ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…ಕೊಲೆ ಪ್ರಕರಣ ದಾಖಲು…ಗಂಡ,ಮಾವ ಅರೆಸ್ಟ್…ತಡವಾಗಿ ಬೆಳಕಿಗೆ ಬಂದ ಪ್ರಕರಣ…

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…ಕೊಲೆ ಪ್ರಕರಣ ದಾಖಲು…ಗಂಡ,ಮಾವ ಅರೆಸ್ಟ್…ತಡವಾಗಿ ಬೆಳಕಿಗೆ ಬಂದ ಪ್ರಕರಣ…

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…ಕೊಲೆ ಪ್ರಕರಣ ದಾಖಲು…ಗಂಡ,ಮಾವ ಅರೆಸ್ಟ್…ತಡವಾಗಿ ಬೆಳಕಿಗೆ ಬಂದ ಪ್ರಕರಣ…

ನಂಜನಗೂಡು,ಸೆ24,Tv10 ಕನ್ನಡ
ವರದಕ್ಷಿಣೆ ದಾಹಕ್ಕೆ ಗೃಹಿಣಿ ಬಲಿಯಾದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ನಡೆದಿದೆ.ಘಟನೆಗೆ ಸಂಭಂಧಿಸಿದಂತೆ ಪತಿ ಸೇರಿದಂತೆ 5 ಮಂದಿ ವಿರುದ್ದ FIR ದಾಖಲಾಗಿದೆ.ಹುಲ್ಲಹಳ್ಳಿ ಠಾಣೆ ಪೊಲೀಸರು ಗಂಡ ಹಾಗೂ ಮಾವನನ್ನ ಅರೆಸ್ಟ್ ಮಾಡಿದ್ದಾರೆ.ಘಟನೆ ನಡೆದು 22 ದಿನಗಳ ನಂತರ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಮಮತಾ(20) ಮೃತ ದುರ್ದೈವಿ.ಪತಿ ಪ್ರೇಮಚಂದ್ರ ನಾಯಕ ಹಾಗೂ ಮಾವ ಶಂಕರನಾಯಕ ಇದೀಗ ಪೊಲೀಸರ ಅತಿಥಿ.2021 ಮಾರ್ಚ್ ನಲ್ಲಿ ಮಮತಾ ಹಾಗೂ ಪ್ರೇಮಚಂದ್ರನಾಯಕ ವಿವಾಹ ಜರುಗಿತ್ತು.ಮದುವೆ ಸಂಧರ್ಭದಲ್ಲಿ 30 ಗ್ರಾಂ ಚಿನ್ನ 80 ಸಾವಿರ ನಗದು ವರದಕ್ಷಿಣೆಯಾಗಿ ನೀಡಿ ಅದ್ದೂರಿಯಿಂದ ಮದುವೆ ಮಾಡಿಕೊಡಲಾಗಿತ್ತು.ನಂತರದ ದಿನಗಳಲ್ಲಿ ವರದಕ್ಷಿಣೆ ವಿಚಾರದಲ್ಲಿ ಕ್ಯಾತೆ ತೆಗೆದ ಅಳೀಮಯ್ಯ ಮಮತಾ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದ.ಇದಕ್ಕೆ ಮನೆಯವರ ಕುಮ್ಮಕ್ಕೂ ಇತ್ತು.ಗರ್ಭಿಣಿ ಆಗಿದ್ದ ಸಂಧರ್ಭದಲ್ಲಿ ಗರ್ಭಪಾತ ಮಾಡಿಸಿ ಅಟ್ಟಹಾಸ ಮೆರೆದಿದ್ರು.ಹೀಗಿದ್ದೂ ಕಿರುಕುಳ ನೀಡುತ್ತಿದ್ದ ಕಾರಣ ಮಗಳನ್ನ ಹೆತ್ತವರು ಮನೆಗೆ ಕರೆತಂದಿದ್ರು.ಈ ಮಧ್ಯೆ ತನ್ನ ತಪ್ಪಿನ ಅರಿವಾಗಿದೆ ಎಂದು ಕಾರಣ ನೀಡಿದ ಅಳೀಮಯ್ಯ ಅತ್ತೆ ಮನೆ ಸೇರಿಕೊಂಡ.ಕಳೆದ ತಿಂಗಳು ಗೌರಿಗಣೇಶ ಹಬ್ಬದ ದಿನ ಮಮತ ನೇಣಿನ ಕುಣಿಕೆಯಲ್ಲಿ ಕಾಣಿಸಿಕೊಂಡಳು.ಮಮತ ಸಾವನ್ನಪ್ಪಿದ ಮರುಕ್ಷಣವೇ ಪ್ರೇಮಚಂದ್ರನಾಯಕ್ ಎಸ್ಕೇಪ್ ಆದ.ಮಗಳನ್ನ ಪತಿ ಪ್ರೇಮಚಂದ್ರನಾಯಕ ಕೊಲೆ ಮಾಡಿದ್ದಾನೆ.ಕೃತ್ಯಕ್ಕೆ ಮನೆಯವರು ಕುಮ್ಮಕ್ಕು ನೀಡಿದ್ದಾರೆಂದು ಮಮತಾ ತಾಯಿ ಭಾಗ್ಯ ತಡವಾಗಿ ಪ್ರಕರಣ ದಾಖಲಿಸಿದ್ದಾರೆ.ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರೇಮನಾಯಕ,ಯಶೋಧ,ಚಿನ್ನ,ಶಂಕರನಾಯಕ,ಅನುಜ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ…

