಾರದ ಪತ್ರಕ್ಕೂ ಡೋಂಟ್ ಕೇರ್…ಪ್ರಾಧಿಕಾರದ ಕಾನೂನು ಶಾಖೆ ಬಣ್ಣಬಯಲು…ಶಿಸ್ತುಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಪ್ರಾಧಿಕಾರಕ್ಕೆ ಖಡಕ್…

Leave a Reply

Your email address will not be published. Required fields are marked *