ನನ್ನನ್ನ ಸ್ವಾಭಿಮಾನ ಚಕ್ರವರ್ತಿ ಅಂತ ಕರೀತಾರೆ ಮಿಸ್ಟರ್ ವಿಶ್ವನಾಥ್…ಹಳ್ಳಿಹಕ್ಕಿಗೆ ತಿರುಗೇಟು ಕೊಟ್ಟ ಶ್ರೀನಿವಾಸ್ ಪ್ರಸಾದ್…

ನನ್ನನ್ನ ಸ್ವಾಭಿಮಾನ ಚಕ್ರವರ್ತಿ ಅಂತ ಕರೀತಾರೆ ಮಿಸ್ಟರ್ ವಿಶ್ವನಾಥ್…ಹಳ್ಳಿಹಕ್ಕಿಗೆ ತಿರುಗೇಟು ಕೊಟ್ಟ ಶ್ರೀನಿವಾಸ್ ಪ್ರಸಾದ್…

  • Politics
  • December 16, 2022
  • No Comment
  • 206

ನನ್ನನ್ನ ಸ್ವಾಭಿಮಾನ ಚಕ್ರವರ್ತಿ ಅಂತ ಕರೀತಾರೆ ಮಿಸ್ಟರ್ ವಿಶ್ವನಾಥ್…ಹಳ್ಳಿಹಕ್ಕಿಗೆ ತಿರುಗೇಟು ಕೊಟ್ಟ ಶ್ರೀನಿವಾಸ್ ಪ್ರಸಾದ್…

