ಮೊದಲ ಪತ್ನಿ ಇದ್ದರೂ ಲೇಡೀಸ್ ಪಿಜಿ ಓನರ್ ನ ಬಲೆಗೆ ಬೀಳಿಸಿದ…ಗರ್ಭಿಣಿ ಮಾಡಿ 9 ಲಕ್ಷಕ್ಕೆ ಉಂಡನಾಮ…ಉಂಡೂ ಹೋದ ಕೊಂಡೂ ಹೋದ ಐನಾತಿ ವಿರುದ್ದ FIR ದಾಖಲು

ಮೊದಲ ಪತ್ನಿ ಇದ್ದರೂ ಲೇಡೀಸ್ ಪಿಜಿ ಓನರ್ ನ ಬಲೆಗೆ ಬೀಳಿಸಿದ…ಗರ್ಭಿಣಿ ಮಾಡಿ 9 ಲಕ್ಷಕ್ಕೆ ಉಂಡನಾಮ…ಉಂಡೂ ಹೋದ ಕೊಂಡೂ ಹೋದ ಐನಾತಿ ವಿರುದ್ದ FIR ದಾಖಲು

ಮೈಸೂರು,ನ19,Tv10 ಕನ್ನಡ

ಮೊದಲನೇ ಹೆಂಡತಿ ಜೊತೆ ಸಂಸಾರ ನಡೆಸುತ್ತಿದ್ದರೂ ಲೇಡೀಸ್ ಪಿಜಿ ಓನರ್ ಜೊತೆ ಪ್ರೀತಿಸುವ ನಾಟಕವಾಡಿ ಮದುವೆ ಮಾಡಿಕೊಂಡ ಭೂಪ ಆಕೆಯನ್ನ ಗರ್ಭಿಣಿ ಮಾಡಿ ಸುಮಾರು 9 ಲಕ್ಷ ಹಣಕ್ಕೆ ಉಂಡೆನಾಮ ಇಟ್ಟು ವಂಚಿಸಿದ ಪ್ರಕರಣವೊಂದು ಮೈಸೂರಿನ ವಿವಿ ಮೊಹಲ್ಲಾದಲ್ಲಿ ಬೆಳಕಿಗೆ ಬಂದಿದೆ.ಈ ಸಂಭಂಧ ವಂಚನೆಗೆ ಇಳಗಾದ ಗೃಹಿಣಿ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪತಿ,ಅತ್ತೆ,ಮಾವನ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು ನಿವಾಸಿ ಭರತ್ ಗೌಡ ಹಾಗೂ ಈತನ ತಂದೆ ಸುರೇಶ್ ತಾಯಿ ಅಂಕತಲತಾ ಎಂಬುವರ ವಿರುದ್ದ ವಂಚನೆಗೆ ಒಳಗಾದ ಗೃಹಿಣಿ ಪ್ರಕರಣ ದಾಖಲಿಸಿದ್ದಾರೆ.
ಗೋಕುಲಂ ನಲ್ಲಿ ಲೇಡೀಸ್ ಪಿಜಿ ನಡೆಸುತ್ತಿರುವ ಭಾಗ್ಯಲಕ್ಷ್ಮಿ (31) ವಂಚನೆಗೆ ಒಳಗಾದವರು.2022 ರಲ್ಲಿ ಭರತ್ ಗೌಡ(29) ಇನ್ಸ್ಟಾಗ್ರಾಂ ಮೂಲಕ ಭಾಗ್ಯಲಕ್ಷ್ಮಿಯನ್ನ ಪರಿಚಯ ಮಾಡಿಕೊಂಡಿದ್ದಾನೆ.ತನಗಿಂತ ಎರಡು ವರ್ಷ ದೊಡ್ಡವರಾದ ಭಾಗ್ಯಲಕ್ಷ್ಮಿ ಜೊತೆ ಪ್ರೀತಿಯ ನಾಟಕವಾಡಿ ಮದುವೆ ಆಗುವುದಾಗಿ ತಿಳಿಸಿದ್ದಾನೆ.ಈ ಹಿಂದೆ ಮೋನಿಕಾ ಎಂಬುವಳ ಜೊತೆ ಮದುವೆ ಆಗಿದ್ದೇನೆ ಕಾರಣಾಂತರದಿಂದ ಡೈವೋರ್ಸ್ ನೀಡಿದ್ದೇನೆ ಎಂದು ನಂಬಿಸಿದ್ದಾನೆ.ಈ ಬಗ್ಗೆ ನ್ಯಾಯಾಲಯದ ತೀರ್ಪಿನ ದಾಖಲೆ ಕೊಡುವುದಾಗಿ ನಂಬಿಸಿದ್ದಾನೆ.ಅಲ್ಲದೆ ಭರತ್ ಗೌಡ ತಂದೆ ಸುರೇಶ್,ತಾಯಿ ಅಂಕಿತ ಲತಾ ಸಹ ಸಾಥ್ ನೀಡಿ ಮೊದಲ ಪತ್ನಿಗೆ ಡೈವೋರ್ಸ್ ಆಗಿದೆ ಎಂದು ಸುಳ್ಳು ಹೇಳಿ ನಂಬಿಸಿದ್ದಾರೆ.ನಯವಂಚಕರ ಮಾತನ್ನ ನಂಬಿದ ಭಾಗ್ಯಲಕ್ಷ್ಮಿ ಮದುವೆಗೆ ಒಪ್ಪಿದ್ದಾರೆ.ಸ್ನೇಹಿತರು,ಸಂಭಂಧಿಕರು ಹಾಗೂ ಪೋಷಕರ ಸಮಕ್ಷಮದಲ್ಲಿ 2023 ರಲ್ಲಿ ಖಾಸಗಿ ಫಂಕ್ಷನ್ ಹಾಲ್ ನಲ್ಲಿ ಮದುವೆ ನಡೆದಿದೆ.