ಕುಡಿದ ಅಮಲಿನಲ್ಲಿ ಮರ್ಮಾಂಗವನ್ನೇ ಕೊಯ್ದುಕೊಂಡ ಭೂಪ…ಹುಣಸೂರಿನಲ್ಲಿ ಘಟನೆ…
- CrimeMysore
- April 8, 2023
- No Comment
- 164
ಹುಣಸೂರು,ಏ8,Tv10 ಕನ್ನಡ
ಕುಡಿದ ಅಮಲಿನಲ್ಲಿ ಭೂಪನೊಬ್ಬ ತನ್ನ ಮರ್ಮಾಂಗವನ್ನೇ ಕೊಯ್ದುಕೊಂಡ ಘಟನೆ ಹುಣಸೂರು ತಾಲ್ಲೂಕು ತೊಂಡಾಳು ಗ್ರಾಮದಲ್ಲಿ ನಡೆದಿದೆ. ಗೋವಿಂದ ಶೆಟ್ಟಿ ಎಂಬುವರ ಮಗ ರಾಜಶೆಟ್ಟಿ ಎಂಬಾತ ತನ್ನ ಮರ್ಮಾಂಗವನ್ನ ಕೊಯ್ದುಕೊಂಡ ಪಾನಮತ್ತ. ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದಿದ್ದ ರಾಜಶೆಟ್ಟಿ ಸಂಯಮವನ್ನ ಕಳೆದುಕೊಂಡಿದ್ದ ಈ ವೇಳೆ ತನ್ನ ಮರ್ಮಾಂಗವನ್ನು ತಾನೆ ಕುಯ್ದುಕೊಂಡಿದ್ದಾನೆ.ಈತನ ಕೂಗಾಟ ಕೇಳಿದ ಗ್ರಾಮಸ್ಥರು ನೆರವಿಗೆ ಬಂದಿದ್ದಾರೆ.ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ರಾಜಶೆಟ್ಟಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ…