
ರಾಮದಾಸ್ ಗೆ ಮಿಸ್…ಶ್ರೀವತ್ಸಗೆ ಟಿಕೆಟ್…ಇಬ್ಬರ ಜಗಳ ಮೂರನೆಯವರಿಗೆ ಹೈಕಮಾಂಡ್ ಮಣೆ…
- MysorePolitics
- April 17, 2023
- No Comment
- 103

ರಾಮದಾಸ್ ಗೆ ಮಿಸ್…ಶ್ರೀವತ್ಸಗೆ ಟಿಕೆಟ್…ಇಬ್ಬರ ಜಗಳ ಮೂರನೆಯವರಿಗೆ ಹೈಕಮಾಂಡ್ ಮಣೆ…
ಮೈಸೂರು,ಏ17,Tv10 ಕನ್ನಡ
ಕಗ್ಗಂಟಾಗಿದ್ದ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊನೆಗೂ ಘೋಷಣೆಯಾಗಿದೆ.
ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿಯಾಗಿ ಶ್ರೀವತ್ಸಗೆ ಟಿಕೆಟ್ ನೀಡಲಾಗಿದೆ.
ಹಾಲಿ ಶಾಸಕ ಎಸ್.ಎ ರಾಮದಾಸ್ಗೆ ಟಿಕೆಟ್ ಮಿಸ್ ಆಗಿದೆ.
ಕೃಷ್ಣರಾಜ ಟಿಕೆಟ್ಗಾಗಿ ಮೂವರು ಅಭ್ಯರ್ಥಿಗಳು ಪೈಪೋಟಿ ನಡೆಸಿದ್ದರು.
ಹಾಲಿ ಶಾಸಕ ರಾಮದಾಸ್, ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ನಡುವೆ ಫೈಟ್ ಇತ್ತು.ಇಬ್ಬರನ್ನೂ ಕೈ ಬಿಟ್ಟ ಹೈಕಮಾಂಡ್
ನಗರಾಧ್ಯಕ್ಷ ಶ್ರೀವತ್ಸಗೆ ಮಣೆ ಹಾಕಿದೆ.
ರಾಮದಾಸ್ ಹಾಗೂ ರಾಜೀವ್ಗೆ ಬಿಜೆಪಿ ಟಿಕೆಟ್ ತಪ್ಪಿದೆ.ಕೆಲವು ಚುನಾವಣೆಗಳಿಂದ ಕೆ.ಆರ್.ಕ್ಷೇತ್ರವನ್ನ ಪ್ರತಿನಿಧಿಸುತ್ತಾ ಬಂದು ಸಚಿವ ಸ್ಥಾನವನ್ನೂ ಅಲಂಕರಿಸಿದ್ದ ರಾಮದಾಸ್ ಗೆ ನಿರಾಸೆ ತಂದಿದೆ…