ವೃದ್ದ ಮಹಿಳೆ ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿದ ಖದೀಮರು…ಅಪರಿಚಿತ ಯುವಕ,ಯುವತಿಯಿಂದ ಕೃತ್ಯ…ಹಾಡುಹಗಲೇ ಹಲ್ಲೆ ನಡೆಸಿ ದರೋಡೆ…

ವೃದ್ದ ಮಹಿಳೆ ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿದ ಖದೀಮರು…ಅಪರಿಚಿತ ಯುವಕ,ಯುವತಿಯಿಂದ ಕೃತ್ಯ…ಹಾಡುಹಗಲೇ ಹಲ್ಲೆ ನಡೆಸಿ ದರೋಡೆ…

ಸಾಲಿಗ್ರಾಮ,ಏ16,Tv10 ಕನ್ನಡ

ಹಾಡುಹಗಲೇ ಅಪರಿಚಿತ ಯುವಕ ಹಾಗೂ ಯುವತಿ ಮನೆಗೆ ಪ್ರವೇಶಿಸಿ ಲಗ್ನಪತ್ರಿಕೆ ಕೊಡುವ ನೆಪದಲ್ಲಿ ವೃದ್ದೆಯ ಕೈಕಾಲು ಕಟ್ಟಿಹಾಕಿ ಹಲ್ಲೆ ನಡೆಸಿ 4 ಲಕ್ಷ ಮೌಲ್ಯದ 50 ಚಿನ್ನದ ಸರ ದರೋಡೆ ಮಾಡಿ ಪರಾರಿಯಾದ ಘಟನೆ ಕೆ.ಆರ್.ನಗರ ತಾಲೂಕು ಸಾಲಿಗ್ರಾಮದ ಹರದನಹಳ್ಳಿ ಗ್ರಾಮದಲ್ಲಿ ನಡೆದಿದೆ.ಶೈಲಾ(76) ಎಂಬ ವೃದ್ದ ಮಹಿಳೆಯನ್ನ ಕಟ್ಟಿಹಾಕಿ ಹಲ್ಲೆ ನಡೆಸಿ ಕೃತ್ಯವೆಸಗಲಾಗಿದೆ.ಅಪರಿಚಿತ ಯುವಕ ಹಾಗೂ ಯುವತಿ ವಿರುದ್ದ ವೃದ್ದ ಮಹಿಳೆಯ ಸಂಭಂಧಿಕರಾದ ಅನುರಾಗ್ ಅರಸ್ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಮನೆಯಲ್ಲಿ ಶೈಲಾ ರವರು ಒಬ್ಬಂಟಿಯಾಗಿದ್ದರು.ಈ ಸಮಯ ಬಳಸಿಕೊಂಡ ಖದೀಮ ಜೋಡಿ ಮದುವೆ ಲಗ್ನಪತ್ರಿಕೆ ಕೊಡುವ ನೆಪದಲ್ಲಿ ಪ್ರವೇಶಿಸಿದೆ.ನೀರು ಬೇಕು ಎಂದು ಖದೀಮರು ಕೇಳಿದ್ದಾರೆ.ಶೈಲಾ ರವರು ಟೀ ಮಾಡಲು ಒಳಗೆ ತೆರಳಿದ್ದಾರೆ.ಈ ವೇಳೆ ಖದೀಮ ಜೋಡಿ ಶೈಲಾ ರವರ ಮೇಲೆ ಹಲ್ಲೆ ನಡೆಸಿ ಕೈಕಾಲು ಕಟ್ಟಿಹಾಕಿ ಚಿನ್ನದ ಸರ ಕಿತ್ತಿದ್ದಾರೆ.ಅಲ್ಲದೆ ಬಕವಂತವಾಗಿ ಬೀರು ಬೀಗವನ್ನ ಪಡೆದು ಮತ್ತಷ್ಟು ಚಿನ್ನಾಭರಣಕ್ಕಾಗಿ ಹುಡುಕಾಡಿ ಪರಾರಿಯಾಗಿದ್ದಾರೆ.ಅನುರಾಗ್ ಅರಸ್ ರವರು ಮನೆಗೆ ಬಂದಾಗ ಗಾಯಗೊಂಡ ಶೈಲಾರಿಗೆ ಶುಶ್ರೂಷೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಈ ಸಂಭಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಖದೀಮ ಜೋಡಿ ವಿರುದ್ದ ದರೋಡೆ ಪ್ರಕರಣ ದಾಖಲಾಗಿದೆ.ಘಟನೆ ನಡೆದ ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್,ಅಡಿಷನಲ್ ಎಸ್ಪಿ ಮಲ್ಲಿಕ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಥಳಕ್ಕೆ ಬೆರಳು ಮುದ್ರಾ ಘಟಕ ಹಾಗೂ ಶ್ವಾನದಳ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದೆ…

