ವ್ಯಕ್ತಿಯನ್ನ ಅಕ್ರಮವಾಗಿ ಬಂಧಿಸಿ ಹಣ ವಸೂಲಿಗೆ ಪ್ರಯತ್ನ…ಬಲವಂತವಾಗಿ ಚೆಕ್ ಪಡೆದು ಬೌನ್ಸ್ ಮಾಡಿದ ಉದ್ಯಮಿಗಳ ವಿರುದ್ದ FIR…

ವ್ಯಕ್ತಿಯನ್ನ ಅಕ್ರಮವಾಗಿ ಬಂಧಿಸಿ ಹಣ ವಸೂಲಿಗೆ ಪ್ರಯತ್ನ…ಬಲವಂತವಾಗಿ ಚೆಕ್ ಪಡೆದು ಬೌನ್ಸ್ ಮಾಡಿದ ಉದ್ಯಮಿಗಳ ವಿರುದ್ದ FIR…

  • Crime
  • June 20, 2025
  • No Comment
  • 246

ಮೈಸೂರು,ಜೂ20,Tv10 ಕನ್ನಡ

ವ್ಯಕ್ತಿಯೊಬ್ಬರನ್ನ ಅಕ್ರಮವಾಗಿ ಬಂಧಿಸಿ ಬಲವಂತವಾಗಿ ಚೆಕ್ ಗೆ ಸಹಿ ಮಾಡಿಸಿಕೊಂಡು ನಂತರ ಬೌನ್ಸ್ ಮಾಡಿದ ಆರೋಪದ ಹಿನ್ನಲೆ ಬೆಂಗಳೂರು ಮೂಲದ ನಾಲ್ವರು ಉದ್ಯಮಿಗಳ ವಿರುದ್ದ ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೊಂದ ವ್ಯಕ್ತಿ ಕುಟುಂಬ ನ್ಯಾಯಾಲಯದ ಮೊರೆ ಹೋಗಿ ಪ್ರಕರಣ ದಾಖಲಿಸಿದ್ದಾರೆ.ಬೆಂಗಳೂರಿನ ಉದ್ಯಮಿಗಳಾದ ಗೋವಿಂದಬಾಬು ಪೂಜಾರಿ,ಸುರೇಶ್ ಎನ್ ಪೂಜಾರಿ ಹಾಗೂ ಇವರ ಸಹಚರರಾದ ಸುಖೇಶ್ ಶೆಟ್ಟಿ ,ಪ್ರಜ್ವಲ್ ಎಂಬುವರ ವಿರುದ್ದ ಎಫ್.ಐ.ಆರ್.ದಾಖಲಾಗಿದೆ.ಎನ್.ಆರ್.ಮೊಹಲ್ಲಾ ನಿವಾಸಿಗಳಾದ ಸುನಿಲ್ ಎಂಬುವರ ಪತ್ನಿ ಕವಿತಾ ರವರು ಪ್ರಕರಣ ದಾಖಲಿಸಿದ್ದಾರೆ.

ಸುನಿಲ್ ರವರು ಗೋವಿಂದ್ ಬಾಬು ಪೂಜಾರಿ ಹಾಗೂ ಸುರೇಶ್ ಎನ್ ಪೂಜಾರಿ ಒಡೆತನದ CHEFTAK FOOD & HOSPITALITY SERVICES ಉದ್ಯಮದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.ಇವರ ಮೇಲೆ ಹಣ ದುರುಪಯೋಗಪಡಿಸಿದ ಆರೋಪ ಮಾಡಿದ್ದ ಮುಖ್ಯಸ್ಥರು 2022 ರಲ್ಲಿ ಅಕ್ರಮವಾಗಿ ಬಂಧಿಸಿ ಬಲವಂತವಾಗಿ 5 ಚೆಕ್ ಗಳಿಗೆ ಸಹಿ ಮಾಡಿಸಿಕೊಂಡಿದ್ದರು.ಈ ಸಂಭಂಧ ಸುನಿಲ್ ಹಾಗೂ ಇವರ ಪತ್ನಿ ಕವಿತಾ ರವರು ಸಹಿ ಮಾಡಿದ ಚೆಕ್ ಗಳನ್ನ ವಾಪಸ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ.ಚೆಕ್ ಹಿಂದಿರುಗಿಸುವುದಾಗಿ ನಂಬಿಕೆ ಹುಟ್ಟಿಸುತ್ತಾ 5 ಚೆಕ್ ಗಳಿಂದ 21 ಲಕ್ಷ ರೂಗಳನ್ನ ನಮೂದಿಸಿ ಬೌನ್ಸ್ ಮಾಡಿಸಿ ವಾರೆಂಟ್ ತಂದಿದ್ದಾರೆ.ಈ ಬೆಳವಣಿಗೆಯಿಂದ ನೊಂದ ಸುನಿಲ್ ಹಾಗೂ ಪತ್ನಿ ಕವಿತಾ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಮೂರು ವರ್ಷ ವಾದ ಆಲಿಸಿದ ಮೈಸೂರು ನ್ಯಾಯಾಲಯ ಉದ್ಯಮಿಗಳ ವಿರುದ್ದ FIR ದಾಖಲಿಸುವಂತೆ ಆದೇಶ ನೀಡಿದೆ.ಇದೇ ವೇಳೆ ಕೇಸ್ ವಾಪಸ್ ಪಡೆಯುವಂತೆ ಧಂಕಿ ಹಾಕಿದ್ದಾರೆಂದು ಆರೋಪಿಸಲಾಗಿದೆ.ಸಧ್ಯ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಉದ್ಯಮಿಗಳ ವಿರುದ್ದ ಪ್ರಕರಣ ದಾಖಲಾಗಿದೆ…

Spread the love

Related post

ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್…

ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್…

ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್… ಮಂಡ್ಯ,ಜೂ13,Tv10 ಕನ್ನಡ ಜಮೀನು ಖಾತೆಗೆ ರೂ.2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು 10 ಸಾವಿರ ಹಣ ಸ್ವೀಕರಿಸುವಾಗಲೋಕಾಯುಕ್ತ…
ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್…

ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ…

ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್… ಮೈಸೂರು,ಜೂ12,Tv10 ಕನ್ನಡ ಕಸದರಾಶಿ ಹಾವಳಿ ತಪ್ಪಿಸಲು ಮೈಸೂರು ಮಹಾನಗರ ಪಾಲಿಕೆ ಮಾಸ್ಟರ್ ಪ್ಲಾನ್…
ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ…

ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ…

ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ… ಮೈಸೂರು,ಜೂ10,Tv10 ಕನ್ನಡ ನಿರೀಕ್ಷೆಯಂತೆ ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳ ಕರ್ತವ್ಯದಲ್ಲಿ ಭಾರಿ ಬದಲಾವಣೆ ಆಗಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ತವ್ಯ…

Leave a Reply

Your email address will not be published. Required fields are marked *