ಶ್ರೀರಂಗಪಟ್ಟಣ: `2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪ್ರಕಟಿಸಿರುವ 93 ಕ್ಷೇತ್ರಗಳ ಘೋಷಿತ ಅಭ್ಯರ್ಥಿಗಳ ಪೈಕಿ 65 ಮಂದಿ ಸುಲಭವಾಗಿ ಜಯ ಗಳಿಸಲಿದ್ದಾರೆ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣ: `2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪ್ರಕಟಿಸಿರುವ 93 ಕ್ಷೇತ್ರಗಳ ಘೋಷಿತ ಅಭ್ಯರ್ಥಿಗಳ ಪೈಕಿ 65 ಮಂದಿ ಸುಲಭವಾಗಿ ಜಯ ಗಳಿಸಲಿದ್ದಾರೆ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣ: `2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪ್ರಕಟಿಸಿರುವ 93 ಕ್ಷೇತ್ರಗಳ ಘೋಷಿತ ಅಭ್ಯರ್ಥಿಗಳ ಪೈಕಿ 65 ಮಂದಿ ಸುಲಭವಾಗಿ ಜಯ ಗಳಿಸಲಿದ್ದಾರೆ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣಕ್ಕೆ ಡಿ.23ರಂದು ಬರಲಿರುವ ಜೆಡಿಎಸ್ ಪಂಚರತ್ನ ರಥಯಾತ್ರೆಯ ನಿಮಿತ್ತ ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜೆಡಿಎಸ್ ಮುಖಂಡರು, ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದರು.

‘ಪಕ್ಷದ ವರಿಷ್ಠರಾದ ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಸಮರ್ಥ ಅಭ್ಯರ್ಥಿ ಗಳನ್ನೇ ಘೋಷಿಸಿದ್ದಾರೆ. ಉಳಿದ 131 ಕ್ಷೇತ್ರಗಳಿಗೂ ಜನಮನ್ನಣೆ ಗಳಿಸಿರುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು, ಈ ಬಾರಿ ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ’ ಎಂದು ಹೇಳಿದರು.

‘ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಮತ್ತು ಕಾಂಗ್ರೆಸ್‌ನ ದ್ವಂದ್ವ ನೀತಿಯಿಂದ ಜೆಡಿಎಸ್‌ಗೆ ಅನುಕೂಲ ಆಗಲಿದೆ. ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ ಸರ್ಕಾರ ನೀಡಿದ್ದ ನೂರಾರು ಕೋಟಿ ರೂಪಾಯಿ ಅನುದಾನವನ್ನು ಬಿಜೆಪಿ ಸರ್ಕಾರ ತಡೆಹಿಡಿದು ದ್ರೋಹ ಎಸಗಿದೆ. ಸಚಿವ ನಾರಾಯಣಗೌಡ ಪೇಟೆಗೆ ಮಾತ್ರ ಸಚಿವರಾಗಿದ್ದು, ಜಿಲ್ಲೆಯ ಇತರ ಕ್ಷೇತ್ರಗಳನ್ನು ಕಡೆಗಣಿಸಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಬಗ್ಗೆ

ಹುಸಿ ಪ್ರೀತಿ ತೋರುತ್ತಿದೆ’ ಎಂದು ಟೀಕಿಸಿದರು.

