ಖಾಸಗಿ ಬಸ್ ಹಾಗೂ ಇನೋವಾ ಕಾರ್ ಢಿಕ್ಕಿ…10 ಮಂದಿ ಸ್ಥಳದಲ್ಲೇ ಸಾವು…ಇಬ್ಬರು ಗಂಭೀರ…

ಖಾಸಗಿ ಬಸ್ ಹಾಗೂ ಇನೋವಾ ಕಾರ್ ಢಿಕ್ಕಿ…10 ಮಂದಿ ಸ್ಥಳದಲ್ಲೇ ಸಾವು…ಇಬ್ಬರು ಗಂಭೀರ…

ಟಿ.ನರಸೀಪುರ,ಮೇ29,Tv10 ಕನ್ನಡ
ಖಾಸಗಿ ಬಸ್ ಹಾಗೂ ಇನೋವಾ ಕಾರ್ ನಡುವೆ ನಡೆದ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೊಳ್ಳೆಗಾಲ- ಟಿ.ನರಸೀಪುರ ರಸ್ತೆಯ ಕುರುಬೂರು ಬಳಿ ನಡೆದಿದೆ.ಇನೋವಾ ಕಾರಿನಲ್ಲಿದ್ದ 11 ಮಂದಿ ಪೈಕಿ 10 ಮಂದಿ ಸ್ಥಳದಲ್ಲೇ

ಸಾವನ್ನಪ್ಪಿದ್ದಾರೆ.ಇನ್ನಿಬ್ಬರ ಸ್ಥಿತಿ ಚಿಂತಾಜನಕ ಎನ್ನಲಾಗಿದೆ.ಇಬ್ಬರು ಬಾಲಕಿಯರು,ಓರ್ವ ಬಾಲಕ ಇಬ್ಬರು ಮಹಿಳೆಯರು ಹಾಗೂ 5 ಮಂದಿ ಪುರುಷರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಟಿ.ನರಸೀಪುರದಿಂದ ಕೊಳ್ಳೆಗಾಲಕ್ಕೆ ತೆರಳುತ್ತಿದ್ದ

ಎಸ್.ಎಮ್.ಆರ್.ಹೆಸರಿನ ಖಾಸಗಿ ಬಸ್ ಹಾಗೂ ಮಹದೇಶ್ವರ ಬೆಟ್ಟದಿಂದ ಮೈಸೂರಿನತ್ತ ಬರುತ್ತಿದ್ದ ಇನೋವಾ ಕಾರ್ ನಡುವೆ ಅಪಘಾತ ಸಂಭವಿಸಿದೆ.ಮೃತರು ಬಳ್ಳಾರಿ ಜಿಲ್ಲೆಯ ಸಂಗದಕಲ್ಲೂರು ನಿವಾಸಿಗಳೆಂದು ಹೇಳಲಾಗಿದೆ.ಸ್ಥಳಕ್ಕೆ ಟಿ.ನರಸೀಪುರ ಪೊಲೀಸರು ಭೇಟಿ ನೀಡಿ ಮತ್ತಷ್ಟು ಮಾಹಿತಿ ಪಡೆಯುತ್ತಿದ್ದಾರೆ…

Spread the love

Related post

ರಿಯಲ್ ಎಸ್ಟೇಟ್ ವ್ಯವಹಾರ…ನಿವೃತ್ತ ಡಿವೈಎಸ್ಪಿ ಸೇರಿದಂತೆ ನಾಲ್ವರ ವಿರುದ್ದ ದೂರು…

ರಿಯಲ್ ಎಸ್ಟೇಟ್ ವ್ಯವಹಾರ…ನಿವೃತ್ತ ಡಿವೈಎಸ್ಪಿ ಸೇರಿದಂತೆ ನಾಲ್ವರ ವಿರುದ್ದ ದೂರು…

ಮೈಸೂರು,ಅ4,Tv10 ಕನ್ನಡ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಭಂಧಿಸಿದಂತೆ ಮೈಸೂರಿನಲ್ಲಿ ನಿವೃತ್ತ ಡಿವೈಎಸ್‌ಪಿ ಸೇರಿ ನಾಲ್ವರ ವಿರುದ್ದ ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಿವೃತ್ತ ಡಿವೈಎಸ್‌ಪಿ ವಿಜಯಕುಮಾರ್ ಹಾಗೂ…
ನೇಣುಬಿಗಿದು ಗೃಹಿಣಿ ಆತ್ಮಹತ್ಯೆ…ಗಂಡನ ಮನೆಯವರ ಕಿರುಕುಳ ಆರೋಪ…

ನೇಣುಬಿಗಿದು ಗೃಹಿಣಿ ಆತ್ಮಹತ್ಯೆ…ಗಂಡನ ಮನೆಯವರ ಕಿರುಕುಳ ಆರೋಪ…

ಮೈಸೂರು,ಅ3,Tv10 ಕನ್ನಡ ಗೃಹಿಣಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಕೆ.ಆರ್.ಮೊಹಲ್ಲಾದ ವೀಣೇಶೇಷಣ್ಣ ರಸ್ತೆಯಲ್ಲಿ ನಡೆದಿದೆ.ಸ್ಪೂರ್ತಿ (31) ಆತ್ಮಹತ್ಯೆಗೆ ಶರಣಾದ ಗೃಹಿಣಿ.ಪತಿ ಶ್ರೀಕಂಠ ಹಾಗೂ ಆತನ…
ಹುಣಸೂರು:ಹುಲಿದಾಳಿ…ರೈತ ಬಲಿ…

ಹುಣಸೂರು:ಹುಲಿದಾಳಿ…ರೈತ ಬಲಿ…

ಹುಣಸೂರು,ಅ2,Tv10 ಕನ್ನಡ ಹುಲಿ ದಾಳಿಗೆ ರೈತ ಬಲಿಯಾದ ಘಟನೆ ಹುಣಸೂರು ತಾಲೂಕಿನ ಉಡವೇಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.ಗಣೇಶ (55)ಹುಲಿ ದಾಳಿಗೆ ಬಲಿಯಾದ ರೈತ.ದನ ಮೇಯಿಸುವಾಗ ಹುಲಿ ದಾಳಿ ಮಾಡಿದೆ.ಹುಲಿ…

Leave a Reply

Your email address will not be published. Required fields are marked *