ವಿಶ್ವಹುಲಿ ದಿನಾಚರಣೆ…ಹುಲಿ ದತ್ತು ಪಡೆದ ಸಚಿವ ಮುರುಗೇಶ್ ನಿರಾಣಿ…
- Mysore
- July 29, 2022
- No Comment
- 105
ವಿಶ್ವಹುಲಿ ದಿನಾಚರಣೆ…ಹುಲಿ ದತ್ತು ಪಡೆದ ಸಚಿವ ಮುರುಗೇಶ್ ನಿರಾಣಿ…
ಮೈಸೂರು,ಜುಲೈ29,Tv10 ಕನ್ನಡ
ವಿಶ್ವಹುಲಿ ದಿನಾಚರಣೆ ದಿನವಾದ ಇಂದು ಸಚಿವ ಮುರುಗೇಶ್ ನಿರಾಣಿ ರವರು ಮೈಸೂರು ಮೃಗಾಲಯದಲ್ಲಿ ಹುಲಿ ದತ್ತು ಪಡೆದಿದ್ದಾರೆ.
ಮಾನ್ಯ ಎಂಬ ಹುಲಿಯನ್ನು ದತ್ತು ಪಡೆದಿದ್ದಾರೆ.ಸಚಿವ ಮುರಗೇಶ ನಿರಾಣಿ ರವರ ಮೊಮ್ಮಗ ಸಮರ್ಥ್ ಎಂ ವಿಜಯ ನಿರಾಣಿ ಹೆಸರಿನಲ್ಲಿ 1ವರ್ಷ ದ ಅವಧಿಗೆ 2 ಲಕ್ಷ ದೇಣಿಗೆ ನೀಡಿ ದತ್ತು ಪಡೆದಿದ್ದಾರೆ.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ್ ರವರಿಗೆ ನಿರಾಣಿ ಗ್ರೂಪ್ ನ ಆಪ್ತರಾದ ಕೇಬಲ್ ಮಹೇಶ್ ರವರು ಚೆಕ್ ಹಸ್ತಾಂತರಿಸಿದ್ದಾರೆ.ಈ ಸಂದರ್ಭದಲ್ಲಿ ಬಿಜೆಪಿ ನಗರ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಜೋಗಿ ಮಂಜು ,ನಗರ ಪಾಲಿಕಾ ಸದಸ್ಯರಾದ ಕೆ. ಜೆ. ರಮೇಶ್ ,ವಿಕ್ರಂ ಅಯ್ಯಂಗಾರ್,
ಕರ್ನಾಟಕ ಮೃಗಾಲಯದ ಉಪ ನಿರ್ದೇಶಕರು ಮೋಹನ್ ಬಿದರಿ,ರಘು,ರಮೇಶ್ ,ಶ್ರೀರಂಗಪಟ್ಟಣದ ಬಿಜೆಪಿ ಮುಖಂಡರಾದ ಶ್ರೀಧರ್ ,ಪರಮೇಶ್ ಗೌಡ ,ಶ್ರೀನಿವಾಸ ಹಾಗೂ ಇನ್ನಿತರರು ಹಾಜರಿದ್ದರು..