ಜಯಲಕ್ಷ್ಮಿಪುರಂ ಪೊಲೀಸರ ಕಾರ್ಯಾಚರಣೆ…ಇಬ್ಬರು ಸರಗಳ್ಳರ ಬಂಧನ…14 ಲಕ್ಷ ಮೌಲ್ಯದ ಚಿನ್ನದ ಸರಗಳು ವಶ…

ಜಯಲಕ್ಷ್ಮಿಪುರಂ ಪೊಲೀಸರ ಕಾರ್ಯಾಚರಣೆ…ಇಬ್ಬರು ಸರಗಳ್ಳರ ಬಂಧನ…14 ಲಕ್ಷ ಮೌಲ್ಯದ ಚಿನ್ನದ ಸರಗಳು ವಶ…

  • Crime
  • February 9, 2023
  • No Comment
  • 308

ಜಯಲಕ್ಷ್ಮಿಪುರಂ ಪೊಲೀಸರ ಕಾರ್ಯಾಚರಣೆ…ಇಬ್ಬರು ಸರಗಳ್ಳರ ಬಂಧನ…14 ಲಕ್ಷ ಮೌಲ್ಯದ ಚಿನ್ನದ ಸರಗಳು ವಶ…

ಮೈಸೂರು,ಫೆ9,Tv10 ಕನ್ನಡ
ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಇಬ್ಬರು ಸರಗಳ್ಳರು ಸಿಕ್ಕಿಬಿದ್ದಿದ್ದಾರೆ.ಬಂಧಿತರಿಂದ 14 ಲಕ್ಷ ಮೌಲ್ಯದ 8 ಚಿನ್ನದ ಮಾಂಗಲ್ಯ ಸರ ವಶಪಡಿಸಿಕೊಳ್ಳಲಾಗಿದೆ.ತಲೆ ಮರೆಸಿಕೊಂಡಿರುವ ಮತ್ತೋರ್ವ ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ.ಮಂಜು(32) ಹಾಗೂ ಚಂದನ್(27) ಬಂಧಿತ ಆರೋಪಿಗಳು.ಚಂದು ತಲೆ ಮರೆಸಿಕೊಂಡಿರುವ ಆರೋಪಿ.

ರಾತ್ರಿ ಗಸ್ತಿನ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.ಮೊದಲ ಆರೋಪಿ ಮಂಜು ಈಗಾಗಲೇ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ.ಜೈಲಿನಲ್ಲಿದ್ದಾಗಲೇ ಚಂದನ್ ನ ಪರಿಚಯ ಮಾಡಿಕೊಂಡು ಮೂವರು ಆರೋಪಿಗಳು ಸೇರಿ ಕೃತ್ಯವೆಸಗಿದ್ದಾರೆ.

ಜಯಲಕ್ಷ್ಮಿಪುರಂ,ಕುವೆಂಪುನಗರ,ಆಲನಹಳ್ಳಿ,ಉದಯಗಿರಿ,ಕೊಳ್ಳೇಗಾಲ,ನಂಜನಗೂಡು,ಕೆ.ಆರ್.ನಗರ,ಟಿ.ನರಸೀಪುರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಸರಗಳುವು ಪ್ರಕರಣಗಳು ಪತ್ತೆಯಾಗಿದೆ.

ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಮುತ್ತುರಾಜ್ ಹಾಗೂ ಡಿಸಿಪಿ (ಅಪರಾಧ ಮತ್ತು ಸಂಚಾರ) ರವರ ಮಾರ್ಗದರ್ಶನದಲ್ಲಿ ಎನ್.ಆರ್.ವಿಭಾಗದ ಎಸಿಪಿ ಅಶ್ವತ್ಥನಾರಾಯಣ್ ರವರ ಮೇಲ್ವಿಚಾರಣೆಯಲ್ಲಿ ಜಯಲಕ್ಷ್ಮಿಪುರಂ ನ ಇನ್ಸ್ಪೆಕ್ಟರ್ ಗೋವಿಂದರಾಜು ನೇತೃತ್ವದಲ್ಲಿ ಪಿಎಸ್ಸೈ ರಂಗಸ್ವಾಮಿ ಸಿಬ್ಬಂದಿಗಳಾದ ಪ್ರಭುರಾಜ್,ಅಭಿಷೇಕ್ ಬೆಂಜಮಿನ್,ದೇವರಾಜು,ಅಮಿಸಿದ್ದ ಖೋತ್,ಕಾಂತರಾಜು,ಮಾಯಪ್ಪ ಕರಂಗಾವಿ,ಮನೋಹರ್,ಕುಮಾರ್.ಎನ್.ಅರ್.ಎಸಿಪಿ ಸ್ಕ್ವಾಡ್ ನ ಎಎಸ್ಸೈ ಅನಿಲ್ ಶಂಕಪಾಲ್,ರಮೇಶ್,ಲಿಂಗರಾಜಪ್ಪ,ಸುರೇಶ್,ಜೀವನ್,ಹರೀಶ್,ಹನುಮಂತ ಕಲ್ಲೇದ್ ನಗರ ಪೊಲೀಸ್ ಆಯುಕ್ತರ ಕಚೇರಿಯ ತತ್ರಿಕ ವಿಭಾಗದ ಸಿಬ್ಬಂದಿಗಳಾದ ಕುಮಾರ್,ಗುರುದೇವಾರಾಧ್ಯ,ಮಂಜು,ಶ್ಯಾಂಸುಂದರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ.

