ಶಾಸಕ ರಾಮದಾಸ್ ವಿರುದ್ದ ಮತ್ತೆ ಸಿಡಿದೆದ್ದ ಲಿಂಗಾಯಿತ ಮುಖಂಡರು…ಟಿಕೆಟ್ ನೀಡದಂತೆ ಬಿಎಸ್ವೈ ಗೆ ಪತ್ರ…
- Politics
- March 20, 2023
- No Comment
- 83
ಶಾಸಕ ರಾಮದಾಸ್ ವಿರುದ್ದ ಮತ್ತೆ ಸಿಡಿದೆದ್ದ ಲಿಂಗಾಯಿತ ಮುಖಂಡರು…ಟಿಕೆಟ್ ನೀಡದಂತೆ ಬಿಎಸ್ವೈ ಗೆ ಪತ್ರ…
ಮೈಸೂರು,ಮಾ.20,Tv10 ಕನ್ನಡ
ಶಾಸಕ ಎಸ್.ಎ. ರಾಮದಾಸ್ ವಿರುದ್ದ ಲಿಂಗಾಯಿತ ಸಮುದಾಯ ಮುಖಂಡರು ಮತ್ತೆ ಸಿಡಿದೆದ್ದಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರನ್ನ ವೀರಶೈವ ಲಿಂಗಾಯಿತ ಮುಖಂಡರ ನಿಯೋಗವೊಂದು
ಮೈಸೂರಿನ ಕೃಷ್ಣರಾಜ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ದೂರು ನೀಡಿದ್ದಾರೆ.ವೀರಶೈವ- ಲಿಂಗಾಯತ ಮತದಾರರ ಜಾಗೃತ ಒಕ್ಕೂಟ
ಎಸ್.ಎ.ರಾಮದಾಸ್ಗೆ ಈ ಬಾರಿ ಟಿಕೆಟ್ ನೀಡಬೇಡಿ ಎಂದು ಪತ್ರ ಬರೆದು ಒತ್ತಾಯಿಸಿದ್ದಾರೆ.
ಯಾರಿಗೆ ಟಿಕೆಟ್ ನೀಡಿದರೂ ಒಕೆ, ರಾಮದಾಸ್ಗೆ ಮಾತ್ರ ಕೊಡಬೇಡಿ.
ವೀರಶೈವ ಲಿಂಗಾಯಿತ ಮುಖಂಡರನ್ನು ರಾಮದಾಸ್ ಎಲ್ಲ ಹಂತದಲ್ಲೂ ಕಡೆಗಣಿಸಿದ್ದಾರೆ.
ನಮ್ಮ ಯಾವುದೇ ಸಮಸ್ಯೆಗಳಿಗೂ ಅವರಿಂದ ಸ್ಪಂದನೆ ಸಿಕ್ಕಿಲ್ಲ.
ಕೆ.ಆರ್. ಕ್ಷೇತ್ರದಲ್ಲಿ ವೀರಶೈವ ಲಿಂಗಾಯಿತ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದು ಆಗ್ರಹಿಸಿದ್ದಾತೆ.
ಸಿಎಂ ಬಸವರಾಜ ಬೊಮ್ಮಾಯಿಗೂ ಪತ್ರ ಬರೆದಿದ್ದಾರೆ.
ವೀರಶೈವ ಲಿಂಗಾಯಿತ ಮುಖಂಡರಾದ ಯು.ಎಸ್. ಶೇಖರ್, ತುಂಬಲ ಲೋಕೇಶ್ ನೇತೃತ್ವದಲ್ಲಿ ಬಿ.ಎಸ್.ವೈ ಭೇಟಿ
ಬೆಂಗಳೂರಿನ ಮಾಜಿ ಸಿಎಂ ಮನೆಗೆ ತೆರಳಿ ಕೃಷ್ಣರಾಜ ಕ್ಷೇತ್ರದ ವಸ್ತು ಸ್ಥಿತಿ ಮನವರಿಕೆ ಮಾಡಿದ್ದಾರೆ..