ನನ್ನ ಲವರ್ ತಂಟೆಗೆ ಬಂದ್ರೆ ಹುಷಾರ್…ಪ್ರಿಯತಮಳ ಜೊತೆ ಚಾಟ್ ಮಾಡಿದ ಯುವಕನಿಗೆ ಪ್ರಿಯತಮನಿಂದ ಹಲ್ಲೆ…ಇಬ್ಬರ ವಿರುದ್ದ FIR…

ನನ್ನ ಲವರ್ ತಂಟೆಗೆ ಬಂದ್ರೆ ಹುಷಾರ್…ಪ್ರಿಯತಮಳ ಜೊತೆ ಚಾಟ್ ಮಾಡಿದ ಯುವಕನಿಗೆ ಪ್ರಿಯತಮನಿಂದ ಹಲ್ಲೆ…ಇಬ್ಬರ ವಿರುದ್ದ FIR…

  • Crime
  • May 23, 2025
  • No Comment
  • 163

ಮೈಸೂರು,ಮೇ22,Tv10 ಕನ್ನಡ

ಪ್ರಿಯತಮಳ ಜೊತೆ ಮೊಬೈಲ್ ನಲ್ಲಿ ಮಾತನಾಡಿದ ಯುವಕನ ಮೇಲೆ ಲವರ್ ಹಲ್ಲೆ ನಡೆಸಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವೇಣುಗೋಪಾಲ್ (21) ಗಾಯಗೊಂಡ ಯುವಕ.ಲವರ್ ರಾಜು ಹಾಗೂ ಆತನ ಸ್ನೇಹಿತನ ಮೇಲೆ ವೇಣುಗೋಪಾಲ್ ಪ್ರಕರಣ ದಾಖಲಿಸಿದ್ದಾರೆ.

ಜನತಾ ನಗರ ನಿವಾಸಿ ವೇಣುಗೋಪಾಲ್ ರವರು ಪಕ್ಕದ ರಸ್ತೆ ಯುವತಿ ಜೊತೆ ಪರಿಚಯವಿದ್ದ ಕಾರಣ ಆಗಾಗ ಮೊಬೈಲ್ ಮೂಲಕ ಮಾತನಾಡಿ ಚಾಟ್ ಮಾಡಿರುತ್ತಾರೆ.ಇದನ್ನ ಸಹಿಸದ ಲವರ್ ರಾಜು ಹಲ್ಲೆ ನಡೆಸಿದ್ದಾನೆ.ನಿನ್ನನ್ನು ಮಾತನಾಡಬೇಕು ಬಾ ಎಂದು ಕರೆಸಿಕೊಂಡ ರಾಜು ಹಾಗೂ ಸ್ನೇಹಿತ ಬೈಕ್ ನಲ್ಲಿ ವಿಜಯನಗರ ಹೈಟೆನ್ಷನ್ ವೈರ್ ಬಳಿಯ ಪ್ರದೇಶಕ್ಕೆ ಕರೆದೊಯ್ದು ಅವಳು ನನ್ನ ಲವರ್ ಅಂತ ಗೊತ್ತಿದ್ರೂ ಮಾತಾಡ್ತೀಯ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಂಗ್ ನ ಹಿಂಬದಿಯಿಂದ ಹಲ್ಲೆ ನಡೆಸಿದ್ದಾನೆ.ಇಬ್ಬರಿಂದ ತಪ್ಪಿಸಿಕೊಂಡ ವೇಣುಗೋಪಾಲ್ ಪೊಲೀಸರ ನೆರವಿನಿಂದ ಬಚಾವ್ ಆಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗಾಯಗೊಂಡ ವೇಣುಗೋಪಾಲ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ರಾಜು ಹಾಗೂ ಸ್ನೇಹಿತನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ… ಚಾಮರಾಜನಗರ,ಜು28,Tv10 ಕನ್ನಡ ಕಾಡುಹಂದಿ ಬೇಟೆ ಮಾಡಿದ ಆರೋಪದ ಹಿನ್ನಲೆ ಓರ್ವ ಆರೋಪಿಯನ್ನ ಬಂಧಿಸಲಾಗಿದೆ.ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ ಘಟನೆ ನಡೆದಿದೆ.ಕೊಡಗು ಜಿಲ್ಲೆ…
ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…

Leave a Reply

Your email address will not be published. Required fields are marked *