ಅಧಿಕಾರಿ ಸಿಬ್ಬಂದಿಗಳ ಯಶಸ್ವಿ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಪ್ರಶಂಸಿಸಿದ್ದಾರೆ…

Spread the love

Related post

ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ! ಆಲ್ಫಾ ಅಂದರೇನೇ ಡಾಮಿನೇಶನ್. ಈ ವಾರ ತೆರೆಕಂಡ ಆಲ್ಫಾ‌ ಚಿತ್ರದಲ್ಲಿ ಡಾಮಿನೇಟ್ ಮಾಡುತ್ತಿರುವವರೇ ಚಿತ್ರದ ನಾಯಕ ಹೇಮಂತ್ ಕುಮಾರ್. ಹೇಮಂತ್…
ಡೂಪ್ಲಿನ್ ಕಾಂಪ್ಲೆಕ್ಸ್ ಗೆ ಹೈ ಕೋರ್ಟ್ ಶಾಕ್…ಎಂಡಿಎ ತೆಕ್ಕೆಗೆ ಸೇರಲಿರುವ ವಾಣಿಜ್ಯ ಸಂಕೀರ್ಣ…ಸುಮಾರು 250 ಕೋಟಿ ಮೌಲ್ಯದ ಆಸ್ತಿ…ಅಲರ್ಟ್ ಆಗ್ತಾರ ಆಯುಕ್ತ ರಕ್ಷಿತ್…

ಡೂಪ್ಲಿನ್ ಕಾಂಪ್ಲೆಕ್ಸ್ ಗೆ ಹೈ ಕೋರ್ಟ್ ಶಾಕ್…ಎಂಡಿಎ ತೆಕ್ಕೆಗೆ ಸೇರಲಿರುವ ವಾಣಿಜ್ಯ…

ಡೂಪ್ಲಿನ್ ಕಾಂಪ್ಲೆಕ್ಸ್ ಗೆ ಹೈ ಕೋರ್ಟ್ ಶಾಕ್…ಎಂಡಿಎ ತೆಕ್ಕೆಗೆ ಸೇರಲಿರುವ ವಾಣಿಜ್ಯ ಸಂಕೀರ್ಣ…ಸುಮಾರು 250 ಕೋಟಿ ಮೌಲ್ಯದ ಆಸ್ತಿ…ಅಲರ್ಟ್ ಆಗ್ತಾರ ಆಯುಕ್ತ ರಕ್ಷಿತ್… ಮೈಸೂರು,ಫೆ17,Tv10 ಕನ್ನಡ ಮೈಸೂರಿನ ಹೃದಯಭಾಗದಲ್ಲಿರುವ…
ಜಾತ್ರೆಯಲ್ಲಿ ಜಗಳ ಬಿಡಿಸಿದ್ದೇ ತಪ್ಪಾಯ್ತು…ಹೋಂಗಾರ್ಡ್ ಮೇಲೆ ಹಲ್ಲೆ…ಬೈಕ್ ಗೆ ಬೆಂಕಿ…ಪುಂಡರ ಗೂಂಡಾವರ್ತನೆ…ಪ್ರಕರಣ ದಾಖಲಿಸಲು ಮೀನಾಮೇಷ…

ಜಾತ್ರೆಯಲ್ಲಿ ಜಗಳ ಬಿಡಿಸಿದ್ದೇ ತಪ್ಪಾಯ್ತು…ಹೋಂಗಾರ್ಡ್ ಮೇಲೆ ಹಲ್ಲೆ…ಬೈಕ್ ಗೆ ಬೆಂಕಿ…ಪುಂಡರ ಗೂಂಡಾವರ್ತನೆ…ಪ್ರಕರಣ…

ಜಾತ್ರೆಯಲ್ಲಿ ಜಗಳ ಬಿಡಿಸಿದ್ದೇ ತಪ್ಪಾಯ್ತು…ಹೋಂಗಾರ್ಡ್ ಮೇಲೆ ಹಲ್ಲೆ…ಬೈಕ್ ಗೆ ಬೆಂಕಿ…ಪುಂಡರ ಗೂಂಡಾವರ್ತನೆ…ಪ್ರಕರಣ ದಾಖಲಿಸಲು ಮೀನಾಮೇಷ… ನಂಜನಗೂಡು,ಫೆ16,Tv10 ಕನ್ನಡ ಜಾತ್ರೆ ವೇಳೆ ನಡೆಯುತ್ತಿದ್ದ ಜಗಳ ಬಿಡಿಸಿದ ತಪ್ಪಿಗೆ ಹೋಂಗಾರ್ಡ್ ಮೇಲೆ…

Leave a Reply

Your email address will not be published. Required fields are marked *