ಈ ವೇಳೆ ಬುಸಿನೆಸ್ ಗಾಗಿ 10 ಲಕ್ಷ ಕ್ಯಾಶ್ ಹಾಗೂ 100 ಗ್ರಾಂ ಚಿನ್ನ ವರದಕ್ಷಿಣೆಗೆ ಡಿಮ್ಯಾಂಡ್ ಮಾಡಿದ್ದಾರೆ.ಮದುವೆ ನಂತರ ಕೊಡುವುದಾಗಿ ಭಾಗ್ಯಲಕ್ಷ್ಮಿ ಹೆತ್ತವರು ಒಪ್ಪಿದ್ದಾರೆ.ಮದುವೆ ಆದ ನಂತರ ಹಣಕ್ಕಾಗಿ ಭರತ್ ಗೌಡ ಪೀಡಿಸಿದ್ದಾನೆ.ತಂದೆ ತಾಯಿಯನ್ನ ಒಪ್ಪಿಸಿದ ಭಾಗ್ಯಲಕ್ಷ್ಮಿ 8 ಲಕ್ಷ ನೀಡಿ ಕಾರ್ ವಾಶಿಂಗ್ ಬುಸಿನೆಸ್ ಹಾಕಿಕೊಟ್ಟಿದ್ದಾರೆ.ಅಲ್ಲದೆ ಕ್ರೆಡಿಟ್ ಕಾರ್ಡ್ ನಿಂದ ಭರತ್ ಗೌಡ 1.25 ಲಕ್ಷ ಡ್ರಾ ಮಾಡಿಕೊಂಡಿದ್ದಾನೆ.ಈ ಮಧ್ಯೆ ಮೊದಲ ಪತ್ನಿ ಮೊನಿಕಾ ಮೆಸೇಜ್ ಮಾಡಿ ಭರತ್ ಗೌಡ ಮೋಸಗಾರ ಎಂದು ಎಚ್ಚರಿಕೆ ನೀಡಿದಾಗ ನಮ್ಮ ಸಂಸಾರ ಹಾಳು ಮಾಡುತ್ತಿದ್ದಾಳೆ ನಂಬಬೇಡ ಎಂದು ನಾಡಕವಾಡಿದ್ದಾನೆ.ನಂತರದ ದಿನಗಳಲ್ಲಿ ಭರತ್ ಗೌಡ ಬಣ್ಣ ಬಯಲಾಗಿದೆ.ಮೊನಿಕಾ ಜೊತೆ ನಂಟು ಉಳಿಸಿಕೊಂಡು ಡೈವೋರ್ಸ್ ನಾಟಕವಾಡಿ ತನ್ನನ್ನ ವಂಚಿಸಿರುವುದು ಭಾಗ್ಯಲಕ್ಷ್ಮಿ ಅವರಿಗೆ ಮನದಟ್ಟಾಗಿದೆ.ಈ ಬಗ್ಗೆ ಪ್ರಶ್ನಿಸಿದಾಗ ನಿನ್ನ ಜೊತೆ ದೈಹಿಕ ಸಂಭಂಧ ಬೆಳೆಸಿ ಆಸ್ತಿ ಲಪಟಾಯಿಸುವ ಉದ್ದೇಶದಿಂದ ಮಾಡಿರುವುದಾಗಿ ತಿಳಿಸಿದ್ದಾನೆ.ಅಲ್ಲದೆ ಕೊಲೆ ಮಾಡುವುದಾಗಿ ಹೆದರಿಸಿದ್ದಾನೆ.ನಯವಂಚಕನ ಮಾತಿಗೆ ಮರುಳಾದ ಭಾಗ್ಯಲಕ್ಷ್ಮಿ ಇದೀಗ ಗರ್ಭಿಣಿ.ಸುಳ್ಳು ಹೇಳಿ ವಂಚಿಸಿ ಗರ್ಭಿಣಿ ಮಾಡಿ ಹಣ ಲಪಟಾಯಿಸಿ ಮೋಸ ಮಾಡಿದ ಭರತ್ ಗೌಡ,ಸುರೇಶ್,ಅಂಕಿತಲತಾ ವಿರುದ್ದ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸುವಂತೆ ಭಾಗ್ಯಲಕ್ಷ್ಮಿ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಮಂಡ್ಯ,ಜೂ30,Tv10 ಕನ್ನಡ ಕೆ.ಆರ್.ಎಸ್.ಡ್ಯಾಂ ಒಡಲನ್ನು ತುಂಬಿದ ಕಾವೇರಿ ಮಾತೆಗೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.ಈ ಹಿನ್ನೆಲೆ ಕೆ ಆರ್.ಎಸ್.ನವವಧುವಿನಂತೆ ಶೃಂಗಾರಗೊಂಡಿದೆ.ಕನ್ನಡ ಬಾವುಟದಿಂದ ಕಂಗೊಳಿಸುತ್ತಿದೆ.ಹಸಿರು ತೋರಣ, ಹೂಗಳ ಮೂಲಕ…
ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…

Leave a Reply

Your email address will not be published. Required fields are marked *