ಕೈ ಪಾಳೆಯದಲ್ಲಿ ಯುವ ನಾಯಕರ ಕಲರವ…ಹಳೇ ಮೈಸೂರು ಭಾಗದಲ್ಲಿ ಯಂಗ್ ಬ್ಲಡ್ ಕಾರುಬಾರು…

ಕೈ ಪಾಳೆಯದಲ್ಲಿ ಯುವ ನಾಯಕರ ಕಲರವ…ಹಳೇ ಮೈಸೂರು ಭಾಗದಲ್ಲಿ ಯಂಗ್ ಬ್ಲಡ್ ಕಾರುಬಾರು…

  • Politics
  • March 20, 2023
  • No Comment
  • 107

ಕೈ ಪಾಳೆಯದಲ್ಲಿ ಯುವ ನಾಯಕರ ಕಲರವ…ಹಳೇ ಮೈಸೂರು ಭಾಗದಲ್ಲಿ ಯಂಗ್ ಬ್ಲಡ್ ಕಾರುಬಾರು…

ಮೈಸೂರು,ಮಾ20,Tv10 ಕನ್ನಡ
ಹಳೇ ಮೈಸೂರು ಭಾಗದಲ್ಲಿ ಯುವನಾಯಕರ ಕಾರುಬಾರು ಕೈ ಪಾಳೆಯದಲ್ಲಿ ಸಂಚಲನ ಮೂಡಿಸುತ್ತಿದೆ.ಯುವಕರ ಹಿಡಿತಕ್ಕೆ ಮೈಸೂರು ಕಾಂಗ್ರೆಸ್ ಒಲಿಯಲಿದೆಯಾ ಎಂಬ ಕುತೂಹಲ ಮನೆ ಮಾಡಿದೆ.ಯುವ ನಾಯಕತ್ವಕ್ಕೆ ಹಳೇ ಮೈಸೂರಿನಲ್ಲಿ ಕೈ ಪಕ್ಷ ಮಣೆ ಹಾಕಲು ಗಂಭೀರವಾಗಿ ಚಿಂತನೆ ನಡೆಸುತ್ತಿದೆ.
ಮೈಸೂರು ಜಿಲ್ಲೆಯಲ್ಲಿ ಯುವಕರ ರಾಜಕೀಯ ಬೆಳವಣಿಗೆ ಇಂತಹ ಕುತೂಹಲಕ್ಕೆ ಪುಷ್ಟಿ ನೀಡುತ್ತಿದೆ.ಒಂದೆಡೆ ಈ ಬೆಳವಣಿಗೆ
ಕಾಂಗ್ರೆಸ್ ಪಕ್ಷಕ್ಕೆ ವರವೂ ಎನ್ನಲಾಗುತ್ತಿದೆ.
ಹಳೇ ಮೈಸೂರು ಭಾಗದಲ್ಲಿ ಯುವ ನಾಯಕರಿಂದ ಕಾಂಗ್ರೆಸ್ ಬಲಿಷ್ಠವಾಗಲಿದೆ ಬ ವಿಶ್ವಾಸ ಬರುತ್ತಿದೆ.ಈಗಾಗಲೆ
ತಮ್ಮ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿರುವ ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಉದಾಹರಣೆಯಾಗಿ ಕಂಡು ಬರುತ್ತಿದ್ದಾರೆ.
ಸಮರ್ಥವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿ, ಉತ್ತಮ ಜನ ಸ್ಪಂದನೆ ಮೂಲಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಯುವ ಕೈ ಶಾಸಕರು
ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸಿ ಮುಂಚುಣಿಯಲ್ಲಿದ್ದಾರೆ ಎಂಬ ಹೆಗ್ಗಳಿಕೆ ಇವರಿಗೆ ಸಂದಿದೆ.ಇದೀಗ ಯುವ ಶಾಸಕರ ಸಾಲಿಗೆ ಟಿ. ನರಸೀಪುರ ಕ್ಷೇತ್ರದಲ್ಲಿ ಸುನೀಲ್ ಬೋಸ್, ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣ್, ಗುಂಡ್ಲುಪೇಟೆ ಕ್ಷೇತ್ರದಲ್ಲಿ ಗಣೇಶ್ ಪ್ರಸಾದ್‌ ಹೀಗೆ ಪಟ್ಟಿ ಬೆಳೆದಿದೆ.ಈಗಾಗಲೇ


ಈ ಯುವ ಪ್ರತಿಭೆಗಳ ರಾಜಕೀಯ ಅಖಾಡಕ್ಕೆ ದುಮುಕಿ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ.
ಮುಖ್ಯಮಂತ್ರಿಯಾಗಿ, ಸಚಿವರಾಗಿ, ಪ್ರಭಾವಿಗಳಾಗಿ ಅನುಭವ ಹೊಂದಿರುವ
ಅಪ್ಪಂದಿರ ನಾಮ ಬಲದಿಂದ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ ಯುವ ಕಲಿಗಳು. ಈ ಬಾರಿಯ ಚುನಾವಣೆಯಲ್ಲಿ ಅಗ್ನಿ ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ.
ಈ ಬಾರಿಯ ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್ನ ಯಂಗ್ ಅಭ್ಯರ್ಥಿಗಳು.
ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ದಿ.ಎಸ್ ಚಿಕ್ಕಮಾದು ಪುತ್ರ ಅನಿಲ್ ಚಿಕ್ಕಮಾದು, ಮಾಜಿ ಸಚಿವ ಹೆಚ್‌ಸಿ ಮಹದೇವಪ್ಪ ಪುತ್ರ ಸುನೀಲ್ ಬೋಸ್, ದಿ. ಧ್ರುವನಾರಾಯಣ್ ಪುತ್ರ ದರ್ಶನ್ ಧ್ರುವನಾರಾಯಣ್, ಮಾಜಿ ಸಚಿವ ದಿ. ಮಹದೇವಪ್ರಸಾದ್ ಪುತ್ರ ಗಣೇಶ್ ಪ್ರಸಾದ್‌ ಕಣದಲ್ಲಿ ಇಳಿಯುವುದು ಬಹುತೇಕ ಗ್ಯಾರೆಂಟಿ ಎನ್ನಲಾಗಿದೆ.
ಯುವಕರ ಪರವಾಗಿ ಕ್ಷೇತ್ರದ ಜನ ಬೆಂಬಲ ಸೂಚಿಸುತ್ತಿದ್ದಾರೆ.
ಅಪ್ಪಂದಿರ ನಾಮ ಬಲದಿಂದ ಅಧಿಕಾರ ಹಿಡಿಯಲು ಯೂತ್ಸ್ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ.ಹೈ ಕಮಾಂಡ್ ಯೂತ್ ವಿಂಗ್ ಗೆ ಮಣೆ ಹಾಕುವುದೇ ಕಾದು ನೋಡಬೇಕಿದೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *