
ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಡಾ.ಹೆಚ್.ಸಿ.ಎಂ.ಭೇಟಿ…ಮಾದಪ್ಪನ ದರುಶನ ಪಡೆದ ಸಚಿವರು…
- TV10 Kannada Exclusive
- March 2, 2025
- No Comment
- 78

ಚಾಮರಾಜನಗರ,ಮಾ2,Tv10 ಕನ್ನಡ

ಇಂದು ಮುಂಜಾನೆ ಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಹೆಚ್ ಸಿ ಮಹದೇವಪ್ಪ ಭೇಟಿ ನೀಡಿ ಮಾದಪ್ಪನ ದರುಶನ ಪಡೆದರು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಮತ್ತು ಪ್ರಾಧಿಕಾರದ ಉಪಾಧ್ಯಕ್ಷರಾದ ವೆಂಕಟೇಶ್, ಶಾಸಕರಗಳಾದ ಕೊಳ್ಳೇಗಾಲದ ಎ ಆರ್ ಕೃಷ್ಣಮೂರ್ತಿ

ಶ್ರೀರಂಗಪಟ್ಟಣ ರಮೇಶ್ ಬಂಡಿ ಸಿದ್ದೇಗೌಡ ಮಾಜಿ ಶಾಸಕರಾದ ನರೇಂದ್ರ, ಮಹದೇಶ್ವರ ಬೆಟ್ಟದ ಕಾರ್ಯದರ್ಶಿಗಳಾದ ರಘು ರವರು ಸಾಥ್ ನೀಡಿದರು

ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ನಿನ್ನೆ ವಿಜೃಂಭಣೆಯಿಂದ ಜಾತ್ರಾಮಹೋತ್ಸವ ನಡೆಯಿತು.ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವವನ್ನ ಕಣ್ತುಂಬಿಕೊಂಡರು.ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದ ನಂತರ ಇಂದು ಡಾ.ಹೆಚ್.ಸಿ.ಎಂ ಭೇಟಿ ನೀಡಿ ಮಾದಪ್ಪನ ದರುಶನ ಪಡೆದರು…