ಮೈಸೂರು,ಡಿ16,Tv10 ಕನ್ನಡ
ಅಲೆಮಾರಿ ರಾಜಾ ಎಂದು ಕರೆದ ವಿಶ್ವನಾಥ್ ಗೆ ಸಂಸದ ಶ್ರೀನಿವಾಸ್ ಪ್ರಸಾದ್ ಮೈಸೂರಿನಲ್ಲಿ ತಿರುಗೇಟು ಕೊಟ್ಟಿದ್ದಾರೆ.ನನ್ನನ್ನ ಜನ ಸ್ವಾಭಿಮಾನ ಚಕ್ರವರ್ತಿ ಅಂತಾ ಕರಿತಾರೆ ಮಿಸ್ಟರ್ ವಿಶ್ವನಾಥ್.ನನ್ನ ಅಲೆಮಾರಿಯ ರಾಜ ಅಂತಾ ಕರೀತಿರಾ…?
ಈವರೆಗೂ ನನ್ನ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ.ವಿಶ್ವನಾಥ್ ನೆನಪಿಸಿಕೋ.ಬೆನ್ನಿಗೆ ಚೂರಿಗೆ ಹಾಕಿ ದೇವರಾಜ ಅರಸ್ ಬಿಟ್ಟು ಇಂದಿರಾ ಕಾಂಗ್ರೆಸ್ ಗೆ ರಾತ್ರೋ ರಾತ್ರಿ ಓಡಿ ಬಂದಿದ್ದು ನೀನೆ ಅಲ್ಲವೇ.
ಇಂದಿರಾ ಕಾಂಗ್ರೆಸ್ ಗೆ ಓಡಿ ಬಂದದ್ದು ನೆನಪಿಲ್ವಾ ವಿಶ್ವನಾಥ್
ಕೆ.ಆರ್. ನಗರದಲ್ಲಿ ಏನೆಲ್ಲಾ ಮಾಡಿದೆ ಎಂದು ಕಿಡಿ ಕಾರಿದರು.
ನಿನ್ನ ವಿರುದ್ದ ಸ್ಪರ್ಧೆ ಮಾಡಿದ್ರು ಅನ್ನೊ ಕಾರಣಕ್ಕೆ ಎಚ್.ಎಸ್. ನಂಜಪ್ಪ,‌ ಮಂಚನಹಳ್ಳಿ ಮಹದೇವು ಎಲ್ಲರ ಮೇಲೂ ಆಣೆ ಪ್ರಮಾಣ ಮಾಡಿದೆ
ನಿನ್ನನ್ನು ಕೆ.ಎಚ್. ಪಾಟೀಲರು ಪುಂಡ ಅಂತಾ ಕರೀತಿದ್ರು
ಯಾವ ಕಾರಣಕ್ಕೂ ಟಿಕೆಟ್ ಕೊಡಲ್ಲ ಅಂತಾ ಹಠ ಮಾಡಿದ್ರು.
ನಾನು ರಾಜೀವ್ ಗಾಂಧಿ ಹತ್ತಿರವಿದ್ದೆ.
ನಾನು 40 ರಿಂದ 42 ಟಿಕೇಟ್ ಕೊಡಿಸಿದ್ದೆ.
ಡಿ.ಕೆ.ಶಿವಕುಮಾರ್ ಗೂ ನಾನು ಟಿಕೆಟ್ ಕೊಡಿಸಿದ್ದೆ.ವಿಶ್ವನಾಥ್ ಪುಂಡಾಟ ಆಂತಾ ಹೇಳಿದ್ರು.ಯೂತ್ ಕಾಂಗ್ರೆಸ್ ಆಧ್ಯಕ್ಷರ ಮಾತಿಗೆ ಗೌರವ ಕೊಡಬೇಕು ಅಂತಾ ಟಿಕೆಟ್ ಕೊಟ್ರು
ಹಿಂದುಳಿದ ವರ್ಗ, ವಕೀಲ ಅಂತಾ ನಾನು ಹೇಳಿ ಚುನಾವಣಾ ಸಮಿತಿಗೆ ಹೇಳಿದ್ದೆ.
ನಾನು ಸಮಿತಿಯವ್ರಿಗೆ ಹೇಳಿ ನಿನ್ನ ಹೆಸ್ರನ್ನ ಶಿಫಾರಸು ಮಾಡಿ ಕಳುಹಿಸಿದ್ದೆ.ನಾನು ಪ್ರೀತಿ ವಿಶ್ವಾಸ ಗಳಿಸಿದ್ದೇನೆ ಎಲ್ಲರ ಬಳಿಯೂ ವಿಶ್ವನಾಥ್, ನಿನ್ನ ರೀತಿ ಬಾಯಿಗೆ ಬಂದ ಹಾಗೆ ಮಾತನಾಡೋಲ್ಲ.
1985 ರಲ್ಲಿ ವಿಶ್ವನಾಥ್ ಸೋತಾಗ ರಾಜಕೀಯ ಜನ್ಮ ಕೊಟ್ಟಿದ್ದು ಯಾರು.1989 ರಲ್ಲಿ ಟಿಕೇಟ್ ಕೊಟ್ರು, ಎರಡು ಕೈ ಮುಗಿದು ಮಂತ್ರಿ ಮಾಡಿ ಆಂತಾ ಕೇಳಿದ್ದೆ.ವಿಶ್ವನಾಥ್ ಯಾರಪ್ಪ ನಿನ್ನ ಮಂತ್ರಿ ಮಾಡಿದ್ದು.
ಪ್ರಮಾಣವಚನದ ವೇಳೆ ಇವ್ರ ಹೆಸರೇ ಇರಲಿಲ್ಲ.
ನಾನು ಮೊಯ್ಲಿ ಅವ್ರೆ ಇವ್ರನ್ನ ಡೆಪ್ಯೂಟಿ ಸ್ಪೀಕರ್ ಮಾಡೋದಲ್ಲ.
ಪ್ಲೈಟ್ ಲ್ಯಾಂಡ್ ಆಗೋದ್ರ ಒಳಗೆ ನೀವು ಮಂತ್ರಿ ಮಾಡಿಲ್ಲ ಅಂದ್ರೆ ನಿಮ್ಮ ವಿರುದ್ಧ ತಿರುಗಿ ಬೀಳಬೇಕಾಗುತ್ತದೆ ಎಂದೆ.ಫ್ಲೈಟ್ ಇಳಿದ ಮೇಲೆ ಹೆಸರು ಸೇರಿಸಿದ್ರು ರಾಜಭವನದಲ್ಲಿ .
ಆಗ ವಿಶ್ವನಾಥ್ ಎಲ್ಲಿದ್ರು, ಕೆ.ಆರ್. ನಗರದಲ್ಲಿ ಕಂಬಳಿ ಹೊಸ್ಕೊಂಡು ಮಲಗಿದ್ದ.ನಾನು ಪೋನ್ ಮಾಡಿ ಕರೆಸಿ ಮಂತ್ರಿ ಮಾಡಿಸಿದೆ.