ಜೆಡಿಎಸ್ ಕ್ಷೇತ್ರ ಘಟಕದ ಅಧ್ಯಕ್ಷ ಪಾಲಹಳ್ಳಿ ಮುಕುಂದ ಮಾತನಾಡಿ, ‘ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಡಿ.23ರಂದು ಬೆಳಿಗ್ಗೆ ಕ್ಯಾತುಂಗೆರೆ ಗ್ರಾಮದ ಮೂಲಕ ಕ್ಷೇತ್ರ ಪ್ರವೇಶಿಸಲಿದೆ. ಕೊತ್ತ, ಕೊಡಿಯಾಲ, ಅರಕೆರೆ, ಮಂಡ್ಯ ಕೊಪ್ಪಲು, ಮಹದೇವಪುರ, ದೊಡ್ಡಪಾಳ್ಯ, ಮರಳಾಗಾಲ, ಬಾಬುರಾಯನ ಕೊಪ್ಪಲು ಮಾರ್ಗವಾಗಿ ಮಧ್ಯಾಹ್ನ 1.30ಕ್ಕೆ ಪಟ್ಟಣಕ್ಕೆ ಬರಲಿದೆ. ಪಾಲಹಳ್ಳಿ, ಹೊಸಹಳ್ಳಿ, ಬೆಳಗೊಳ ಪಂಪ್‌ಹೌಸ್, ಹೊಸ ಆನಂದೂರು, ಬೆಳಗೊಳ, ಹುಲಿಕೆರೆ ಮೂಲಕ ಸಂಜೆ

ಶ್ರೀರಂಗಪಟ್ಟಣ ಟಿಎಪಿಸಿಎಂಎಸ್‌ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದರು.ಪಾಲಹಳ್ಳಿ ಮುಕುಂದ, ಎಂ.ಸಂತೋಷ್ ಇದ್ದಾರೆ

7 ಗಂಟೆಗೆ ಕೆಆರ್‌ಎಸ್‌ ತಲುಪಲಿದ್ದು, ಕುಮಾರಸ್ವಾಮಿ ಅವರು ಕೆಆರ್‌ಎಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ’ ಎಂದರು.

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಂ. ಸಂತೋಷ್, ಕಾರ್ಯಾಧ್ಯಕ್ಷ ಎನ್. ಶಿವಸ್ವಾಮಿ, ಪುರಸಭೆ ಅಧ್ಯಕ್ಷೆ ಪಿ. ನಿರ್ಮಲಾ, ಉಪಾಧ್ಯಕ್ಷ ನರಸಿಂಹೇ | ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಕೃಷ್ಣಪ್ಪ, ಪ್ರಕಾಶ್, ಎಸ್.ಟಿ. ರಾಜು, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಪದ್ಮನಾಭ, ತಾ.ಪಂ ಮಾಜಿ ಅಧ್ಯಕ್ಷ ಎ.ಸತೀಶ್, ಟಿಎಪಿಸಿಎಂಎಸ್‌ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಪಿಎಸ್‌ಎಸ್‌ ಮಾಜಿ ಅಧ್ಯಕ್ಷ ಚಿಕ್ಕರಾಮಂಜೇಗೌಡ, ಟಿ.ಎಂ. ದೇವೇಗೌಡ, ಎಜಾಸ್‌ಪಾಷ ಇದ್ದರು.

Spread the love

Related post

ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ…ಸ್ಥಳದಲ್ಲೇ ಸವಾರ ಸಾವು…

ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ…ಸ್ಥಳದಲ್ಲೇ ಸವಾರ ಸಾವು…

ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ…ಸ್ಥಳದಲ್ಲೇ ಸವಾರ ಸಾವು… ಹುಣಸೂರು,ಜೂ18,Tv10 ಕನ್ನಡ ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಹುಣಸೂರು…
ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್…

ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್…

ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್… ಮಂಡ್ಯ,ಜೂ13,Tv10 ಕನ್ನಡ ಜಮೀನು ಖಾತೆಗೆ ರೂ.2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು 10 ಸಾವಿರ ಹಣ ಸ್ವೀಕರಿಸುವಾಗಲೋಕಾಯುಕ್ತ…
ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್…

ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ…

ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್… ಮೈಸೂರು,ಜೂ12,Tv10 ಕನ್ನಡ ಕಸದರಾಶಿ ಹಾವಳಿ ತಪ್ಪಿಸಲು ಮೈಸೂರು ಮಹಾನಗರ ಪಾಲಿಕೆ ಮಾಸ್ಟರ್ ಪ್ಲಾನ್…

Leave a Reply

Your email address will not be published. Required fields are marked *