ಆನೆ ದಾಳಿ…ವ್ಯಕ್ತಿ ಸಾವು…ಕಾವಲಿಗೆ ತೆರಳಿದ ವೇಳೆ ಘಟನೆ…
- MysoreTV10 Kannada Exclusive
- June 2, 2023
- No Comment
- 167

ಸರಗೂರು,ಜೂ2,Tv10 ಕನ್ನಡ
ಆನೆ ತುಳಿತಕ್ಕೆ ವ್ಯಕ್ತಿ ಸಾವನ್ನಪ್ಪಿದ ಘಟನೆ ಸರಗೂರು ತಾಲೂಕಿನ ಬಿ ಮಟ್ಟಕೆರೆ ಗ್ರಾಮದಲ್ಲಿ ನಡೆದಿದೆ.ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಿರೇಹಳ್ಳಿ ಗ್ರಾಮದ ರವಿ ಕುಮಾರ್ ಎಂಬುವರು ಸಾವನ್ನಪ್ಪಿದ್ದಾರೆ. ಸೀಗೇವಾಡಿ ಎಂಬ ಕಾಡಂಚಿನ ತಮ್ಮ ಜಮೀನಿನಲ್ಲಿ ಕಾವಲಿಗೆ ತೆರಳಿದಾಗ ಆನೆ ದಾಳಿ ನಡೆಸಿದೆ.ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸರ್ಕಾರದಿಂದ ಬರುವ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ…