MDA ವಿಶೇಷ ಭೂ ಸ್ವಾಧೀನ ಇಲಾಖೆ ವ್ಯವಸ್ಥಾಪಕಿ ಬಿ.ಶೃತಿ ಎತ್ತಂಗಡಿ…ಕ್ರಿಮಿನಲ್ ಪ್ರಕರಣದಲ್ಲಿ ಭಾಗಿ ಆರೋಪ ಹಿನ್ನಲೆ…ಮಾತೃ ಇಲಾಖೆಗೆ ಹಿಂದಿರುಗುವಂತೆ ಸೂಚನೆ…ಸೇವೆಯಿಂದ ಬಿಡುಗಡೆ ಮಾಡಲು ಎಂಡಿಎ ಮೀನಾಮೇಷ…
- TV10 Kannada Exclusive
- March 10, 2026
- No Comment
- 10


MDA ವಿಶೇಷ ಭೂ ಸ್ವಾಧೀನ ಇಲಾಖೆ ವ್ಯವಸ್ಥಾಪಕಿ ಬಿ.ಶೃತಿ ಎತ್ತಂಗಡಿ…ಕ್ರಿಮಿನಲ್ ಪ್ರಕರಣದಲ್ಲಿ ಭಾಗಿ ಆರೋಪ ಹಿನ್ನಲೆ…ಮಾತೃ ಇಲಾಖೆಗೆ ಹಿಂದಿರುಗುವಂತೆ ಸೂಚನೆ…ಸೇವೆಯಿಂದ ಬಿಡುಗಡೆ ಮಾಡಲು ಎಂಡಿಎ ಮೀನಾಮೇಷ…
ಮೈಸೂರು,ಮಾ10,Tv10 ಕನ್ನಡ
ಮೈಸೂರು ಅಭಿವೃದ್ದಿ ಪ್ರಾಧಿಕಾರ ವಿಶೇಷ ಭೂಸ್ವಾಧೀನ ಇಲಾಖೆ ವ್ಯವಸ್ಥಾಪಕಿ ಬಿ.ಶೃತಿ ರವರನ್ನ ವರ್ಗಾವಣೆ ಮಾಡಲಾಗಿದೆ.ಭ್ರಷ್ಟಾಚಾರ ನಿಗೃಹ ದಳದಲ್ಲಿ ಶೃತಿ ರವರು ಕ್ರಮಿನಲ್ ಸ್ವರೂಪದ ಅಪರಾಧ ಪ್ರಕರಣ ಎದುರಿಸುತ್ತಿದ್ದು ಇಲಾಖಾ ವಿಚಾರಣೆ ನಡೆಯುತ್ತಿರುವ ಹಿನ್ನಲೆ ಮಾತೃ ಇಲಾಖೆಯಾದ ಪ್ರಾದೇಶಿಕ ಆಯುಕ್ತರ ಕಾರ್ಯಾಲಯಕ್ಕೆ ಹಿಂದಿರುಗುವಂತೆ ಸರ್ಕಾರ ಆದೇಶಿಸಿತ್ತು.ಆದರೆ ಬಾಕಿ ಇರುವ ಸರ್ಕಾರಿ ಕೆಲಸಗಳನ್ನ ಪೂರೈಸುವ ದೃಷ್ಟಿಯಿಂದ ಎಂಡಿಎ ಶೃತಿ ರವರನ್ನ ಬಿಡುಗಡೆ ಮಾಡದೆ ಉಳಿಸಿಕೊಂಡಿತ್ತು.ಆದರೆ ಪ್ರಕರಣದ ಆರೋಪವನ್ನ ಗಂಭೀರವಾಗಿ ಪರಿಗಣಿಸಿರುವ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಶೃತಿ ರವರನ್ನ ಸೇವೆಯಿಂದ ಬಿಡುಗಡೆ ಮಾಡಿ ಮಾತೃ ಇಲಾಖೆಗೆ ಹಿಂದಿರುಗುವಂತೆ ಆದೇಶಿಸಿದೆ.ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಿಂದ ಆದೇಶ ಪತ್ರ ರವಾನೆಯಾಗಿ 5 ದಿನ ಕಳೆದರೂ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿದೆ.ಸಧ್ಯ ಎಂಡಿಎ ಆಯುಕ್ತರಿಗೆ ಪತ್ರ ಬರೆದಿರುವ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಶೃತಿ ರವರನ್ನ ಬಿಡುಗಡೆ ಮಾಡುವಂತೆ ಸೂಚನೆ ನೀಡಿದೆ…