ಹುಣಸೂರಿನಲ್ಲಿ ಯಶಸ್ವಿ ಚುನಾವಣೆಗೆ ತಾಲೂಕು ಆಡಳಿತ ಸಜ್ಜು…ಉಪವಿಭಾಗಾಧಿಕಾರಿ ರಚ್ಚು ಬಿಂದಾಲ್…

ಹುಣಸೂರಿನಲ್ಲಿ ಯಶಸ್ವಿ ಚುನಾವಣೆಗೆ ತಾಲೂಕು ಆಡಳಿತ ಸಜ್ಜು…ಉಪವಿಭಾಗಾಧಿಕಾರಿ ರಚ್ಚು ಬಿಂದಾಲ್…

  • Politics
  • March 30, 2023
  • No Comment
  • 117

ಹುಣಸೂರು,ಮಾ30,Tv10 ಕನ್ನಡ
ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಯಶಸ್ವಿಗೊಳಿಸಲು ತಾಲೂಕು ಆಡಳಿತ ಸಜ್ಜಾಗಿದೆ.ಈ ಬಗ್ಗೆ ಪತ್ರಿಕಾಗೋಷ್ಡಿ ನಡೆಸಿದ ಹುಣಸೂರು ಉಪವಿಭಾಗಾಧಿಕಾರಿಗಳಾದ ರಚ್ಚು ಬಿಂದಾಲ್ ಮಾಹಿತಿ ನೀಡಿದ್ದಾರೆ.
ಚುನಾವಣೆ ವೇಳೆ ಸಾಮಾಜಿಕ ಜಾಲತಾಣದ ಬಗ್ಗೆ ಎಚ್ಚರವಿರಲಿ ಎಂದು ಸಲಹೆ ನೀಡಿದ್ದಾರೆ. ಚುನಾವಣಾ ಅಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಚುನಾವಣಾ ಆಯೋಗದ ನಿರ್ದೇನದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ, ಅಕ್ರಮ ಕಂಡುಬಂದಲ್ಲಿ ಸಾರ್ವಜನಿಕರು 08222-251550ಗೆ ದೂರು ನೀಡುವಂತೆ ಮನವಿ ಮಾಡಿದ್ದಾರೆ.
ತಾಲೂಕಿನಲ್ಲಿ 273 ಮತ ಕೇಂದ್ರಗಳಿದ್ದು, 55 ಸೂಕ್ಷ್ಮ,3 ಅತೀಸೂಕ್ಷ್ಮ ಮತಕೇಂದ್ರಗಳಿವೆ. ಐದು ಫ್ಲೈಯಿಂಗ್ ಸ್ಕ್ವಾಡ್, ಐದು ಚೆಕ್ಕಿಂಗ್ ಸ್ಕ್ವಾಡ್ ತಂಡವು ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಮೂರು ವಿಡಿಯೋ ಚಿತ್ರೀಕರಣ ತಂಡವು ತಾಲೂಕಿನಾದ್ಯಂತ ಪಕ್ಷಗಳು ನಡೆಸುವ ಕಾರ್ಯಕ್ರಮಗಳನ್ನ ಚಿತ್ರೀಕರಣಗೊಳಿಸಲಿದ್ದಾರೆ. ಐದು ಕಡೆ ಚೆಕ್ ಪೋಸ್ಟ್ ಅಳವಡಿಸಲಾಗಿದೆ.ತಾಲೂಕು ಪ್ರವೇಶಿಸುವ ಮನುಗನಹಳ್ಳಿ, ವೀರನಹೊಸಹಳ್ಳಿ, ಚಿಲ್ಕುಂದ, ಗಾವಡಗೆರೆ, ಮುತ್ತುರಾಯನಹೊಸಹಳ್ಳಿಗಳಲ್ಲಿ ಒಟ್ಟು ಐದು ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು ಬುಧವಾರದಿಂದಲೇ ತಪಾಸಣೆ ನಡೆಯಲಿದೆ. ತಾಲೂಕಿನಲ್ಲಿ ಯಾವುದೇ ಹಬ್ಬ, ಸಭೆ,ಸಮಾರಂಭ, ಮದುವೆ ಸೇರಿದಂತೆ ಸಾರ್ವಜನಿಕರು ಸೇರುವ ಯಾವುದೇ ಸಮಾರಂಭ ಹಾಗೂ ಪಕ್ಷಗಳು ನಡೆಸುವ ಸಭೆ, ಸಮಾವೇಶಕ್ಕೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇದಕ್ಕಾಗಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕಂದಾಯ, ಪೊಲೀಸ್, ಫೈರ್, ತಾ.ಪಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಇದ್ದು, ಒಂದೇ ಕಡೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಯಾವುದೇ ಫ್ಲೆಕ್ಸ್ ಅಳವಡಿಕೆಗೆ ಅನುಮತಿ ಕಡ್ಡಾಯ.ನಿಗದಿತ ಸ್ಥಳ ಹೊರತುಪಡಿಸಿ ಬೇರೆಡೆ ಅಳವಡಿಸುವಂತಿಲ್ಲ.

