ವ್ಯಕ್ತಿಯನ್ನ ಅಕ್ರಮವಾಗಿ ಬಂಧಿಸಿ ಹಣ ವಸೂಲಿಗೆ ಪ್ರಯತ್ನ…ಬಲವಂತವಾಗಿ ಚೆಕ್ ಪಡೆದು ಬೌನ್ಸ್ ಮಾಡಿದ ಉದ್ಯಮಿಗಳ ವಿರುದ್ದ FIR…

ವ್ಯಕ್ತಿಯನ್ನ ಅಕ್ರಮವಾಗಿ ಬಂಧಿಸಿ ಹಣ ವಸೂಲಿಗೆ ಪ್ರಯತ್ನ…ಬಲವಂತವಾಗಿ ಚೆಕ್ ಪಡೆದು ಬೌನ್ಸ್ ಮಾಡಿದ ಉದ್ಯಮಿಗಳ ವಿರುದ್ದ FIR…

  • Crime
  • June 20, 2025
  • No Comment
  • 249

ಮೈಸೂರು,ಜೂ20,Tv10 ಕನ್ನಡ

ವ್ಯಕ್ತಿಯೊಬ್ಬರನ್ನ ಅಕ್ರಮವಾಗಿ ಬಂಧಿಸಿ ಬಲವಂತವಾಗಿ ಚೆಕ್ ಗೆ ಸಹಿ ಮಾಡಿಸಿಕೊಂಡು ನಂತರ ಬೌನ್ಸ್ ಮಾಡಿದ ಆರೋಪದ ಹಿನ್ನಲೆ ಬೆಂಗಳೂರು ಮೂಲದ ನಾಲ್ವರು ಉದ್ಯಮಿಗಳ ವಿರುದ್ದ ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೊಂದ ವ್ಯಕ್ತಿ ಕುಟುಂಬ ನ್ಯಾಯಾಲಯದ ಮೊರೆ ಹೋಗಿ ಪ್ರಕರಣ ದಾಖಲಿಸಿದ್ದಾರೆ.ಬೆಂಗಳೂರಿನ ಉದ್ಯಮಿಗಳಾದ ಗೋವಿಂದಬಾಬು ಪೂಜಾರಿ,ಸುರೇಶ್ ಎನ್ ಪೂಜಾರಿ ಹಾಗೂ ಇವರ ಸಹಚರರಾದ ಸುಖೇಶ್ ಶೆಟ್ಟಿ ,ಪ್ರಜ್ವಲ್ ಎಂಬುವರ ವಿರುದ್ದ ಎಫ್.ಐ.ಆರ್.ದಾಖಲಾಗಿದೆ.ಎನ್.ಆರ್.ಮೊಹಲ್ಲಾ ನಿವಾಸಿಗಳಾದ ಸುನಿಲ್ ಎಂಬುವರ ಪತ್ನಿ ಕವಿತಾ ರವರು ಪ್ರಕರಣ ದಾಖಲಿಸಿದ್ದಾರೆ.

ಸುನಿಲ್ ರವರು ಗೋವಿಂದ್ ಬಾಬು ಪೂಜಾರಿ ಹಾಗೂ ಸುರೇಶ್ ಎನ್ ಪೂಜಾರಿ ಒಡೆತನದ CHEFTAK FOOD & HOSPITALITY SERVICES ಉದ್ಯಮದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.ಇವರ ಮೇಲೆ ಹಣ ದುರುಪಯೋಗಪಡಿಸಿದ ಆರೋಪ ಮಾಡಿದ್ದ ಮುಖ್ಯಸ್ಥರು 2022 ರಲ್ಲಿ ಅಕ್ರಮವಾಗಿ ಬಂಧಿಸಿ ಬಲವಂತವಾಗಿ 5 ಚೆಕ್ ಗಳಿಗೆ ಸಹಿ ಮಾಡಿಸಿಕೊಂಡಿದ್ದರು.ಈ ಸಂಭಂಧ ಸುನಿಲ್ ಹಾಗೂ ಇವರ ಪತ್ನಿ ಕವಿತಾ ರವರು ಸಹಿ ಮಾಡಿದ ಚೆಕ್ ಗಳನ್ನ ವಾಪಸ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ.ಚೆಕ್ ಹಿಂದಿರುಗಿಸುವುದಾಗಿ ನಂಬಿಕೆ ಹುಟ್ಟಿಸುತ್ತಾ 5 ಚೆಕ್ ಗಳಿಂದ 21 ಲಕ್ಷ ರೂಗಳನ್ನ ನಮೂದಿಸಿ ಬೌನ್ಸ್ ಮಾಡಿಸಿ ವಾರೆಂಟ್ ತಂದಿದ್ದಾರೆ.ಈ ಬೆಳವಣಿಗೆಯಿಂದ ನೊಂದ ಸುನಿಲ್ ಹಾಗೂ ಪತ್ನಿ ಕವಿತಾ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಮೂರು ವರ್ಷ ವಾದ ಆಲಿಸಿದ ಮೈಸೂರು ನ್ಯಾಯಾಲಯ ಉದ್ಯಮಿಗಳ ವಿರುದ್ದ FIR ದಾಖಲಿಸುವಂತೆ ಆದೇಶ ನೀಡಿದೆ.ಇದೇ ವೇಳೆ ಕೇಸ್ ವಾಪಸ್ ಪಡೆಯುವಂತೆ ಧಂಕಿ ಹಾಕಿದ್ದಾರೆಂದು ಆರೋಪಿಸಲಾಗಿದೆ.ಸಧ್ಯ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಉದ್ಯಮಿಗಳ ವಿರುದ್ದ ಪ್ರಕರಣ ದಾಖಲಾಗಿದೆ…

Spread the love

Related post

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…
ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ… ಮಂಡ್ಯ,ಆ7,Tv10 ಕನ್ನಡ ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಕೊಲೆಯಾಗಿದೆ.ಕೆ ಆರ್ ಎಸ್ ನಲ್ಲಿ ಮಲಗಿದ್ದ ವ್ಯಕ್ತಿ ತಲೆ…

Leave a Reply

Your email address will not be published. Required fields are marked *