ಕೊನೆಗೂ ಸಿಕ್ಕಿಬಿದ್ದ ಮೊಸಳೆ…ಸ್ಥಳೀಯರಲ್ಲಿ ನಿವಾರಣೆಯಾದ ಆತಂಕ…

ಕೊನೆಗೂ ಸಿಕ್ಕಿಬಿದ್ದ ಮೊಸಳೆ…ಸ್ಥಳೀಯರಲ್ಲಿ ನಿವಾರಣೆಯಾದ ಆತಂಕ…

  • Mysore
  • November 17, 2022
  • No Comment
  • 266

ಕೊನೆಗೂ ಸಿಕ್ಕಿಬಿದ್ದ ಮೊಸಳೆ…ಸ್ಥಳೀಯರಲ್ಲಿ ನಿವಾರಣೆಯಾದ ಆತಂಕ…

ಮೈಸೂರು,ನ17,Tv10 ಕನ್ನಡ
ಹಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಮೊಸಳೆ ಕೊನೆಗೂ ಸಿಕ್ಕಿಬಿದ್ದಿದೆ.ಅರಣ್ಯ ಇಲಾಖೆ,ಮೈಸೂರು ಮೃಗಾಲಯ ಹಾಗೂ ಮೈಸೂರು ಮಹಾನಗರ ಪಾಲಿಕೆಯು ಸ್ಥಳೀಯರ ನೆರವಿನಿಂದ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ.ಇಂದು ನಡೆದ ಇಡೀ ದಿನದ ಕಾರ್ಯಾಚರಣೆಯಲ್ಲಿ ಕಣ್ಣಾಮುಚ್ಚಾಲೆ ಆಡಿಸುತ್ತಿದ್ದ ಮೊಸಳೆ ಸೆರೆ ಸಿಕ್ಕಿದೆ.

ರಾಮಾನುಜಾ ರಸ್ತೆಯ 9 ನೇ ಕ್ರಾಸ್ ಬಳಿ ಚರಂಡಿ ನೀರಿನಲ್ಲಿ ಕಳೆದ ಒಂದು ತಿಂಗಳಿಂದ ಹತ್ತಾರು ಬಾರಿ ಕಾಣಿಸಿಕೊಂಡಿದ್ದ ಮೊಸಳೆ ಸ್ಥಳೀಯರಿಗೆ ಆತಂಕ ಸೃಷ್ಟಿಸಿತ್ತು.ಕೆಲವು ದಿನಗಳ ಹಿಂದೆ ಕರುವೊಂದನ್ನ ಬಲಿ ಪಡೆದಿತ್ತು.ಮೊಸಳೆಯನ್ನ ಸೆರೆ ಹಿಡಿಯುವಂತೆ ಸ್ಥಳೀಯ ನಿವಾಸಿಗಳು ತೀವ್ರ ಒತ್ತಡ ಹೇರಿದ್ದರು.ಅರಣ್ಯಾಧಿಕಾರಿಗಳು ನಡೆಸಿದ ಕೆಲವು ಪ್ರಯತ್ನಗಳು ವಿಫಲವಾಗಿದ್ದವು.ಚೆಳ್ಳೆಹಣ್ಣು ತಿನ್ನಿಸುತ್ತಾ ಕಣ್ಣಾಮುಚ್ಚಾಲೆ ಆಟವಾಡಿಸುತ್ತಿತ್ತು.ಇಂದು ಕಾರ್ಯಾಚರಣೆಯನ್ನ ತೀವ್ರಗೊಳಿಸಿದ ಸಿಬ್ಬಂದಿಗಳು ಮೊಸಳೆಯನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಸ್ಥಳೀಯ ಕಾರ್ಪೊರೇಟರ್ ಹಾಗೂ ಶಾಸಕ ರಾಮದಾಸ್ ಸಹ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಗೆ ಸಹಕರಿಸಿದ್ದರು.ಇದೀಗ ಮೊಸಳೆ ಸೆರೆಸಿಕ್ಕಿದ್ದು ಸ್ಥಳೀಯರಲ್ಲಿ ಆತಂಕ ನಿವಾರಣೆಯಾದಂತಾಗಿದೆ.ಸೆರೆ ಸಿಕ್ಕ ಮೊಸಳೆಯನ್ನ ಕಬಿನಿ ಜಲಾಶಯದಲ್ಲಿ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ…

Spread the love

Related post

ಹುಲಿಮರಿ ಸೆರೆ…ತಾಯಿ ಹಾಗೂ ಇನ್ನೆರಡು ಮರಿಗಳ ಸೆರೆಗಾಗಿ ಕಾರ್ಯಾಚರಣೆ…

ಹುಲಿಮರಿ ಸೆರೆ…ತಾಯಿ ಹಾಗೂ ಇನ್ನೆರಡು ಮರಿಗಳ ಸೆರೆಗಾಗಿ ಕಾರ್ಯಾಚರಣೆ…

ಹುಣಸೂರು,ನ13,Tv10 ಕನ್ನಡ ಮೈಸೂರು ಜಿಲ್ಲೆಯ ಹುಣಸೂರು ತಾಲೂಕುಚಿಕ್ಕಾಡಿಗನಹಳ್ಳಿಯಲ್ಲಿ ಹುಲಿ ಮರಿ ಸೆರೆಯಾಗಿದೆ.ಗ್ರಾಮದಲ್ಲಿ ಆಗಾಗ ತಾಯಿ ಹುಲಿ ಮೂರು ಮರಿಗಳು ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು.ಈ ಹಿನ್ನೆಲೆ ಅರಣ್ಯ ಇಲಾಖೆ ಕೂಂಬಿಂಗ್‌…
ಸೆಂಟರಿಂಗ್ ಸೀಲಿಂಗ್ ಕುಸಿದು ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ…ಕಟ್ಟಡ ಮಾಲೀಕ ಸೇರಿದಂತೆ ನಾಲ್ವರ ವಿರುದ್ದ FIR

ಸೆಂಟರಿಂಗ್ ಸೀಲಿಂಗ್ ಕುಸಿದು ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ…ಕಟ್ಟಡ ಮಾಲೀಕ ಸೇರಿದಂತೆ…

ಮೈಸೂರು,ನ13,Tv10 ಕನ್ನಡ ಸೆಂಟರಿಂಗ್ ಸೀಲಿಂಗ್ ಕುಸಿದು ಕೂಲಿಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ನಡೆದಿದೆ.ಸುರಕ್ಷತಾ ಕ್ರಮ ಅನುಸರಿಸದ ಕಟ್ಟಡ ಮಾಲೀಕ ಸೇರಿದಂತೆ ನಾಲ್ವರ ವಿರುದ್ದ ನಜರಬಾದ್…
ತಿರುಪತಿ ಲಡ್ಡುಗೆನಕಲಿ ತುಪ್ಪ ಬಳಕೆ ಧೃಢ…ಕಠಿಣ ಶಿಕ್ಷೆಗೆ ಆಗ್ರಹ…

ತಿರುಪತಿ ಲಡ್ಡುಗೆನಕಲಿ ತುಪ್ಪ ಬಳಕೆ ಧೃಢ…ಕಠಿಣ ಶಿಕ್ಷೆಗೆ ಆಗ್ರಹ…

ಮೈಸೂರು,ನ11,Tv10 ಕನ್ನಡ ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ನಕಲಿ ತುಪ್ಪ ಬಳಸಿರುವುದು ಎಸ್‌ಐಟಿ ತನಿಖೆಯಲ್ಲಿ ದೃಢಪಟ್ಟಿದ್ದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್…

Leave a Reply

Your email address will not be published. Required fields are marked *