Spread the love

Related post

ಯದುವೀರ್ ದಂಪತಿಯಿಂದ ಮಹಾರಾಜ ಕಾಲೇಜು ಮೈದಾನ ಸ್ವಚ್ಛತೆ…ಸಾಥ್ ನೀಡಿದ ಅಭಿಮಾನಿಗಳು…

ಯದುವೀರ್ ದಂಪತಿಯಿಂದ ಮಹಾರಾಜ ಕಾಲೇಜು ಮೈದಾನ ಸ್ವಚ್ಛತೆ…ಸಾಥ್ ನೀಡಿದ ಅಭಿಮಾನಿಗಳು…

ಮೈಸೂರು,ಏ15,Tv10 ಕನ್ನಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪತ್ನಿ ತ್ರಿಶಿಖಾ ಒಡೆಯರ್ ಅವರೊಂದಿಗೆ ಸೇರಿ ಮಹಾರಾಜ ಕಾಲೇಜು ಮೈದಾನಕ್ಕೆ…
ಮೈಸೂರು:ಗೊಡೌನ್ ನಲ್ಲಿ ಆಕಸ್ಮಿಕ ಬೆಂಕಿ…ಲಕ್ಷಾಂತರ ಮೌಲ್ಯದ ಪದಾರ್ಥಗಳು ನಾಶ…

ಮೈಸೂರು:ಗೊಡೌನ್ ನಲ್ಲಿ ಆಕಸ್ಮಿಕ ಬೆಂಕಿ…ಲಕ್ಷಾಂತರ ಮೌಲ್ಯದ ಪದಾರ್ಥಗಳು ನಾಶ…

ಮೈಸೂರು,ಏ15,Tv10 ಕನ್ನಡ ಸೆಂಟರಿಂಗ್ ಪದಾರ್ಥಗಳನ್ನ ಇರಿಸಲಾದ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಮೈಸೂರಿನ ಗೌಸಿಯಾನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.ಬೆಂಕಿಯ ಅವಘಢಕ್ಕೆ ಲಕ್ಷಾಂತರ ಮೌಲ್ಯದ ಪದಾರ್ಥಗಳು ಸುಟ್ಟು ಭಸ್ಮವಾಗಿದೆ.ಗೌಸಿಯಾನಗರದ…
ಮೈಸೂರು: ಕೇಂದ್ರ ಕಾರಾಗೃಹ ಸಜಾಖೈದಿ ಬಳಿ ಮೊಬೈಲ್ ಫೋನ್ ಪತ್ತೆ…

ಮೈಸೂರು: ಕೇಂದ್ರ ಕಾರಾಗೃಹ ಸಜಾಖೈದಿ ಬಳಿ ಮೊಬೈಲ್ ಫೋನ್ ಪತ್ತೆ…

ಮೈಸೂರು,ಏ14,Tv10 ಕನ್ನಡ ಮೈಸೂರು ಕೇಂದ್ರ ಕಾರಾಗೃಹದಲ್ಲಿರುವ ಸಜಾ ಖೈದಿ ಬಳಿ ಮೊಬೈಲ್ ಫೋನ್ ಪತ್ತೆಯಾಗಿದೆ.ಸಜಾಬಂಧಿಯಾಗಿ ಶಿಕ್ಷೆ ಅನುಭವಿಸುತ್ತಿರುವ ವಸೀಂ ಪಾಷಾ ಬಳಿ ಮೊಬೈಲ್ ಪತ್ತೆಯಾಗಿದೆ.ಹಲವಾರು ದಿನಗಳಿಂದ ಮೊಬೈಲ್ ಬಳಕೆ…

Leave a Reply

Your email address will not be published. Required fields are marked *