ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ…Tv10 ಇಂಪ್ಯಾಕ್ಟ್

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ…Tv10 ಇಂಪ್ಯಾಕ್ಟ್

  • Crime
  • October 25, 2025
  • No Comment
  • 16

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ…Tv10 ಇಂಪ್ಯಾಕ್ಟ್

ಶ್ರೀರಂಗಪಟ್ಟಣ,ಅ25,Tv10 ಕನ್ನಡ

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸರ್ವೇ ನಂ. 44ರಲ್ಲಿ 2.13 ಎಕರೆ ವಿಸ್ತೀರ್ಣದ ಜಮೀನಿಗೆ ಸರ್ಕಾರಿ ನಾಲಾ ಜಾಗವನ್ನೂ ಸಹ ಸೇರಿಸಿ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿದ್ದಾರೆನ್ನಲಾದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನಲೆ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಆಡಳಿತಾಧಿಕಾರಿ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅನುಮತಿ ನೀಡಿದ್ದಾರೆ.
ಬೆಳಗೊಳದ ಹಿಂದಿನ ರಾಜಸ್ವ ನಿರೀಕ್ಷಕ ಜಯರಾಮಮೂರ್ತಿ ಹಾಗೂ ಹಿಂದಿನ ಗ್ರಾಮ ಆಡಳಿತ ಅಧಿಕಾರಿ ಪುಟ್ಟಸ್ವಾಮಿ ಅವರನ್ನು ಪ್ರಾಸಿಕ್ಯೂ ಷನ್‌ಗೆ ಒಳಪಡಿಸಲು ಅನುಮತಿ ನೀಡಿದ್ದಾರೆ.ಆದರೆ ಜಯಮೂರ್ತಿ ರವರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಪ್ರಾಸಿಕ್ಯೂಷನ್ ಅನುಮತಿ ನೀಡಿದರೂ ವಿಚಾರಣೆಗೆ ಸಹಕರಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಅವರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸುವುದರಿಂದ ಕೈಬಿಡಲಾಗಿದೆ.
ಬೆಳಗೊಳ ಗ್ರಾಮದ ಸರ್ವೆ ನಂ 44 ರ 2.13 ಎಕರೆ ವಿಸ್ತೀರ್ಣದ ಪೈಕಿ 14 ಗುಂಟೆ ವಿಸ್ತೀರ್ಣ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಜಾಗ ಎಂದು ಭೂಸ್ವಾಧೀನವಾಗಿದೆ. ಈ ಜಾಗವನ್ನೂ ಸಹ ಸೇರಿಸಿ ವಸತಿ ಉದ್ದೇಶಕ್ಕಾಗಿ ಆಕ್ರಮವಾಗಿ ಸರ್ಕಾರಕ್ಕೆ ತಪ್ಪು ಮಾಹಿತಿ ಸುಳ್ಳು ದಾಖಲೆಗಳನ್ನು ನೀಡಿ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದ ವೀರಭದ್ರಯ್ಯ ನವರಿಗೆ ಭೂ ಪರಿವರ್ತನೆ ಮಾಡಲಾಗಿದೆ. ಹೀಗಾಗಿ ಇವರ ವಿರುದ್ಧ ಭೂ ಕಂದಾಯ ಕಾಯಿದೆ 1964ರ ಕಲಂ 19: ಎ ಮತ್ತು 95ದಂತೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸುವಂತೆ ಬೆಳಗೊಳ ರೆವೆನ್ಯೂ ಇನ್ಸ್ಪೆಕ್ಟರ್ ಸಿ.ಬಸವರಾಜು ಕೆ ಆರ್ ಸಾಗರ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು.ಈ ಸುದ್ದಿ ಕೆಲವು ದಿನಗಳ ಹಿಂದೆ Tv10 ಕನ್ನಡ ವಾಹಿನಿಯಲ್ಲಿ ವರದಿ ಮಾಡಲಾಗಿತ್ತು.
ಈ ವಿಚಾರವಾಗಿ ನೌಕರರನ್ನು ವಿಚಾರಣೆಗೆ ಒಳಪಡಿಸಿದಾಗ ಪುಟ್ಟಸ್ವಾಮಿ ಅವರು ಭೂ ಪರಿವರ್ತನೆ ಸಂಬಂಧ ಅರ್ಜಿದಾರರ ಸಮಕ್ಷಮದಲ್ಲಿ ಮಹಜರ್ ಜರುಗಿಸಿ ತಾವು ಮಹಜರ್ ಗೆ ಸಹಿ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ, ಕಾವೇರಿ ನೀರಾವರಿ ನಿಗಮದ 14 ಕುಂಟೆ ಭೂ ಸ್ವಾಧೀನವಾಗಿದ್ದರು ಅದನ್ನು ನಮೂದಿಸದಿರುವುದು ಕರ್ತವ್ಯ ಲೋಪಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಹಿಂದಿನ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗ ಪುಟ್ಟಸ್ವಾ ಅವರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸಲು ಅನುಮತಿ ನೀಡುವಂತೆ ಕೆ ಆರ್ ಸಾಗರ ಪೊಲೀಸ್ ಸಬ್‌ಇನ್ಸ್ಪೆಕ್ಟ‌ರ್ ಅವರು ದಾಖಲೆಗಳ ಸಮೇತ ಜಿಲ್ಲಾಧಿಕಾರಿಗಳಿಗೆ ಒದಗಿಸಿದ್ದರು.

