ಪ್ರೀತಿಸಿ ಮದುವೆಯಾದ ಹುಡುಗಿ ನೇಣಿಗೆ…ವರದಕ್ಷಿಣೆ ಕಿರುಕುಳ ಆರೋಪ…ಗಂಡ,ಅತ್ತೆ,ಮಾವ ಅಂದರ್…

ಪ್ರೀತಿಸಿ ಮದುವೆಯಾದ ಹುಡುಗಿ ನೇಣಿಗೆ…ವರದಕ್ಷಿಣೆ ಕಿರುಕುಳ ಆರೋಪ…ಗಂಡ,ಅತ್ತೆ,ಮಾವ ಅಂದರ್…

ಸಾಲಿಗ್ರಾಮ,ಮೇ8,Tv10 ಕನ್ನಡ
ಪ್ರೀತಿಸಿ ಮದುವೆಯಾದ ಹುಡುಗಿ ಮೂರು ವರ್ಷಕ್ಕೇ ನೇಣಿಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಸಾಲಿಗ್ರಾಮದ ಮಲುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.ದೀಪಿಕಾ(21) ಮೃತ ದುರ್ದೈವಿ.ವರದಕ್ಷಿಣೆ ಕಿರುಕುಳ ಆರೋಪದ ಹಿನ್ನಲೆ ಗಂಡ ನಾಗರಾಜ್,ಮಾವ ತಮ್ಮಯ್ಯ,ಅತ್ತೆ ಪೊಲೀಸರ ಅತಿಥಿಯಾಗಿದ್ದಾರೆ.ದೀಪಿಕಾ ಹಾಗೂ ನಾಗರಾಜ್ ದೂರದ ಸಂಭಂಧವಾಗಿದ್ದರೂ ವರಸೆಯಲ್ಲಿ ಅಣ್ಣತಂಗಿ ಆಗಬೇಕು.ಹೀಗಿದ್ದೂ ಇಬ್ಬರು ಪ್ರೀತಿಸಿದ್ದಾರೆ.ವರಸೆಯಲ್ಲಿ ಅಣ್ಣತಂಗಿ ಆದ ಕಾರಣ ಎರಡು ಮನೆಯವರಲ್ಲೂ ಮದುವೆಗೆ ವಿರೋದ ವ್ಯಕ್ತವಾಗಿದೆ.ಮನೆಯವರ ವಿರೋಧ ಲೆಕ್ಕಿಸದ ಲವರ್ಸ್ ಮೂರು ವರ್ಷಗಳ ಹಿಂದೆ ಎಸ್ಕೇಪ್ ಆಗಿ ಮದುವೆ ಆಗಿದ್ದಾರೆ.ಎರಡು ವರ್ಷಗಳ ಕಾಲ ಕೆ.ಆರ್.ನಗರದ ಗ್ರಾಮವೊಂದರಲ್ಲಿ ನೆಲೆಸಿದ್ದು ಒಂದು ವರ್ಷದ ಹಿಂದೆ ಮಲುಗನಹಳ್ಳಿ ಗ್ರಾಮಕ್ಕೆ ಬಂದಿದ್ದಾರೆ.ನಾಗರಾಜ್ ಹಾಗೂ ಪೋಷಕರು ದೀಪಿಕಾಗೆ ವರದಕ್ಷಿಣೆಗಾಗಿ ಕಿರುಕುಳ ಕೊಟ್ಟಿದ್ದಾರೆ.ಬೇಸತ್ತ ದೀಪಿಕ ನೇಣಿಗೆ ಶರಣಾಗಿದ್ದಾಳೆ.ದೀಪಿಕಾ ಸಾವಿಗೆ ವರದಕ್ಷಿಣೆ ಕಿರುಕುಳ ಕಾರಣವೆಂದು ಆರೋಪಿಸಿ ದೀಪಿಕಾ ಪೋಷಕರು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಸಧ್ಯ ಪತಿ ನಾಗರಾಜ್,ಮಾವ ತಮ್ಮಯ್ಯ,ಅತ್ತೆ ಜಯಮ್ಮ ಪೊಲೀಸರ ಅತಿಥಿಯಾಗಿದ್ದಾರೆ…

Spread the love

Related post

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ. ಹನೂರು Tv10 ಕನ್ನಡ21/01/2026 ಹನೂರು :ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ…
ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು… ಮಂಡ್ಯ,ಜ21,Tv10 ಕನ್ನಡಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ಕಾಲುಜಾರಿ ನೀರುಪಾಲಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಂಚೆಬೀರನಹಳ್ಳಿಯಲ್ಲಿ ನಡೆದಿದೆ.ಆನೆಗೋಳ ಗ್ರಾಮದ ರೈತ…
ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ… ಮೈಸೂರು,ಜ19,Tv10 ಕನ್ನಡ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಮಹತ್ತರ ಯೋಜನೆಯ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಗ್ರೀನ್…

Leave a Reply

Your email address will not be published. Required fields are marked *