ವ್ಯಕ್ತಿಯನ್ನ ಅಕ್ರಮವಾಗಿ ಬಂಧಿಸಿ ಹಣ ವಸೂಲಿಗೆ ಪ್ರಯತ್ನ…ಬಲವಂತವಾಗಿ ಚೆಕ್ ಪಡೆದು ಬೌನ್ಸ್ ಮಾಡಿದ ಉದ್ಯಮಿಗಳ ವಿರುದ್ದ FIR…

ವ್ಯಕ್ತಿಯನ್ನ ಅಕ್ರಮವಾಗಿ ಬಂಧಿಸಿ ಹಣ ವಸೂಲಿಗೆ ಪ್ರಯತ್ನ…ಬಲವಂತವಾಗಿ ಚೆಕ್ ಪಡೆದು ಬೌನ್ಸ್ ಮಾಡಿದ ಉದ್ಯಮಿಗಳ ವಿರುದ್ದ FIR…

  • Crime
  • June 20, 2025
  • No Comment
  • 164

ಮೈಸೂರು,ಜೂ20,Tv10 ಕನ್ನಡ

ವ್ಯಕ್ತಿಯೊಬ್ಬರನ್ನ ಅಕ್ರಮವಾಗಿ ಬಂಧಿಸಿ ಬಲವಂತವಾಗಿ ಚೆಕ್ ಗೆ ಸಹಿ ಮಾಡಿಸಿಕೊಂಡು ನಂತರ ಬೌನ್ಸ್ ಮಾಡಿದ ಆರೋಪದ ಹಿನ್ನಲೆ ಬೆಂಗಳೂರು ಮೂಲದ ನಾಲ್ವರು ಉದ್ಯಮಿಗಳ ವಿರುದ್ದ ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೊಂದ ವ್ಯಕ್ತಿ ಕುಟುಂಬ ನ್ಯಾಯಾಲಯದ ಮೊರೆ ಹೋಗಿ ಪ್ರಕರಣ ದಾಖಲಿಸಿದ್ದಾರೆ.ಬೆಂಗಳೂರಿನ ಉದ್ಯಮಿಗಳಾದ ಗೋವಿಂದಬಾಬು ಪೂಜಾರಿ,ಸುರೇಶ್ ಎನ್ ಪೂಜಾರಿ ಹಾಗೂ ಇವರ ಸಹಚರರಾದ ಸುಖೇಶ್ ಶೆಟ್ಟಿ ,ಪ್ರಜ್ವಲ್ ಎಂಬುವರ ವಿರುದ್ದ ಎಫ್.ಐ.ಆರ್.ದಾಖಲಾಗಿದೆ.ಎನ್.ಆರ್.ಮೊಹಲ್ಲಾ ನಿವಾಸಿಗಳಾದ ಸುನಿಲ್ ಎಂಬುವರ ಪತ್ನಿ ಕವಿತಾ ರವರು ಪ್ರಕರಣ ದಾಖಲಿಸಿದ್ದಾರೆ.

ಸುನಿಲ್ ರವರು ಗೋವಿಂದ್ ಬಾಬು ಪೂಜಾರಿ ಹಾಗೂ ಸುರೇಶ್ ಎನ್ ಪೂಜಾರಿ ಒಡೆತನದ CHEFTAK FOOD & HOSPITALITY SERVICES ಉದ್ಯಮದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.ಇವರ ಮೇಲೆ ಹಣ ದುರುಪಯೋಗಪಡಿಸಿದ ಆರೋಪ ಮಾಡಿದ್ದ ಮುಖ್ಯಸ್ಥರು 2022 ರಲ್ಲಿ ಅಕ್ರಮವಾಗಿ ಬಂಧಿಸಿ ಬಲವಂತವಾಗಿ 5 ಚೆಕ್ ಗಳಿಗೆ ಸಹಿ ಮಾಡಿಸಿಕೊಂಡಿದ್ದರು.ಈ ಸಂಭಂಧ ಸುನಿಲ್ ಹಾಗೂ ಇವರ ಪತ್ನಿ ಕವಿತಾ ರವರು ಸಹಿ ಮಾಡಿದ ಚೆಕ್ ಗಳನ್ನ ವಾಪಸ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ.ಚೆಕ್ ಹಿಂದಿರುಗಿಸುವುದಾಗಿ ನಂಬಿಕೆ ಹುಟ್ಟಿಸುತ್ತಾ 5 ಚೆಕ್ ಗಳಿಂದ 21 ಲಕ್ಷ ರೂಗಳನ್ನ ನಮೂದಿಸಿ ಬೌನ್ಸ್ ಮಾಡಿಸಿ ವಾರೆಂಟ್ ತಂದಿದ್ದಾರೆ.ಈ ಬೆಳವಣಿಗೆಯಿಂದ ನೊಂದ ಸುನಿಲ್ ಹಾಗೂ ಪತ್ನಿ ಕವಿತಾ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಮೂರು ವರ್ಷ ವಾದ ಆಲಿಸಿದ ಮೈಸೂರು ನ್ಯಾಯಾಲಯ ಉದ್ಯಮಿಗಳ ವಿರುದ್ದ FIR ದಾಖಲಿಸುವಂತೆ ಆದೇಶ ನೀಡಿದೆ.ಇದೇ ವೇಳೆ ಕೇಸ್ ವಾಪಸ್ ಪಡೆಯುವಂತೆ ಧಂಕಿ ಹಾಕಿದ್ದಾರೆಂದು ಆರೋಪಿಸಲಾಗಿದೆ.ಸಧ್ಯ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಉದ್ಯಮಿಗಳ ವಿರುದ್ದ ಪ್ರಕರಣ ದಾಖಲಾಗಿದೆ…

