ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಮೈಸೂರು,ಜೂ26,Tv10 ಕನ್ನಡ

ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾದರು. ಅವರು ಮೈಸೂರು ಚೈಲ್ಡ್ ನ್ಯೂರೋಲಾಜಿ ಅಂಡ್ ರಿಹ್ಯಾಬಿಲಿಟೇಶನ್ ಸೆಂಟರ್ (MCNRC) ಸಂಸ್ಥಾಪಕರೂ ಹಾಗೂ ಪ್ರಸಿದ್ಧ ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಆಗಿದ್ದಾರೆ. ಡಾ. ಅನುಷಾ ರಾಜ್ ರವರು ಡಾ. ಕೆ.ಎಚ್. ಬಸವರಾಜ್ (ಚರ್ಮ ತಜ್ಞ) ಹಾಗೂ ಡಾ. ಭಾರತೀ ಎಂ.ಬಿ (ENT ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರು, ಜೆಎಸ್ಎಸ್ ಆಸ್ಪತ್ರೆ) ದಂಪತಿಯ ಪುತ್ರಿಯಾಗಿದ್ದಾರೆ.
ಮೆಡಿಕ್ವೀನ್ ಭಾರತ ಇಂಟರ್ ನ್ಯಾಷನಲ್ ಮಿಸ್ & ಮಿಸೆಸ್ 2025’* ಎಂಬುದು ವೈದ್ಯಕೀಯ ಕ್ಷೇತ್ರದ ಮಹಿಳೆಯರಿಗೆ ಮೀಸಲಾದ ಮೊಟ್ಟಮೊದಲ ಪೇಜಂಟ್ ಆಗಿದೆ. ಮಹಿಳಾ ಆರೋಗ್ಯದ ಸಂಭ್ರಮ’ ಎಂಬ ಧ್ಯೇಯದೊಂದಿಗೆ ವೈದ್ಯಕೀಯ ಸಮುದಾಯದ ಸಾಧನೆಗಳನ್ನು ಗೌರವಿಸುವ ಆಶಯ ಹೊಂದಿದೆ. ಸೀಸನ್ 6 ಕಾರ್ಯಕ್ರಮವು ಜೂನ್ 20 ರಿಂದ 22 ರವರೆಗೆ ಪುಣೆಯ ಟಿಪ್ ಟಾಪ್ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಮೂರು ದಿನಗಳ ಕಾಲ ನಡೆಯಿತು.ಪ್ರೀ-ಫೈನಲ್‌ನಲ್ಲಿ ಡಾ. ಅನುಷಾ ರಾಜ್ ಕೆ ಅವರಿಗೆ ವಿಶಿಷ್ಟವಾದ ಫೇಸ್ ಆಫ್ ಮೆಡಿಕ್ವೀನ್’ ಎಂಬ ಗೌರವ ನೀಡಲಾಯಿತು. ಅಲ್ಲದೆ ಅವರು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೆಲ್ತ್‌ಕೇರ್ ಅವಾರ್ಡ್ಸ್ 2025 -ಬೆಸ್ಟ್ ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಪ್ರಶಸ್ತಿಗೆ ಭಾಜನರಾದರು
ಗ್ರ್ಯಾಂಡ್ ಫೈನಲ್‌ನಲ್ಲಿ ನಾವಾರಿ ಸೀರೆ ರೌಂಡ್ ಹಾಗೂ ಈವಿನಿಂಗ್ ಗೌನ್ ರೌಂಡ್‌ಗಳೂ ನಡೆದವು. ಅಂತಿಮ ಪ್ರಶ್ನೋತ್ತರ ಸುತ್ತಿನಲ್ಲಿ, ಅವರಿಗೆ ಕೇಳಲಾದ “ನಿಮಗೆ ಮಹಿಳಾ ಸಬಲತೆ ಎಂದರೆ ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು
“ಈ ಕಾಲದಲ್ಲಿ ಮಹಿಳಾ ಸಬಲತೆ ಎಂದರೆ ಭಯವಿಲ್ಲದೆ, ಮಿತಿಗಳಿಲ್ಲದೆ ತಾನೇ ತೀರ್ಮಾನ ತೆಗೆದುಕೊಳ್ಳುವ ಶಕ್ತಿ. ಒಂದು ಪೀಳಿಗೆ ಸಬಲ ಮಹಿಳೆ, ಭವಿಷ್ಯದ ಹಲವಾರು ಪೀಳಿಗೆಯನ್ನೂ ಮೇಲಕ್ಕೆ ಎತ್ತಲು ಸಾಧ್ಯವಿದೆ.”
ಇದೇ ಉತ್ತರ ಅವರಿಗೆ ಕಿರೀಟ ಗೆಲ್ಲಿಸಿತು.
ಮುಖ್ಯ ಅತಿಥಿಗಳಾಗಿ
ವಿಜಯಾ ರಹತ್ಕರ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ.
ಮಾನ್ಯ ಅಜಿತ್ ಪವಾರ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ.
ರಾಕೇಶ್ ಬಾಪತ್, ಖ್ಯಾತ ನಟ ಕಾರ್ಯ ನಿರ್ವಹಿಸಿದರು…

Spread the love

Related post

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…
ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ… ಮಂಡ್ಯ,ಆ7,Tv10 ಕನ್ನಡ ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಕೊಲೆಯಾಗಿದೆ.ಕೆ ಆರ್ ಎಸ್ ನಲ್ಲಿ ಮಲಗಿದ್ದ ವ್ಯಕ್ತಿ ತಲೆ…

Leave a Reply

Your email address will not be published. Required fields are marked *