ಚುನಾವಣಾ ಕಾರ್ಯಕ್ಕಾಗಿಯೇ ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ಆರಂಭಿಸಲಾಗಿದ್ದು, 24*7 ಮಾದರಿಯಲ್ಲಿ ಅಧಿಕಾರಿಗಳು ಸರದಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ದೂ.ಸಂ. 08222-251550ಗೆ ದೂರು ನೀಡಬಹುದು. ಸಾರ್ವಜನಿಕರು ಅಕ್ರಮ ಕಂಡುಬಂದಲ್ಲಿ ದೂರು ಸಲ್ಲಿಸುವಂತೆ ಮನವಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ರಾಜಕಾರಣ, ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಯಾವುದೇ ಪೋಸ್ಟ್, ಆರೋಪ-ಪ್ರತ್ಯಾರೋಪ ಮಾಡುವಂತಿಲ್ಲ. ಇದನ್ನು ಗಮನಿಸಲು ಪ್ರತ್ಯೇಕ ತಂಡವಿದ್ದು ಅಕ್ರಮ ಕಂಡುಬಂದಲ್ಲಿ ಪ್ರಕರಣ ದಾಖಲಿಸಲಾಗುವುದೆಂದು ತಾಲೂಕು ಚುನಾವಣಾಧಿಕಾರಿ ರುಚಿ ಬಿಂದಾಲ್ ಎಚ್ಚರಿಸಿದ್ದಾರೆ.

ಈ ಬಾರಿ ಹುಣಸೂರು ತಾಲೂಕಿನಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಎಂಬಂತೆ 5,500 ಮಂದಿ ಪ್ರಥಮ ಮತ ಚಲಾಯಿಸುವ ಯುವ ಜನರಿರುವುದು ವಿಶೇಷವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಗೋಷ್ಟಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಡಾ.ಅಶೋಕ್, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ತಾ ಪಂ.ಇಓ.ಮನು ಬಿ.ಕೆ, ಪ್ರಬೇಷನರಿ ತಹಸೀಲ್ದಾರ್ ನೂರಲ್‌ಹುಧಾ, ಉಪತಹಸೀಲ್ದಾರ್ ಶಕಿಲಾಬಾನು ಹಾಜರಿದ್ದರು…

Spread the love

Related post

ಪ್ರಿಯತಮೆಯನ್ನ ಕೊಲೆ ಮಾಡಿ ಚಿನ್ನಾಭರಣ ದೋಚಿ ತನ್ನ ಜಮೀನಿನಲ್ಲಿ ಶವ ಹೂತಿಟ್ಟ ಐನಾತಿ…ಪ್ರಿಯಕರ ಅಂದರ್…

ಪ್ರಿಯತಮೆಯನ್ನ ಕೊಲೆ ಮಾಡಿ ಚಿನ್ನಾಭರಣ ದೋಚಿ ತನ್ನ ಜಮೀನಿನಲ್ಲಿ ಶವ ಹೂತಿಟ್ಟ…

ಮಂಡ್ಯ,ಜೂ24,Tv10 ಕನ್ನಡ ವಿವಾಹಿತ ಮಹಿಳೆಯನ್ನ ಇನ್ಸ್ಟಾಗ್ರಾಂ ನಲ್ಲಿ ಪರಿಚಯಿಸಿಕೊಂಡು ಪ್ರೀತಿಸಿ ಚೆಕ್ಕಂದವಾಗಿ ವಿಹರಿಸಿ ಹತ್ತೇ ದಿನಗಳಲ್ಲಿ ಕೊಲೈಗೈದು ಶವವನ್ನ ತನ್ನ ಜಮೀನಿನಲ್ಲೇ ಬಚ್ಚಿಟ್ಟ ಪ್ರಿಯಕರ ಪೊಲೀಸರ ಅತಿಥಿಯಾದ ಘಟನೆ…
ಕಾವೇರಿ ನದಿ ಪಾತ್ರದ ಜನತೆಗೆ ಪ್ರವಾಹದ ಮುನ್ಸೂಚನೆ…ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ…

ಕಾವೇರಿ ನದಿ ಪಾತ್ರದ ಜನತೆಗೆ ಪ್ರವಾಹದ ಮುನ್ಸೂಚನೆ…ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ…

ಕೆ.ಆರ್.ಎಸ್,ಜೂ23,Tv10 ಕನ್ನಡ ಕೊಡಗಿನಲ್ಲಿ ಮಳೆ ಪ್ರಮಾಣ ಹೆಚ್ಚಾದ ಹಿನ್ನಲೆ ಕೆ ಆರ್ ಎಸ್ ಗೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದ ಈ ಹಿನ್ನಲೆ ಹೊರಹರಿವಿನ ಪ್ರಮಾಣವನ್ನ ಹೆಚ್ಚಿಸಲಾಗಿದೆ.5000 ಕ್ಯೂಸೆಕ್ಸ್ ನಿಂದ…
ನಿರ್ಲಕ್ಷ್ಯಕ್ಕೆ ಒಳಗಾದ ಕಳಲೆ ಲಕ್ಷ್ಮಿಕಾಂತ ದೇವಸ್ಥಾನ…ಶತಮಾನಗಳ ಇತಿಹಾಸವಿರುವ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ…

ನಿರ್ಲಕ್ಷ್ಯಕ್ಕೆ ಒಳಗಾದ ಕಳಲೆ ಲಕ್ಷ್ಮಿಕಾಂತ ದೇವಸ್ಥಾನ…ಶತಮಾನಗಳ ಇತಿಹಾಸವಿರುವ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ…

ನಂಜನಗೂಡು,ಜೂ23,Tv10 ಕನ್ನಡ ಶಿಥಿಲಗೊಂಡ ದೇವಾಲಯದ ಕಟ್ಟಡ,ಗೋಪುರಗಳ ಮೇಲೆ ಬೆಳೆದು ನಿಂತ ಸಸ್ಯಗಳು,ಬಿರುಕು ಬಿಟ್ಟ ಕಟ್ಟಡ,ಭಿನ್ನವಾಗಿರುವ ದೇವರ ಮೂರ್ತಿಗಳು,ಮುರಿದು ಮೂಲೆ ಸೇರಿರುವ ರಥದ ಚಕ್ರಗಳು,ಮಣ್ಣು ಹಿಡಿದ ರಥ ಎಳೆಯವ ಹಗ್ಗಗಳು,ಭಕ್ತರಿಗೆ…

Leave a Reply

Your email address will not be published. Required fields are marked *