ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವ ಸಂಭ್ರಮ…ಇಂದು ಪ್ರ ಧಾನ ಯಾಗ…ಆಯುಷ್ಯ ಹಾಗೂ ಲಕ್ಷ್ಮಿನಾರಾಯಣ ಹೋಮ…

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವ ಸಂಭ್ರಮ…ಇಂದು ಪ್ರ ಧಾನ ಯಾಗ…ಆಯುಷ್ಯ ಹಾಗೂ ಲಕ್ಷ್ಮಿನಾರಾಯಣ ಹೋಮ…

  • Temples
  • February 4, 2023
  • No Comment
  • 161

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವ ಸಂಭ್ರಮ…ಇಂದು ಪ್ರ ಧಾನ ಯಾಗ…ಆಯುಷ್ಯ ಹಾಗೂ ಲಕ್ಷ್ಮಿನಾರಾಯಣ ಹೋಮ…

ಮೈಸೂರು,ಫೆ4,Tv10 ಕನ್ನಡ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಎಂಬತ್ತನೆ ವರ್ಷದ ಜನ್ಮದಿನೋತ್ಸವದ ಪ್ರಯುಕ್ತ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವದ ಸಂಭ್ರಮ ಮನೆ ಮಾಡಿದೆ.ಹಲವು ದಿನಗಳಿಂದ ಧಾರ್ಮಿಕ ಕೈಂಕರ್ಯಗಳು ಅದ್ದೂರಿಯಿಂದ ಸಾಗುತ್ತಿದೆ.ಆಶ್ರಮಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.ದೇಶ ವಿದೇಶಗಳಿಂದ ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡು ಸ್ವಾಮೀಜಿಗಳ ಕೃಪೆಗೆ ಪಾತ್ರರಾಗಿದ್ದಾರೆ.

ಇಂದು ಬೆಳಿಗ್ಗೆ ಪ್ರಧಾನಯಾಗ-ಆಯುಷ್ಯ ಹೋಮ ಮತ್ತು ಲಕ್ಷ್ಮಿ ನಾರಾಯಣ ಹೋಮ ನೆರವೇರಿದೆ.
ನಂತರ ದಶದಾನಗಳನ್ನು ಋತ್ವಿಕರಿಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೀಡಿದ್ದಾರೆ.
ಗಣಪತಿ ಸೇರಿ ಎಲ್ಲಾ ದೇವರುಗಳಿಗೆ ಶ್ರೀ ಗಣಪತಿ ಸ್ವಾಮೀಜಿ ಹಾಗೂ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಧನ ಕನಕ ಸಹಿತ ಪೂಜೆ ನೆರವೇರಿಸಿದ್ದಾರೆ. ವಿಷ್ಣುಸಹಸ್ರ ನಾಮ ಪಾರಾಯಣವು ಸಹ ನಡೆದಿದೆ.ಅತ್ಯಂತ ಪ್ರಮುಖವಾದ ಕನಕಾಭಿಷೇಕವನ್ನು ಸದ್ಭಕ್ತರ ಪರವಾಗಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ನೆರವೇರಿಸಿದ್ದಾರೆ.
ಶ್ರೀಗಳ ಶಿರದ ಮೇಲೆ ಚಿನ್ಮದ ನಾಣ್ಯಗಳನ್ನು ಇಟ್ಟು ದೇವಾನುದೇವತೆಗಳನ್ನು ಆವಾಹನೆ ಮಾಡಿದ ಜಲದಿಂದ ಕಿರಿಯ ಶ್ರೀಗಳು ಅಭಿಷೇಕ ಮಾಡಿ ಪೂಜಿಸಿ ನಮಸ್ಕರಿಸಿದರು.

ಸಾಮಾನ್ಯವಾಗಿ ಎಂಬತ್ತು ವರ್ಷ ತುಂಬಿದ ಹಿರಿಯರು ಈ ಸಹಸ್ರಚಂದ್ರ ದರ್ಶನ ಶಾಂತಿ ಮಾಡಿಕೊಂಡು ಕನಕಭಿಷೇಕ ಮಾಡಿಸಿಕೊಳ್ಳುವುದು ರೂಢಿ.ಈಗ ಆಧ್ಯಾತ್ಮಿಕ ಮೇರು ಪರ್ವತವಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಸಹಸ್ರಚಂದ್ರ ದರ್ಶನ ಶಾಂತಿ, ಕನಕಾಭಿಷೇಕ ನಡೆಯುತ್ತಿರುವುದು ಭಕ್ತರಲ್ಲಿ ಅತ್ಯಂತ ಸಡಗರ ಸಂಭ್ರಮ ತಂದಿದೆ.ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಲೋಕ ಕಲ್ಯಾಣಾರ್ಥವಾಗಿ ಇದನ್ನೆಲ್ಲಾ ಮಾಡುತ್ತಿದ್ದು ನಾಡಿನಲ್ಲಿ ಉತ್ತಮ ಮಳೆ, ಬೆಳೆ ಆಗಿ ಸುಭಿಕ್ಷವಾಗಲಿ. ಧನ ಧಾನ್ಯ ಸಮೃದ್ಧವಾಗಲಿ ದೇಶದಲ್ಲಿ ಕಷ್ಟ ಕಾರ್ಪಣ್ಯ ಹೋಗಲಿ, ಎಲ್ಲರಿಗೂ ನೆಮ್ಮದಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ…

Spread the love

Related post

ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ…2.27 ಕೋಟಿ ಸಂಗ್ರಹ…ನಿಷೇಧಿತ 2000 ಮುಖಬೆಲೆಯ ನೋಟುಗಳು ಪತ್ತೆ…

ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ…2.27 ಕೋಟಿ ಸಂಗ್ರಹ…ನಿಷೇಧಿತ…

ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ…2.27 ಕೋಟಿ ಸಂಗ್ರಹ…ನಿಷೇಧಿತ 2000 ಮುಖಬೆಲೆಯ ನೋಟುಗಳು ಪತ್ತೆ… ಹನೂರು,ಅ16,Tv10 ಕನ್ನಡ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಮಲೆ…
ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ…

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ…

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ… ಮೈಸೂರು,ಅ16,Tv10 ಕನ್ನಡ ಮಾಧ್ಯಮದ ಗೆಳೆಯರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ ಕ್ಲಿಕ್ಕಿಸಿದ್ದಾರೆ.ಚಾಮುಂಡಿ ಬೆಟ್ಟಕ್ಕೆ ಭೇಟಿ‌ ನೀಡಿದ ವೇಳೆತಾವೇ ಮೊಬೈಲ್ ಪಡೆದು ಸೆಲ್ಫಿ…
ಉಪ ಪ್ರಾಂಶುಪಾಲರಾಗಿ ನೇಮಕ ಮಾಡುವ ಆಮಿಷ…7.45 ಲಕ್ಷ ವಂಚನೆ…ಸಿಎಆರ್ ಮುಖ್ಯಪೇದೆ,ಪತ್ನಿ ಸೇರಿದಂತೆ 7 ಮಂದಿ ವಿರುದ್ದ FIR…

ಉಪ ಪ್ರಾಂಶುಪಾಲರಾಗಿ ನೇಮಕ ಮಾಡುವ ಆಮಿಷ…7.45 ಲಕ್ಷ ವಂಚನೆ…ಸಿಎಆರ್ ಮುಖ್ಯಪೇದೆ,ಪತ್ನಿ ಸೇರಿದಂತೆ…

ಮೈಸೂರು,ಅ16,Tv10 ಕನ್ನಡ ಪಿಯು ಕಾಲೇಜಿಗೆ ಉಪ ಪ್ರಾಂಶುಪಾಲರಾಗಿ ಹಾಗೂ ಟ್ರಸ್ಟ್ ಗೆ ಟ್ರಸ್ಟಿಯಾಗಿ ನೇಮಕ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಸಿಎಆರ್ ಮುಖ್ಯಪೇದೆ ಹಾಗೂ ಪತ್ನಿ 7.45 ಲಕ್ಷ ವಂಚಿಸಿದ…

Leave a Reply

Your email address will not be published. Required fields are marked *