ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್…
- TV10 Kannada Exclusive
- June 12, 2026
- No Comment
- 31
ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್…
ಮೈಸೂರು,ಜೂ12,Tv10 ಕನ್ನಡ
ಕಸದರಾಶಿ ಹಾವಳಿ ತಪ್ಪಿಸಲು ಮೈಸೂರು ಮಹಾನಗರ ಪಾಲಿಕೆ ಮಾಸ್ಟರ್ ಪ್ಲಾನ್ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.ಕಸದ ರಾಶಿ ಸುರಿಯುತ್ತಿದ್ದ ಜಾಗವನ್ನ ಸಾರ್ಜನಿಕರು ಕುಳಿತು ವಿಶ್ರಾಂತಿ ಪಡೆಯುವ ಸ್ಥಳವನ್ನಾಗಿ ಮಾರ್ಪಡಿಸುವ ಮೂಲಕ ಕಸದ ಸಮಸ್ಯೆ ನಿರ್ಮೂಲನೆಗೊಳಿಸಿದೆ.ಮೈಸೂರಿನ ರಾಮಾನುಜ ರಸ್ತೆ ಅಕ್ಕಮಣ್ಣಿ ಆಸ್ಪತ್ರೆ ಉದ್ಯಾನವನದ ಪಕ್ಕದಲ್ಲಿ ಇಂತಹ ವಿಶೇಷ ಪ್ಲಾನ್ ಜಾರಿಗೊಳಿಸಿದೆ.
ಆಸ್ಪತ್ರೆಗೆ ಹೊಂದಿಕೊಂಡಂತೆ ಇರುವ ಅಕ್ಕಮ್ಮಣ್ಣಿ ಉದ್ಯಾನವನದ ಉತ್ತರ ಭಾಗದಲ್ಲಿ ಸಾರ್ವಜನಿಕರು ಕಸ ತಂದು ಸುರಿದು ನೈರ್ಮಲ್ಯಕ್ಕೆ ಕಾರಣವಾಗಿದ್ದರು.ಪೌರಕಾರ್ಮಿಕರು ಕಸದ ರಾಶಿಯನ್ನ ತೆರುವುಗೊಳಿಸಿ ತೆರಳಿದರೆ ಕೆಲವೇ ಸಮಯದಲ್ಲಿ ಮತ್ತೆ ರಾಶಿ ಸೇರುತ್ತಿತ್ತು.ಸಿಸಿ ಕ್ಯಾಮರಾ ಅಳವಡಿಸಲಾಗಿದ್ದರೂ ಕಸ ಸುರಿಯುವವರ ಹಾವಳಿ ನಿಯಂತ್ರಣಕ್ಕೆ ಬಂದಿಲ್ಲಿ.ಕಸ ಸುರಿದರೆ ದಂಡ ಹಾಕುವುದಾಗಿ ಗೋಡೆ ಬರಹದಲ್ಲಿ ಎಚ್ಚರಿಕೆ ನೀಡಿದ್ದರೂ ಮುಕ್ತ ಸಿಗಲಿಲ್ಲ.ಹೀಗಾಗಿ ಪಾಲಿಕೆ ಮಾಸ್ಟರ್ ಪ್ಲಾನ್ ರೂಪಿಸಿ ಸಾರ್ವಜನಿಕರ ವಿಶ್ರಾಂತಿ ಸ್ಥಳವನ್ನಾಗಿ ಮಾರ್ಪಡಿಸಿದೆ.ಸ್ಥಳವನ್ನ ಸ್ವಚ್ಛಗೊಳಿಸಿ ನೀಲಿ ಬಣ್ಣ ಬಳಿದು ಅಂದಗೊಳಿಸಿ, ಆಸನಗಳನ್ನ ಹಾಗೂ ಮಕ್ಕಳ ಆಟಿಕೆಗಳನ್ನ ಅಳವಡಿಸಿ ಸುಂದರ ವಾತಾವರಣವನ್ನ ಕಲ್ಪಿಸಿದೆ.ಸ್ಥಳೀಯ ಮುಖಂಡ ಮಲ್ಲೇಶ್ ಮಲ್ಲ ರವರ ಇಚ್ಛಾಶಕ್ತಿ ಹಾಗೂ ಗುತ್ತಿಗೆದಾರ ಗಣೇಶ್ ರವರ ಸಹಕಾರದಿಂದ ಮಹಾನಗರ ಪಾಲಿಕೆಯ ಮಾಸ್ಟರ್ ಪ್ಲಾನ್ ಸಕ್ಸಸ್ ಆಗಿದೆ.ಇನ್ಮುಂದೆ ಈ ಸ್ಥಳ ಕಸ ಮುಕ್ತ ಸ್ಥಳವಾಗಲಿದೆ.ಇಂತಹ ಉತ್ತಮ ಕಾರ್ಯಗಳಿಗೆ ಸಾರ್ವಜನಿಕರೂ ಸಹ ಸಹಕರಿಸಬೇಕಿದೆ…