ಗಣಪತಿ ಆಶ್ರಮಕ್ಕೆ ತಲುಪಿದ ಲಕ್ಷ್ಮಿನರಸಿಂಹ ಹಾಗೂ ಪಂಚಮುಖಿ ಆಂಜನೇಯ ವಿಗ್ರಹಗಳು…ಗಟ್ಟವಾಡಿ ಗ್ರಾಮಕ್ಕೆ ತೆರಳಲಿರುವ ಮೂರ್ತಿಗಳು…
- TV10 Kannada Exclusive
- June 29, 2026
- No Comment
- 312



ಗಣಪತಿ ಆಶ್ರಮಕ್ಕೆ ತಲುಪಿದ ಲಕ್ಷ್ಮಿನರಸಿಂಹ ಹಾಗೂ ಪಂಚಮುಖಿ ಆಂಜನೇಯ ವಿಗ್ರಹಗಳು…ಗಟ್ಟವಾಡಿ ಗ್ರಾಮಕ್ಕೆ ತೆರಳಲಿರುವ ಮೂರ್ತಿಗಳು
ಮೈಸೂರು,ಜೂ29,Tv10 ಕನ್ನಡ
ನಂಜನಗೂಡು ತಾಲೂಕು ಗಟ್ಟವಾಡಿ ಗ್ರಾಮದ ಶ್ರೀ ಸುಭ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪಂಚಮುಖಿ ಆಂಜನೇಯ ಹಾಗೂ ಲಕ್ಷ್ಮಿನರಸಿಂಹ ಮೂರ್ತಿಗಳು ಇಂದು ಮೈಸೂರಿನ ಶ್ರೀ ಗಣಪತಿ ಆಸ್ರಮಕ್ಕೆ ತಲುಪಿತು.ಕಂಚಿಯಲ್ಲಿ ಸಿದ್ದವಾದ 6 ಅಡಿ ಎತ್ತರದ ಲಕ್ಷ್ಮಿನರಸಿಂಹ ಹಾಗೂ ಕೋಲಾರದ ಮಾಲೂರಿನಲ್ಲಿ ಸಿದ್ದವಾದ 5.5 ಅಡಿ ಎತ್ತರದ ಪಂಚಮುಖಿ ಆಂಜನೇಯ ವಿಗ್ರಹಗಳು ಗಟ್ಟವಾಡಿ ಗ್ರಾಮದ ಶ್ರೀ ಸುಭ್ರಹ್ಮಣ್ಯ ಕ್ಷೇತ್ರಕ್ಕೆ ತಲುಪುವ ಮುನ್ನ ಗಣಪತಿ ಆಶ್ರಮಕ್ಕೆ ತಲುಪಿತು.ದತ್ತ ಆಶ್ರಮದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ಸ್ವಾಮೀಜಿಗಳು ವಿಗ್ರಹಗಳಿಗೆ ವಿಶೇಷ ಪೂಜೆ ನೆರವೇರಿಸಿ ಗಟ್ಟವಾಡಿ ಗ್ರಾಮಕ್ಕೆ ಬೀಳ್ಕೊಟ್ಟರು.ಮಾರ್ಗಮಧ್ಯ ಮೂರ್ತಿಗಳಿಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ ನೆರವೇರಿದ ನಂತರ ಶ್ರೀ ಸುಭ್ರಹ್ಮಣ್ಯ ಕ್ಷೇತ್ರ ತಲುಪಲಿದೆ.ವಿಶೇಷ ಪೂಜೆ ವೇಳೆ ದತ್ತ ವಿಜಯಾನಂದ ಶ್ರೀಗಳೊಂದಿಗೆ ಶಾಸಕ ಶ್ರೀವತ್ಸ ಸಹ ಭಾಗಿಯಾದರು…