Spread the love

Related post

ಬಲಮುರಿ ಎಡಮುರಿ ಫಾಲ್ಸ್ ಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಿಂಡಿ ಭೇಟಿ…ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ…

ಬಲಮುರಿ ಎಡಮುರಿ ಫಾಲ್ಸ್ ಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಿಂಡಿ ಭೇಟಿ…ಮುನ್ನೆಚ್ಚರಿಕೆ ಕ್ರಮ…

ಕೆ.ಆರ್.ಎಸ್,ಮೇ20,Tv10 ಕನ್ನಡ ಬಲಮುರಿ ಹಾಗೂ ಎಡಮುರಿ ಫಾಲ್ಸ್ ಗಳಿಗೆ ಮಂಡ್ಯ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ರವರು ಭೇಟಿ ನೀಡಿ ಸುರಕ್ಷತಾ ಕ್ರಮದ ಬಗ್ಗೆ ಕೆಲವು ಸೂಚನೆಗಳನ್ನ ನೀಡಿದರು.ಶಾಲಾ…
ಅಕ್ರಮ ಗಂಧದ ಮರದ ತುಂಡುಗಳ ಸಂಗ್ರಹ…ಓರ್ವನ ಬಂಧನ…ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಅಕ್ರಮ ಗಂಧದ ಮರದ ತುಂಡುಗಳ ಸಂಗ್ರಹ…ಓರ್ವನ ಬಂಧನ…ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ…

ಹುಣಸೂರು,ಮೇ20,Tv10 ಕನ್ನಡ ಅಕ್ರಮವಾಗಿ ಗಂಧದ ಮರದ ತುಂಡುಗಳನ್ನ ಸಂಗ್ರಹಿಸಿದ್ದ ಓರ್ವ ಆರೋಪಿಯನ್ನ ಬಂಧಿಸುವಲ್ಲಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಠಾಣಾ ವ್ಯಾಪ್ತಿಯ ಮಂಗಳೂರು ಮಾಳ ಹಾಡಿಯ ನಿವಾಸಿ ಶಿವನಂಜ…
ಮಾವಿನಕಾಯಿಗಾಗಿ ಗಲಾಟೆ…ಓರ್ವನ ಕೊ* ಯಲ್ಲಿ ಅಂತ್ಯ…

ಮಾವಿನಕಾಯಿಗಾಗಿ ಗಲಾಟೆ…ಓರ್ವನ ಕೊ* ಯಲ್ಲಿ ಅಂತ್ಯ…

ಹುಣಸೂರು,ಮೇ19,Tv10 ಕನ್ನಡ ಮಾವಿನಕಾಯಿ ಕೊಯ್ಯುವ ವಿಚಾರದಲ್ಲಿ ಶುರುವಾದ ಜಗಳ ಓರ್ವನ ಕೊಯಲ್ಲಿ ಅಂತ್ಯವಾದ ಘಟನೆ ಹುಣಸೂರು ತಾಲೂಕಿನ ಶಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.ಮಲ್ಲೇಶ್ ಮೃತ ದುರ್ದೈವಿ.ಕೊ ಆರೋಪಿ ಚೇತನ್ ಇದೀಗ…

Leave a Reply

Your email address will not be published. Required fields are marked *