ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಮೈಸೂರು,ಜೂ26,Tv10 ಕನ್ನಡ

ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾದರು. ಅವರು ಮೈಸೂರು ಚೈಲ್ಡ್ ನ್ಯೂರೋಲಾಜಿ ಅಂಡ್ ರಿಹ್ಯಾಬಿಲಿಟೇಶನ್ ಸೆಂಟರ್ (MCNRC) ಸಂಸ್ಥಾಪಕರೂ ಹಾಗೂ ಪ್ರಸಿದ್ಧ ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಆಗಿದ್ದಾರೆ. ಡಾ. ಅನುಷಾ ರಾಜ್ ರವರು ಡಾ. ಕೆ.ಎಚ್. ಬಸವರಾಜ್ (ಚರ್ಮ ತಜ್ಞ) ಹಾಗೂ ಡಾ. ಭಾರತೀ ಎಂ.ಬಿ (ENT ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರು, ಜೆಎಸ್ಎಸ್ ಆಸ್ಪತ್ರೆ) ದಂಪತಿಯ ಪುತ್ರಿಯಾಗಿದ್ದಾರೆ.
ಮೆಡಿಕ್ವೀನ್ ಭಾರತ ಇಂಟರ್ ನ್ಯಾಷನಲ್ ಮಿಸ್ & ಮಿಸೆಸ್ 2025’* ಎಂಬುದು ವೈದ್ಯಕೀಯ ಕ್ಷೇತ್ರದ ಮಹಿಳೆಯರಿಗೆ ಮೀಸಲಾದ ಮೊಟ್ಟಮೊದಲ ಪೇಜಂಟ್ ಆಗಿದೆ. ಮಹಿಳಾ ಆರೋಗ್ಯದ ಸಂಭ್ರಮ’ ಎಂಬ ಧ್ಯೇಯದೊಂದಿಗೆ ವೈದ್ಯಕೀಯ ಸಮುದಾಯದ ಸಾಧನೆಗಳನ್ನು ಗೌರವಿಸುವ ಆಶಯ ಹೊಂದಿದೆ. ಸೀಸನ್ 6 ಕಾರ್ಯಕ್ರಮವು ಜೂನ್ 20 ರಿಂದ 22 ರವರೆಗೆ ಪುಣೆಯ ಟಿಪ್ ಟಾಪ್ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಮೂರು ದಿನಗಳ ಕಾಲ ನಡೆಯಿತು.ಪ್ರೀ-ಫೈನಲ್‌ನಲ್ಲಿ ಡಾ. ಅನುಷಾ ರಾಜ್ ಕೆ ಅವರಿಗೆ ವಿಶಿಷ್ಟವಾದ ಫೇಸ್ ಆಫ್ ಮೆಡಿಕ್ವೀನ್’ ಎಂಬ ಗೌರವ ನೀಡಲಾಯಿತು. ಅಲ್ಲದೆ ಅವರು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೆಲ್ತ್‌ಕೇರ್ ಅವಾರ್ಡ್ಸ್ 2025 -ಬೆಸ್ಟ್ ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಪ್ರಶಸ್ತಿಗೆ ಭಾಜನರಾದರು
ಗ್ರ್ಯಾಂಡ್ ಫೈನಲ್‌ನಲ್ಲಿ ನಾವಾರಿ ಸೀರೆ ರೌಂಡ್ ಹಾಗೂ ಈವಿನಿಂಗ್ ಗೌನ್ ರೌಂಡ್‌ಗಳೂ ನಡೆದವು. ಅಂತಿಮ ಪ್ರಶ್ನೋತ್ತರ ಸುತ್ತಿನಲ್ಲಿ, ಅವರಿಗೆ ಕೇಳಲಾದ “ನಿಮಗೆ ಮಹಿಳಾ ಸಬಲತೆ ಎಂದರೆ ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು
“ಈ ಕಾಲದಲ್ಲಿ ಮಹಿಳಾ ಸಬಲತೆ ಎಂದರೆ ಭಯವಿಲ್ಲದೆ, ಮಿತಿಗಳಿಲ್ಲದೆ ತಾನೇ ತೀರ್ಮಾನ ತೆಗೆದುಕೊಳ್ಳುವ ಶಕ್ತಿ. ಒಂದು ಪೀಳಿಗೆ ಸಬಲ ಮಹಿಳೆ, ಭವಿಷ್ಯದ ಹಲವಾರು ಪೀಳಿಗೆಯನ್ನೂ ಮೇಲಕ್ಕೆ ಎತ್ತಲು ಸಾಧ್ಯವಿದೆ.”
ಇದೇ ಉತ್ತರ ಅವರಿಗೆ ಕಿರೀಟ ಗೆಲ್ಲಿಸಿತು.
ಮುಖ್ಯ ಅತಿಥಿಗಳಾಗಿ
ವಿಜಯಾ ರಹತ್ಕರ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ.
ಮಾನ್ಯ ಅಜಿತ್ ಪವಾರ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ.
ರಾಕೇಶ್ ಬಾಪತ್, ಖ್ಯಾತ ನಟ ಕಾರ್ಯ ನಿರ್ವಹಿಸಿದರು…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *