ಮತದಾನದ ಸಂದರ್ಭದಲ್ಲಿ ಎನ್ ಸಿ ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಹಕಾರ ಅಗತ್ಯ…ಜಿಲ್ಲಾಧಿಕಾರಿ…ಡಾ.ಕೆ ವಿ ರಾಜೇಂದ್ರ

ಮತದಾನದ ಸಂದರ್ಭದಲ್ಲಿ ಎನ್ ಸಿ ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಹಕಾರ ಅಗತ್ಯ…ಜಿಲ್ಲಾಧಿಕಾರಿ…ಡಾ.ಕೆ ವಿ ರಾಜೇಂದ್ರ

ಮತದಾನದ ಸಂದರ್ಭದಲ್ಲಿ ಎನ್ ಸಿ ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಹಕಾರ ಅಗತ್ಯ…ಜಿಲ್ಲಾಧಿಕಾರಿ…ಡಾ.ಕೆ ವಿ ರಾಜೇಂದ್ರ

ಮೈಸೂರು,ಏ17,Tv10 ಕನ್ನಡ
2023 ರ ಸಾರ್ವರ್ತಿಕ ಚುನಾವಣೆಯು ಮೇ 10 ರಂದು ನಡೆಯಲಿದ್ದು ಮತದಾನದಲ್ಲಿ ಮೂಲ ಸೌಕರ್ಯಗಳ ಅಗತ್ಯತೆಗಾಗಿ ಎನ್ ಸಿ ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಹಕಾರ ಅಗತ್ಯವಾಗಿದ್ದು ಅವರ ಸಹಕಾರ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿಯಾದ ಡಾ. ಕೆ ವಿ ರಾಜೇಂದ್ರ ಸಲಹೆ ನೀಡಿದರು.ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಮತದಾನಿಗಳಿಗೆ ವ್ಯವಸ್ಥೆ ಕಲ್ಪಿಸುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಯಸ್ಸಾದ ಮತದಾರರನ್ನು ಜೋಪಾನವಾಗಿ ಮತಗಟ್ಟೆಗೆ ಕರೆದು ತಂದು ಮತ ಹಾಕಿಸಲು ಸಹಾಯ ಮಾಡುವ ಹಾಗೂ ಕೆಲ ಮತದಾರರು ಮತಗಟ್ಟೆಯವರೆಗೂ ಬರಲು ತೊಂದರೆ ಇದ್ದಲ್ಲಿ ಅಂತವರನ್ನು ವ್ಹೀಲ್ ಚೇರ್ ಮುಖಾಂತರ ಮತಗಟ್ಟೆಗೆ ಕರೆದು ತಂದು ಮತ ಹಾಕಿಸುವ ಕಾರ್ಯಕ್ಕೆ ಈ ಎನ್.ಸಿ.ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಧಿಗಳು ಸಹಕರಿಸುವಂತೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಮತಗಟ್ಟೆಗಳಲ್ಲಿ ಪುರುಷ ಹಾಗೂ ಮಹಿಳೆಯ ಸರದಿ ಸಾಲುಗಳ ನಿರ್ವಹಣೆಗೂ ಕೂಡ ಎನ್ ಸಿಸಿ ವಿದ್ಯಾರ್ಧಿಗಳಿಗೆ ಶಿಕ್ಷಕರು ತರಬೇತಿಯನ್ನು ನೀಡಬೇಕು. ಮಕ್ಕಳನ್ನು ಈ ರೀತಿಯ ಕಾರ್ಯಗಳಿಗೆ ಬಳಸಿಕೊಳ್ಳುವುದರಿಂದ ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ಜ್ಞಾನ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದರು.
ಮತದಾನಕ್ಕೆ ಮೂರು ದಿನ ಬಾಕಿ ಇರುವ ಸಂದರ್ಭದಲ್ಲಿ ಸೀರೆ ಹಂಚುವುದು ಹಣ ಹಂಚುವುದು ಮತದಾರರಿಗೆ ಆಮಿಷ ಒಡ್ಡುವುದು ಹಾಗೂ ಇನ್ನಿತರ ಅನೈತಿಕ ಚಟುವಟಿಕೆಗಳು ನಡೆಯುವುದು ಹೆಚ್ಚಾಗಿರುವುದರಿಂದ ಅಧಿಕಾರಿಗಳು ಹಾಗೂ ಸ್ಥಳೀಯವಾಗಿರುವ ಶಿಕ್ಷಕರು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಾಯತ್ರಿ , ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶರಾದ ರಾಮಚಂದ್ರರಾಜೇ ಅರಸ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು…

