ವ್ಯಕ್ತಿಯನ್ನ ಅಕ್ರಮವಾಗಿ ಬಂಧಿಸಿ ಹಣ ವಸೂಲಿಗೆ ಪ್ರಯತ್ನ…ಬಲವಂತವಾಗಿ ಚೆಕ್ ಪಡೆದು ಬೌನ್ಸ್ ಮಾಡಿದ ಉದ್ಯಮಿಗಳ ವಿರುದ್ದ FIR…

ವ್ಯಕ್ತಿಯನ್ನ ಅಕ್ರಮವಾಗಿ ಬಂಧಿಸಿ ಹಣ ವಸೂಲಿಗೆ ಪ್ರಯತ್ನ…ಬಲವಂತವಾಗಿ ಚೆಕ್ ಪಡೆದು ಬೌನ್ಸ್ ಮಾಡಿದ ಉದ್ಯಮಿಗಳ ವಿರುದ್ದ FIR…

  • Crime
  • June 20, 2025
  • No Comment
  • 226

ಮೈಸೂರು,ಜೂ20,Tv10 ಕನ್ನಡ

ವ್ಯಕ್ತಿಯೊಬ್ಬರನ್ನ ಅಕ್ರಮವಾಗಿ ಬಂಧಿಸಿ ಬಲವಂತವಾಗಿ ಚೆಕ್ ಗೆ ಸಹಿ ಮಾಡಿಸಿಕೊಂಡು ನಂತರ ಬೌನ್ಸ್ ಮಾಡಿದ ಆರೋಪದ ಹಿನ್ನಲೆ ಬೆಂಗಳೂರು ಮೂಲದ ನಾಲ್ವರು ಉದ್ಯಮಿಗಳ ವಿರುದ್ದ ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೊಂದ ವ್ಯಕ್ತಿ ಕುಟುಂಬ ನ್ಯಾಯಾಲಯದ ಮೊರೆ ಹೋಗಿ ಪ್ರಕರಣ ದಾಖಲಿಸಿದ್ದಾರೆ.ಬೆಂಗಳೂರಿನ ಉದ್ಯಮಿಗಳಾದ ಗೋವಿಂದಬಾಬು ಪೂಜಾರಿ,ಸುರೇಶ್ ಎನ್ ಪೂಜಾರಿ ಹಾಗೂ ಇವರ ಸಹಚರರಾದ ಸುಖೇಶ್ ಶೆಟ್ಟಿ ,ಪ್ರಜ್ವಲ್ ಎಂಬುವರ ವಿರುದ್ದ ಎಫ್.ಐ.ಆರ್.ದಾಖಲಾಗಿದೆ.ಎನ್.ಆರ್.ಮೊಹಲ್ಲಾ ನಿವಾಸಿಗಳಾದ ಸುನಿಲ್ ಎಂಬುವರ ಪತ್ನಿ ಕವಿತಾ ರವರು ಪ್ರಕರಣ ದಾಖಲಿಸಿದ್ದಾರೆ.

ಸುನಿಲ್ ರವರು ಗೋವಿಂದ್ ಬಾಬು ಪೂಜಾರಿ ಹಾಗೂ ಸುರೇಶ್ ಎನ್ ಪೂಜಾರಿ ಒಡೆತನದ CHEFTAK FOOD & HOSPITALITY SERVICES ಉದ್ಯಮದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.ಇವರ ಮೇಲೆ ಹಣ ದುರುಪಯೋಗಪಡಿಸಿದ ಆರೋಪ ಮಾಡಿದ್ದ ಮುಖ್ಯಸ್ಥರು 2022 ರಲ್ಲಿ ಅಕ್ರಮವಾಗಿ ಬಂಧಿಸಿ ಬಲವಂತವಾಗಿ 5 ಚೆಕ್ ಗಳಿಗೆ ಸಹಿ ಮಾಡಿಸಿಕೊಂಡಿದ್ದರು.ಈ ಸಂಭಂಧ ಸುನಿಲ್ ಹಾಗೂ ಇವರ ಪತ್ನಿ ಕವಿತಾ ರವರು ಸಹಿ ಮಾಡಿದ ಚೆಕ್ ಗಳನ್ನ ವಾಪಸ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ.ಚೆಕ್ ಹಿಂದಿರುಗಿಸುವುದಾಗಿ ನಂಬಿಕೆ ಹುಟ್ಟಿಸುತ್ತಾ 5 ಚೆಕ್ ಗಳಿಂದ 21 ಲಕ್ಷ ರೂಗಳನ್ನ ನಮೂದಿಸಿ ಬೌನ್ಸ್ ಮಾಡಿಸಿ ವಾರೆಂಟ್ ತಂದಿದ್ದಾರೆ.ಈ ಬೆಳವಣಿಗೆಯಿಂದ ನೊಂದ ಸುನಿಲ್ ಹಾಗೂ ಪತ್ನಿ ಕವಿತಾ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಮೂರು ವರ್ಷ ವಾದ ಆಲಿಸಿದ ಮೈಸೂರು ನ್ಯಾಯಾಲಯ ಉದ್ಯಮಿಗಳ ವಿರುದ್ದ FIR ದಾಖಲಿಸುವಂತೆ ಆದೇಶ ನೀಡಿದೆ.ಇದೇ ವೇಳೆ ಕೇಸ್ ವಾಪಸ್ ಪಡೆಯುವಂತೆ ಧಂಕಿ ಹಾಕಿದ್ದಾರೆಂದು ಆರೋಪಿಸಲಾಗಿದೆ.ಸಧ್ಯ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಉದ್ಯಮಿಗಳ ವಿರುದ್ದ ಪ್ರಕರಣ ದಾಖಲಾಗಿದೆ…

