ಇಂದು ಮೈಸೂರಿಗೆ ಸಿಎಂ ಬೊಮ್ಮಾಯಿ…ವರುಣಾದಲ್ಲಿ ರೋಡ್ ಶೋ…ಸೋಮಣ್ಣ ಪರ ಮತಯಾಚನೆ…ಬೆಜೆಪಿ ಅಭ್ಯರ್ಥಿಗಳ ಪರ ಬ್ಯಾಟಿಂಗ್…

ಇಂದು ಮೈಸೂರಿಗೆ ಸಿಎಂ ಬೊಮ್ಮಾಯಿ…ವರುಣಾದಲ್ಲಿ ರೋಡ್ ಶೋ…ಸೋಮಣ್ಣ ಪರ ಮತಯಾಚನೆ…ಬೆಜೆಪಿ ಅಭ್ಯರ್ಥಿಗಳ ಪರ ಬ್ಯಾಟಿಂಗ್…

ಮೈಸೂರು,ಮೇ1,Tv10 ಕನ್ನಡ
ಸಿದ್ದು ಮಣಿಸಲು ಬಿಜೆಪಿ ರಣತಂತ್ರ ಹೂಡಿದೆ.ಶತಾಯಗತಾಯ ಸೋಲಿಸಲು ಪ್ಲಾನ್ ಹಾಕಿದೆ.ವರುಣಾದಲ್ಲಿ ದಿನೇ ದಿನೇ ಚುನಾವಣಾ ಅಖಾಡ ರಂಗೇರುತ್ತಿದೆ.
ಇಂದು ಮತ್ತೆ ವರುಣಾಗೆ ಸಿಎಂ ಬಸವರಾಜ ಬೊಮ್ಮಾಯಿ ಎಂಟ್ರಿ ಕೊಡಲಿದ್ದಾರೆ.
ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಬೊಮ್ಮಾಯಿ ಇಂದು ಮತ್ತೆ ಬರಲಿದ್ದಾರೆ.
ವರುಣ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ಹಾಗೂ ಸಭೆ ನಡೆಸಿ
ವಿಪಕ್ಷ ನಾಯಕ ಸಿದ್ದರಾಮಯ್ಯ ಕಟ್ಟಿ ಹಾಕಲು ರಣತಂತ್ರ ಹೂಡಿದ್ದಾರೆ.
ಬೆಳಗ್ಗೆ 12.35ಕ್ಕೆ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಆಗಮಿಸಿ
1 ಗಂಟೆಗೆ ವರುಣ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ನಂತರ
ವರುಣ ಕ್ಷೇತ್ರದ ಗ್ರಾಮಗಳಲ್ಲಿ ವಿ ಸೋಮಣ್ಣ ಪರ ಮತಯಾಚನೆ ಮಾಡಲಿದ್ದಾರೆ.
ರೋಡ್ ಶೋ ನಂತರ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಚಾಮರಾಜ ಕ್ಷೇತ್ರದಲ್ಲಿ ರೋಡ್ ಶೋ ನಂತರ ಸಭೆ ನಡೆಸಿ
ಬಿಜೆಪಿ ಅಭ್ಯರ್ಥಿ ಎಲ್ ನಾಗೇಂದ್ರ ಪರ ಮತಯಾಚನೆ ಮಾಡಲಿದ್ದಾರೆ.
4.15ಕ್ಕೆ ಕೃಷ್ಣರಾಜ ಕ್ಷೇತ್ರದಲ್ಲಿ ರೋಡ್ ಶೋ ನಂತರ ಸಭೆ ನಡೆಸಿ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಪರ ಮತಯಾಚನೆ ಮಾಡಲಿದ್ದಾರೆ.
5.30ಕ್ಕೆ ಮಂಡ್ಯಗೆ ತೆರಳಲಿದ್ದಾರೆ…

Spread the love

Related post

ಮೊದಲ ಮತದಾನದ ನೆನಪಿಗಾಗಿ ಪ್ರತಿಯೊಬ್ಬರು ಗಿಡ ನೆಡಿ

ಮೊದಲ ಮತದಾನದ ನೆನಪಿಗಾಗಿ ಪ್ರತಿಯೊಬ್ಬರು ಗಿಡ ನೆಡಿ

ಮೈಸೂರು,ಏ25,Tv10 ಕನ್ನಡಮೊದಲ ಮತದಾನದ ನೆನಪಿಗಾಗಿ ಪ್ರತಿಯೊಬ್ಬರು ಗಿಡವನ್ನು ನೆಡುವ ಮೂಲಕ ಹಬ್ಬದ ರೀತಿಯಲ್ಲಿ ಚುನಾವಣೆಯನ್ನು ಆಚರಿಸಬೇಕು.ಈ ನಿಟ್ಟಿನಲ್ಲಿ ಸೃಜನ್ ದಿನೇಶ್ ರವರು ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಮೊದಲ ಮತದಾನದ…
ಲೋಕಸಮರ…ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ…ಸೂಕ್ತ ಭದ್ರತೆ…

ಲೋಕಸಮರ…ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ…ಸೂಕ್ತ ಭದ್ರತೆ…

ಮೈಸೂರು,ಏ25,Tv10 ಕನ್ನಡ ನಾಳೆ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಭಾರಿ ಭದ್ರತೆಯನ್ನು ಕೈಗೊಳ್ಳಲಾಗಿದೆ.ಮೈಸೂರಿನ ನಗರ ವ್ಯಾಪ್ತಿಯಲ್ಲಿ ಅರಸೇನಾ ಪಡೆ ಸೇರಿದಂತೆ ಒಟ್ಟು 2,402…
ಗುಲಾಬಿ ನೀಡಿ ಮತದಾನ ಜಾಗೃತಿ…ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ಕಾರ್ಯಕ್ರಮ…

ಗುಲಾಬಿ ನೀಡಿ ಮತದಾನ ಜಾಗೃತಿ…ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ಕಾರ್ಯಕ್ರಮ…

ಮೈಸೂರು,ಏ25,Tv10 ಕನ್ನಡ ನಗರದ ಸಿಟಿ ಬಸ್ ಸ್ಟ್ಯಾಂಡ್ ಆವರಣದಲ್ಲಿಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ಹಾಗೂ ಮತದಾನದ ಕರೆಯೋಲೆ ನೀಡಿ ನಾಳೆ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು…

Leave a Reply

Your email address will not be published. Required fields are marked *