ಬೆಳಗೊಳ ಗ್ರಾಮದ ಸ.ನಂ. 44ರಲ್ಲಿನ 14 ಗುಂಟೆ ವರುಣ ನಾಲಾ ನಿರ್ಮಾಣಕ್ಕೆ 28.8.199 ಅನ್ವಯದಂತೆ ಅಧಿಸೂಚನೆಯಾಗಿ ಭೂ ಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟಿದೆ. ವರುಣಾ ನಾಲೆಗಂದು ಭೂಸ್ವಾಧೀನವಾದ ಜಮೀನು ಭೂ ಪರಿಹಾರವಾಗಿ 29.199 ರು.ಗಳನ್ನು ವೆಂಕಟಲಕ್ಷ್ಮಮ್ಮ ಅವರು ಪಡೆದುಕೊಂಡಿರುವುದು ದಾಖಲೆಗಳಿಂದ ಕಂಡು ಬಂದಿರುತ್ತದೆ, ಕಂದಾಯ ದಾಖಲೆಗಳಲ್ಲಿ ಇಂಡೀಕರಣವಾದ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಂಡು 2013ರ ವೇಳೆ ಜಮೀನಿನ ಮಾಲೀಕತ್ವ ಹೊಂದಿದ್ದ ಬಸವರಾಜು 10.1.2013ರಲ್ಲಿ 14 ಗುಂಟೆಯನ್ನು ಒಳಗೊಂಡಂತೆ ಪೂರ್ಣ 2.13 ಗುಂಟೆ ಜಮೀನನ್ನು ವೀರಭದ್ರಯ್ಯ ನವರಿಗೆ ಮಾರಾಟ ಮಾಡಿರುವುದು ಕಂಡುಬಂದಿರುತ್ತದೆ.
ಜಮೀನಿನ ಸ್ಥಳ ತನಿಖೆ ನಡೆಸಿ ವಸ್ತು ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದು ಭೂ ಪರಿವರ್ತನೆಗೆ ಶಿಫಾರಸ್ಸು ಮಾಡಿದೆ. 2.13 ಎಕರೆ ಜಮೀನಿಗೆ ಭೂ ಪರಿವರ್ತನೆ ಮಾಡಲು ರಾಜಸ್ವ ನಿರೀಕ್ಷಕರಾಗಿದ್ದ ಜಯರಾಮಮೂರ್ತಿ ಹಾಗೂ ಗ್ರಾಮ ಲೆಕ್ಕಿಗೆ ಪುಟ್ಟಸ್ವಾಮಿ ಸಲ್ಲಿಸಿ ಕರ್ತವ್ಯ ಲೋಪವೆಸಗಿ ರುವುದು ಸ್ಪಷ್ಟವಾಗಿದೆ ಎಂದು ತಿಳಿಸಲಾಗಿದೆ.ಇದು Tv10 ಕನ್ನಡ ವಾಹಿನಿ ವರದಿಯ ಫಲಶೃತಿಯಾಗಿದೆ…

Spread the love

Related post

ಸಂಸದ ಯದುವೀರ್ ತಾತ ವಿಧಿವಶ…ಸಂಸದರ ಅಧಿಕೃತ ಕಾರ್ಯಕ್ರಮ ಮುಂದೂಡಿಕೆ…

ಸಂಸದ ಯದುವೀರ್ ತಾತ ವಿಧಿವಶ…ಸಂಸದರ ಅಧಿಕೃತ ಕಾರ್ಯಕ್ರಮ ಮುಂದೂಡಿಕೆ…

ಮೈಸೂರು,ಅ23,Tv10 ಕನ್ನಡ ಸಂಸದರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ತಾತ ಮದನ್ ಗೋಪಾಲ್ ರಾಜ್ ಅರಸ್ ವಿಧಿ ವಶರಾಗಿದ್ದಾರೆ.ಈ ಹಿನ್ನಲೆಯದುವೀರ್ ಅಧಿಕೃತ ಕಾರ್ಯಕ್ರಮಗಳು ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ.93 ವರ್ಷ…
ಹೃದಯಾಘಾತಕ್ಕೆ ರೈತ ಬಲಿ…ಜಮೀನು ಉಳುಮೆ ಮಾಡುವ ವೇಳೆ ಘಟನೆ…

ಹೃದಯಾಘಾತಕ್ಕೆ ರೈತ ಬಲಿ…ಜಮೀನು ಉಳುಮೆ ಮಾಡುವ ವೇಳೆ ಘಟನೆ…

ಹೃದಯಾಘಾತಕ್ಕೆ ರೈತ ಬಲಿ…ಜಮೀನು ಉಳುಮೆ ಮಾಡುವ ವೇಳೆ ಘಟನೆ… ಮಂಡ್ಯ,ಅ23,Tv10 ಕನ್ನಡ ಜಮೀನಲ್ಲಿ ಉಳುಮೆ ಮಾಡುವ ವೇಳೆ ಹೃದಯಾಘಾತದಿಂದ ರೈತ ಸಾವನ್ನಪ್ಪಿದ ಘಟನೆಮಂಡ್ಯ ತಾಲ್ಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ…
ಹನೂರು :ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆ ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ತೆಪ್ಪೋತ್ಸವ ನೆರವೇರಿತು.

ಹನೂರು :ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆ ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರಾ…

ಹನೂರು :ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆ ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ತೆಪ್ಪೋತ್ಸವ ನೆರವೇರಿತು. ದೀಪಾವಳಿ ಜಾತ್ರಾ ಮಹೋತ್ಸವದ…

Leave a Reply

Your email address will not be published. Required fields are marked *