ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ…
- TV10 Kannada Exclusive
- May 19, 2026
- No Comment
- 1
ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ…
ಶ್ರೀರಂಗಪಟ್ಟಣ,ಮೇ19,Tv10 ಕನ್ನಡ
ಅಕ್ರಮ ಗಣಿಗಾರಿಕೆ ವಿರುದ್ಧ ಮಂಡ್ಯ ಜಿಲ್ಲಾಡಳಿತದ ಸಮರ ಸಾರಿದೆ.ನಿಷೇಧದ ನಡುವೆಯೂ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಮೇಲೆ ದಾಳಿ ನಡೆಸಿದೆ.ಗಣಿಗಾರಿಕೆಗೆ ನಿಷೇಧಿತ ಸ್ಪೋಟಕಗಳ ಬಳಕೆ ಮಾಡುತ್ತಿದ್ದ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.
ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನಾ ಯಾದವ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಮುಡುಗುತೊರೆ ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ.
ಸರ್ಕಾರಿ ಗೋಮಾಳದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ.
ಹಂಗರಹಳ್ಳಿಯ ಚೌಡೇಶ್ವರಿ ಕ್ರಷರ್ ಮಾಲೀಕ ಪುನೀತ್ ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆ.ಕಲ್ಲು ಬಂಡೆ ಸಿಡಿಸಲು ನಿಷೇಧಿತ ಸ್ಫೋಟಕ ಬಳಕೆಯಾಗುತ್ತಿತ್ತು.
ಎರಡು ಬಾಕ್ಸ್ ಜಿಲೆಟಿನ್ ಕಡ್ಡಿಗಳು, ಮೂರು ಇಟಾಚಿ ಯಂತ್ರಗಳು, ಕಲ್ಲು ಬಂಡೆ ಕೊರೆಯುವ ಎರಡು ಕಂಪ್ರೆಷರ್ ಯಂತ್ರಗಳು, ಸ್ಫೋಟಕ್ಕೆ ಬಳಸುವ ಟ್ಯೂಬ್ ಗಳುಲನ್ನ ವಶಕ್ಕೆ ಪಡೆಯಲಾಗಿದೆ.
ನಿಷೇಧಿತ ಸ್ಪೋಟಕ ಕಾಯ್ದೆಯಡಿ
ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…