
ಮಾಜಿ ಶಾಸಕ ವಾಸು ಗೆ ಟಿಕೆಟ್ ಮಿಸ್…ಇಂದು ಪತ್ರಿಕಾಗೋಷ್ಟಿ…ಮುಂದಿನ ನಿರ್ಧಾರ ತಿಳಿಸಲಿರುವ ವಾಸು…
- MysorePolitics
- April 16, 2023
- No Comment
- 112
ಮೈಸೂರು,ಏ16,Tv10 ಕನ್ನಡ
ಮಾಜಿ ಶಾಸಕ ವಾಸು ಗೆ ಟಿಕೆಟ್ ಕೈ ತಪ್ಪಿದೆ.ಚಾಮರಾಜ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬಂಟ ಹರೀಶ್ ಗೌಡ ಗೆ ಕಾಂಗ್ರೆಸ್ ಮಣೆ ಹಾಕಿದೆ.ಚಾಮರಾಜ ಕ್ಷೇತ್ರದ ಆಕಾಂಕ್ಷಿಯಾಗಿದ್ದ ವಾಸು ಗೆ ಹೈಕಮಾಂಡ್ ನಿರಾಸೆ ಮೂಡಿಸಿದೆ.ಮುಂದಿನ ನಡೆ ಬಗ್ಗೆ ತಿಳಿಸಲು
ಇಂದು ಮಾಜಿ ಶಾಸಕ ವಾಸು ಮಾಧ್ಯಮಗೋಷ್ಠಿ ಕರೆದಿದ್ದಾರೆ.ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ವಾಸು ಸೋಲಿಗೆ ಕಾರಣರಾಗಿದ್ದ ಹರೀಶ್ ಗೌಡ ಈ ಬಾರಿ ಕಾಂಗ್ರೆಸ್ ನಿಂದಲೇ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಡಿಕೆಶಿ ಪರ ವಾಗಿದ್ದೆ ವಾಸು ರವರಿಗೆ ಮುಳುವಾಯ್ತಾ ಎಂಬ ಚರ್ಚೆ ನಡೆಯುತ್ತಿದೆ.ಚಾಮರಾಜ ಕ್ಷೇತ್ರದಲ್ಲಿ
ಮೂಲ ಹಾಗೂ ವಲಸಿಗರ ನಡುವೆ ಪೈಪೋಟಿ ನಡೆಯುತ್ತಿದೆ.ಫೈಟ್ ನಲ್ಲಿ ವಲಸಿಗರಿಗೆ ಮಣೆ ಹಾಕಲಾಗಿದೆ.ಸಧ್ಯದಲ್ಲಿ ಚಾಮರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಇನ್ನೂ ಫೈನಲ್ ಆಗಿಲ್ಲ.ಟಿಕೆಟ್ ವಂಚಿತ ವಾಸುಗೆ ಜೆಡಿಎಸ್ ಗಾಳ ಹಾಕಿದೆ ಎಂಬ ಮಾತುಗಳೂ ಕೇಳಿ ಬರುತ್ತಿದೆ.ವಾಸು ಕಾಂಗ್ರೆಸ್ ತೊರೆದು ಜೆಡಿಎಸ್ ಅಪ್ಪುತ್ತಾರಾ…? ಅಥವಾ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ..? ಎಂಬ ಪ್ರಶ್ನೆಗಳಿಗೆ
ಬೆಳಗ್ಗೆ 11 ಗಂಟೆಗೆ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಉತ್ತರ ಸಿಗಲಿದೆ.ಒಟ್ಟಾರೆ ವಾಸುರವರ ಮಾಧ್ಯಮಗೋಷ್ಠಿ ಕುತೂಹಲ ಕೆರಳಿಸಿದೆ…