ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಮೈಸೂರು,ಜೂ26,Tv10 ಕನ್ನಡ

ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾದರು. ಅವರು ಮೈಸೂರು ಚೈಲ್ಡ್ ನ್ಯೂರೋಲಾಜಿ ಅಂಡ್ ರಿಹ್ಯಾಬಿಲಿಟೇಶನ್ ಸೆಂಟರ್ (MCNRC) ಸಂಸ್ಥಾಪಕರೂ ಹಾಗೂ ಪ್ರಸಿದ್ಧ ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಆಗಿದ್ದಾರೆ. ಡಾ. ಅನುಷಾ ರಾಜ್ ರವರು ಡಾ. ಕೆ.ಎಚ್. ಬಸವರಾಜ್ (ಚರ್ಮ ತಜ್ಞ) ಹಾಗೂ ಡಾ. ಭಾರತೀ ಎಂ.ಬಿ (ENT ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರು, ಜೆಎಸ್ಎಸ್ ಆಸ್ಪತ್ರೆ) ದಂಪತಿಯ ಪುತ್ರಿಯಾಗಿದ್ದಾರೆ.
ಮೆಡಿಕ್ವೀನ್ ಭಾರತ ಇಂಟರ್ ನ್ಯಾಷನಲ್ ಮಿಸ್ & ಮಿಸೆಸ್ 2025’* ಎಂಬುದು ವೈದ್ಯಕೀಯ ಕ್ಷೇತ್ರದ ಮಹಿಳೆಯರಿಗೆ ಮೀಸಲಾದ ಮೊಟ್ಟಮೊದಲ ಪೇಜಂಟ್ ಆಗಿದೆ. ಮಹಿಳಾ ಆರೋಗ್ಯದ ಸಂಭ್ರಮ’ ಎಂಬ ಧ್ಯೇಯದೊಂದಿಗೆ ವೈದ್ಯಕೀಯ ಸಮುದಾಯದ ಸಾಧನೆಗಳನ್ನು ಗೌರವಿಸುವ ಆಶಯ ಹೊಂದಿದೆ. ಸೀಸನ್ 6 ಕಾರ್ಯಕ್ರಮವು ಜೂನ್ 20 ರಿಂದ 22 ರವರೆಗೆ ಪುಣೆಯ ಟಿಪ್ ಟಾಪ್ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಮೂರು ದಿನಗಳ ಕಾಲ ನಡೆಯಿತು.ಪ್ರೀ-ಫೈನಲ್‌ನಲ್ಲಿ ಡಾ. ಅನುಷಾ ರಾಜ್ ಕೆ ಅವರಿಗೆ ವಿಶಿಷ್ಟವಾದ ಫೇಸ್ ಆಫ್ ಮೆಡಿಕ್ವೀನ್’ ಎಂಬ ಗೌರವ ನೀಡಲಾಯಿತು. ಅಲ್ಲದೆ ಅವರು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೆಲ್ತ್‌ಕೇರ್ ಅವಾರ್ಡ್ಸ್ 2025 -ಬೆಸ್ಟ್ ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಪ್ರಶಸ್ತಿಗೆ ಭಾಜನರಾದರು
ಗ್ರ್ಯಾಂಡ್ ಫೈನಲ್‌ನಲ್ಲಿ ನಾವಾರಿ ಸೀರೆ ರೌಂಡ್ ಹಾಗೂ ಈವಿನಿಂಗ್ ಗೌನ್ ರೌಂಡ್‌ಗಳೂ ನಡೆದವು. ಅಂತಿಮ ಪ್ರಶ್ನೋತ್ತರ ಸುತ್ತಿನಲ್ಲಿ, ಅವರಿಗೆ ಕೇಳಲಾದ “ನಿಮಗೆ ಮಹಿಳಾ ಸಬಲತೆ ಎಂದರೆ ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು
“ಈ ಕಾಲದಲ್ಲಿ ಮಹಿಳಾ ಸಬಲತೆ ಎಂದರೆ ಭಯವಿಲ್ಲದೆ, ಮಿತಿಗಳಿಲ್ಲದೆ ತಾನೇ ತೀರ್ಮಾನ ತೆಗೆದುಕೊಳ್ಳುವ ಶಕ್ತಿ. ಒಂದು ಪೀಳಿಗೆ ಸಬಲ ಮಹಿಳೆ, ಭವಿಷ್ಯದ ಹಲವಾರು ಪೀಳಿಗೆಯನ್ನೂ ಮೇಲಕ್ಕೆ ಎತ್ತಲು ಸಾಧ್ಯವಿದೆ.”
ಇದೇ ಉತ್ತರ ಅವರಿಗೆ ಕಿರೀಟ ಗೆಲ್ಲಿಸಿತು.
ಮುಖ್ಯ ಅತಿಥಿಗಳಾಗಿ
ವಿಜಯಾ ರಹತ್ಕರ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ.
ಮಾನ್ಯ ಅಜಿತ್ ಪವಾರ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ.
ರಾಕೇಶ್ ಬಾಪತ್, ಖ್ಯಾತ ನಟ ಕಾರ್ಯ ನಿರ್ವಹಿಸಿದರು…

Spread the love

Related post

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು… ಹುಣಸೂರು,ಡಿ20,Tv10 ಕನ್ನಡ ಸುಡುತ್ತಿರುವ ಬಿಸಿನೀರಿನ ಪಾತ್ರೆಗೆ ಬಿದ್ದು ಹೆಣ್ಣುಮಗು ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ವಿಜಯಗಿರಿ ಹಾಡಿಯಲ್ಲಿ ನಡೆದಿದೆ. ಆದಿವಾಸಿ…
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ… ಹುಣಸೂರು,ಡಿ19,Tv10 ಕನ್ನಡ ಕ್ಲುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ.ನಿಜಾಂ ಮೊಹಲ್ಲಾದ ನಿವಾಸಿ ಖಾಜಾಪೀರ್(44)ಕೊಲೆಯಾದ…
ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ… ಮಂಡ್ಯ,ಡಿ19,Tv10 ಕನ್ನಡ ಜಮೀನು ವಿಚಾರದಲ್ಲಿ ಮಾಜಿ ಶಾಸಕ ಹಾಗೂ ಪುತ್ರ ವ್ಯಕ್ತಿ ಮೇಲೆ…

Leave a Reply

Your email address will not be published. Required fields are marked *