ನಾನು ಡೆಲ್ಲಿಯಲ್ಲಿ ವಿಶ್ವನಾಥ್ ನನ್ನು ನಾಲ್ಕು ವರ್ಷ ಸಾಕಿದೆ.
ನಿಮ್ಮ ಪತ್ನಿಗೆ ನಾನು ಮಾಡಿದ ಸಹಾಯ ಗೊತ್ತು.ದೀಪ ಹಚ್ಚುವ ವೇಳೆ ನಿಮ್ಮನ್ನು
ನೆನೆಸಿಕೊಳ್ಳುತ್ತೇವೆ ಅಂದ್ರು.ಕೆ.ಆರ್.ನಗರದ ರೇಡಿಯೋ ಮೈದಾನದಲ್ಲಿ ನನ್ನ ಬಗ್ಗೆ ವಿಶ್ವನಾಥ್ ಹೇಳಿದ್ದೇನು.ನನ್ನ ಪಾಲಿಗೆ ತಿರುಪತಿ ತಿಮ್ಮಪ್ಪ ಅಂದ್ರಿ.ಆಮೇಲೆ ನಂಜನಗೂಡು ಬೈ ಎಲೆಕ್ಷನ್ ಸಂದರ್ಭ ಮಾಡಿದ್ದೇನು ನೀನು
ನಂಜುಂಡೇಶ್ವನ ಬಳಿಗೆ ಹೋಗಿ ನಾನು ಸೋಲಲಿ ಅಂತಾ ಈಡುಗಾಯಿ ಹೊಡೆದೆ.
ನಾನು 1985ರಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸದಿದ್ರೆ ನಿನ್ನ ರಾಜಕೀಯ ಅಧ್ಯಾಯವೇ ಮುಗಿದು ಹೋಗುತ್ತಿತ್ತು
1989ರಲ್ಲಿ ವೀರಪ್ಪ ಮೊಯಿಲಿ ಸಿಎಂ ಆದಾಗ ನಿನ್ನನ್ನು ಮಂತ್ರಿ ಮಾಡೋಕೆ ಹೋರಾಟ ಮಾಡಿದ್ಯಾರು ಎಂದು
ಖಾಸಗಿ ಹೋಟೆಲ್ ನಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸುದ್ದಿಗೋಷ್ಟಿಯಲ್ಲಿ ವಾಗ್ಧಾಳಿ ನಡೆಸಿದರು…

Spread the love

Related post

ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್…

ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್…

ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್… ಮಂಡ್ಯ,ಜೂ13,Tv10 ಕನ್ನಡ ಜಮೀನು ಖಾತೆಗೆ ರೂ.2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು 10 ಸಾವಿರ ಹಣ ಸ್ವೀಕರಿಸುವಾಗಲೋಕಾಯುಕ್ತ…
ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್…

ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ…

ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್… ಮೈಸೂರು,ಜೂ12,Tv10 ಕನ್ನಡ ಕಸದರಾಶಿ ಹಾವಳಿ ತಪ್ಪಿಸಲು ಮೈಸೂರು ಮಹಾನಗರ ಪಾಲಿಕೆ ಮಾಸ್ಟರ್ ಪ್ಲಾನ್…
ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ…

ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ…

ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ… ಮೈಸೂರು,ಜೂ10,Tv10 ಕನ್ನಡ ನಿರೀಕ್ಷೆಯಂತೆ ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳ ಕರ್ತವ್ಯದಲ್ಲಿ ಭಾರಿ ಬದಲಾವಣೆ ಆಗಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ತವ್ಯ…

Leave a Reply

Your email address will not be published. Required fields are marked *