Spread the love

Related post

ಭಾಗಮಂಡಲ ಪೊಲೀಸರ ಮಿಂಚಿನ ಕಾರ್ಯಾಚರಣೆ…ಮನೆಗಳ್ಳರ ಬಂಧನ…ನಗದು ಸೇರಿದಂತೆ 14.50 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಭಾಗಮಂಡಲ ಪೊಲೀಸರ ಮಿಂಚಿನ ಕಾರ್ಯಾಚರಣೆ…ಮನೆಗಳ್ಳರ ಬಂಧನ…ನಗದು ಸೇರಿದಂತೆ 14.50 ಲಕ್ಷ ಮೌಲ್ಯದ…

ಮಡಿಕೇರಿ,ಏ16,Tv10 ಕನ್ನಡ ಮನೆ ಬಾಗಿಲು ಮೀಟಿ 15 ಲಕ್ಷ ಮೌಲ್ಯದ 232 ಗ್ರಾಂ ಚಿನ್ನಾಭರಣಗಳನ್ನ ಕಳುವು ಮಾಡಿದ ಚೋರರನ್ನ ಬಂಧಿಸುವಲ್ಲಿ ಭಾಗಮಂಡಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತರಿಂದ 14.50 ಲಕ್ಷ…
ಮೈಸೂರು:ಗೋಮಾಂಸ ಮಾರಾಟ…ಓರ್ವನ ಬಂಧನ…

ಮೈಸೂರು:ಗೋಮಾಂಸ ಮಾರಾಟ…ಓರ್ವನ ಬಂಧನ…

ಮೈಸೂರು,ಏ16,Tv10 ಕನ್ನಡ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸರ್ವರ್ ಬಂಧಿತ ಆರೋಪಿ.ಈತ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಆರ್.ಮೊಹಲ್ಲಾದ ಎ.ಜೆ.ಬ್ಲಾಕ್ ನಲ್ಲಿ ಇರುವ ತನ್ನ…
ಲಾಡ್ಜ್ ನಲ್ಲಿ ಹೆತ್ತಮಗನನ್ನ ಬಿಟ್ಟು ಎಸ್ಕೇಪ್ ಆದ ಮಹಿಳೆ…ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿದ ಲಷ್ಕರ್ ಠಾಣಾ ಪೊಲೀಸರು…ಈಕೆ ಹೀಗೆ ಮಾಡಿದ್ದು ಯಾಕೆ ಗೊತ್ತಾ…?

ಲಾಡ್ಜ್ ನಲ್ಲಿ ಹೆತ್ತಮಗನನ್ನ ಬಿಟ್ಟು ಎಸ್ಕೇಪ್ ಆದ ಮಹಿಳೆ…ಕೆಲವೇ ಗಂಟೆಗಳಲ್ಲಿ ಪತ್ತೆ…

ಮೈಸೂರು,ಏ16,Tv10 ಕನ್ನಡ ಲಾಡ್ಜ್ ನಲ್ಲಿ ಹೆತ್ತಮಗನನ್ನ ಒಂಟಿಯಾಗಿ ಬಿಟ್ಟ ಮಹಿಳೆ ಮಧ್ಯರಾತ್ರಿ ಧಢೀರ್ ನಾಪತ್ತೆಯಾದ ಘಟನೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.ಘಟನೆ ಬೆಳಕಿಗೆ ಬಂದ…

Leave a Reply

Your email address will not be published. Required fields are marked *