Spread the love

Related post

ಸಿಸಿಬಿ ಪೊಲೀಸರ ಕಾರ್ಯಾಚರಣೆ…ನಾಲ್ವರ ಬಂಧನ…10.40 ಲಕ್ಷ ಮೌಲ್ಯದ ಎಂಡಿಎಂಎ ಒಂದು ಕಾರ್ ವಶ…

ಸಿಸಿಬಿ ಪೊಲೀಸರ ಕಾರ್ಯಾಚರಣೆ…ನಾಲ್ವರ ಬಂಧನ…10.40 ಲಕ್ಷ ಮೌಲ್ಯದ ಎಂಡಿಎಂಎ ಒಂದು ಕಾರ್…

ಸಿಸಿಬಿ ಪೊಲೀಸರ ಕಾರ್ಯಾಚರಣೆ…ನಾಲ್ವರ ಬಂಧನ…10.40 ಲಕ್ಷ ಮೌಲ್ಯದ ಎಂಡಿಎಂಎ ಒಂದು ಕಾರ್ ವಶ… ಮೈಸೂರು,ಫೆ23,Tv10 ಕನ್ನಡ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದ್ದು ಬಂಧಿತರಿಂದ…
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ! ಆಲ್ಫಾ ಅಂದರೇನೇ ಡಾಮಿನೇಶನ್. ಈ ವಾರ ತೆರೆಕಂಡ ಆಲ್ಫಾ‌ ಚಿತ್ರದಲ್ಲಿ ಡಾಮಿನೇಟ್ ಮಾಡುತ್ತಿರುವವರೇ ಚಿತ್ರದ ನಾಯಕ ಹೇಮಂತ್ ಕುಮಾರ್. ಹೇಮಂತ್…
ಡೂಪ್ಲಿನ್ ಕಾಂಪ್ಲೆಕ್ಸ್ ಗೆ ಹೈ ಕೋರ್ಟ್ ಶಾಕ್…ಎಂಡಿಎ ತೆಕ್ಕೆಗೆ ಸೇರಲಿರುವ ವಾಣಿಜ್ಯ ಸಂಕೀರ್ಣ…ಸುಮಾರು 250 ಕೋಟಿ ಮೌಲ್ಯದ ಆಸ್ತಿ…ಅಲರ್ಟ್ ಆಗ್ತಾರ ಆಯುಕ್ತ ರಕ್ಷಿತ್…

ಡೂಪ್ಲಿನ್ ಕಾಂಪ್ಲೆಕ್ಸ್ ಗೆ ಹೈ ಕೋರ್ಟ್ ಶಾಕ್…ಎಂಡಿಎ ತೆಕ್ಕೆಗೆ ಸೇರಲಿರುವ ವಾಣಿಜ್ಯ…

ಡೂಪ್ಲಿನ್ ಕಾಂಪ್ಲೆಕ್ಸ್ ಗೆ ಹೈ ಕೋರ್ಟ್ ಶಾಕ್…ಎಂಡಿಎ ತೆಕ್ಕೆಗೆ ಸೇರಲಿರುವ ವಾಣಿಜ್ಯ ಸಂಕೀರ್ಣ…ಸುಮಾರು 250 ಕೋಟಿ ಮೌಲ್ಯದ ಆಸ್ತಿ…ಅಲರ್ಟ್ ಆಗ್ತಾರ ಆಯುಕ್ತ ರಕ್ಷಿತ್… ಮೈಸೂರು,ಫೆ17,Tv10 ಕನ್ನಡ ಮೈಸೂರಿನ ಹೃದಯಭಾಗದಲ್ಲಿರುವ…

Leave a Reply

Your email address will not be published. Required fields are marked *