Spread the love

Related post

ಅಸಲಿ ಇದ್ದರೂ ನಕಲಿ ವ್ಯಕ್ತಿಗಳಿಂದ ಆಸ್ತಿ ಕಬಳಿಸಲು ಸಂಚು…ಐವರ ವಿರುದ್ದ ಹಿರಿಯ ಉಪನೊಂದಣಾಧಿಕಾರಿಗಳಿಂದ ಪ್ರಕರಣ ದಾಖಲು…

ಅಸಲಿ ಇದ್ದರೂ ನಕಲಿ ವ್ಯಕ್ತಿಗಳಿಂದ ಆಸ್ತಿ ಕಬಳಿಸಲು ಸಂಚು…ಐವರ ವಿರುದ್ದ ಹಿರಿಯ…

ಮೈಸೂರು,ಜು10,Tv10 ಕನ್ನಡ ಅಸಲಿ ವ್ಯಕ್ತಿ ಇದ್ದರೂ ನಕಲಿ ವ್ಯಕ್ತಿಗಳು ಆಸ್ತಿಯನ್ನ ಕಬಳಿಸಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ಮೈಸೂರು ಪೂರ್ವ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನಡೆದಿದೆ.ಸಂಚು ರೂಪಿಸಿ ಸಿಕ್ಕಿಬಿದ್ದ ಐದು ಭೂಗಳ್ಳರ…
ಹೃದಯ ಅಪಘಾತದಿಂದ ಗದ್ದಿಗೆ ಅರ್ಚಿಕರು ಸಾವು

ಹೃದಯ ಅಪಘಾತದಿಂದ ಗದ್ದಿಗೆ ಅರ್ಚಿಕರು ಸಾವು

ಹುಣಸೂರು ತಾಲೂಕಿನ ಗದ್ದಿಗೆ ಚಂಡುಗಣ್ಣ ಸ್ವಾಮಿ ಎಂಬ ಹೆಸರಿನ ಪ್ರಸಿದ್ದ ದೇವಸ್ಥಾನದಲ್ಲಿ ಕೆಂಡಗಣ್ಣ ಸ್ವಾಮಿ ಎಂಬ ಅರ್ಚಕರು ಬೆಳಗಿನ ಜಾವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತಯಾರಿ ನಡೆಸುವ ವೇಳೆ…
ಹೃದಯಾಘಾತದಿಂದ ಯುವಕ ಸಾವು…

ಹೃದಯಾಘಾತದಿಂದ ಯುವಕ ಸಾವು…

ಮೈಸೂರು,ಜು10,Tv10 ಕನ್ನಡ ಮೈಸೂರಿನಲ್ಲಿ ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ್ದಾನೆ.ದರ್ಶನ್ ಚೌದ್ರಿ (29) ಸಾವನ್ನಪ್ಪಿದ ಯುವಕ.ಮೈಸೂರಿನ ಚಾಮರಾಜ ಮೊಹಲ್ಲಾದ ನಿವಾಸಿಯಾಗಿದ್ದುದೇವರಾಜ ಮೊಹಲ್ಲಾದಲ್ಲಿ ಬಣ್ಣದ ಅಂಗಡಿ ಮಾಲೀಕನಾಗಿದ್ದ.ನೆನ್ನೆ ರಾತ್ರಿ ದಿಢೀರ್ ಎದೆ ನೋವು…

Leave a Reply

Your email address will not be published. Required fields are marked *