ಕೆ.ಆರ್.ಆಸ್ಪತ್ರೆ,ಚೆಲುವಾಂಬ ಆಸ್ಪತ್ರೆ,ಬಾಲಕ ಹಾಗೂ ಬಾಲಕಿಯರ ಮಂದಿರದ ಕರ್ಮಕಾಂಡ ಬಯಲು ಮಾಡಿದ ಉಪಲೋಕಾಯುಕ್ತ…ಅಧಿಕಾರಿಗಳ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ಆದೇಶ…

ಕೆ.ಆರ್.ಆಸ್ಪತ್ರೆ,ಚೆಲುವಬ ಆಸ್ಪತ್ರೆ ವರದಿ

ಕೆ.ಆರ್.ಆಸ್ಪತ್ರೆ,ಚೆಲುವಾಂಬ ಆಸ್ಪತ್ರೆ,ಬಾಲಕ ಹಾಗೂ ಬಾಲಕಿಯರ ಮಂದಿರದ ಕರ್ಮಕಾಂಡ ಬಯಲು ಮಾಡಿದ ಉಪಲೋಕಾಯುಕ್ತ…ಅಧಿಕಾರಿಗಳ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ಆದೇಶ…

ಬಾಲಕ ಹಾಗೂ ಬಾಲಕಿಯರ ಮಂದಿರದ ವರದಿ

ಮೈಸೂರು,ಜೂ28,Tv10 ಕನ್ನಡ
ಮೈಸೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಕೆ.ಆರ್.ಆಸ್ಪತ್ರೆ,ಚೆಲುವಾಂಬ ಆಸ್ಪತ್ರೆ ಹಾಗೂ ಬಾಲಕ,ಬಾಲಕಿಯರ ಮಂದಿರಗಳ ಕರ್ಮಕಾಂಡವನ್ನ ಉಪಲೋಕಾಯುಕ್ತ ಕೆ.ಆರ್.ಫಣೀಂದ್ರ ರವರು ಅಕ್ಷರಸಃ ಬಯಲು ಮಾಡಿದ್ದಾರೆ.ಸಂಭಂಧ ಪಟ್ಟ ಎಲ್ಲಾ ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತರಾಗಿ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಕಚೇರಿಯ ಕಾನೂನು ಸಲಹೆ ವಿಭಾಗಕ್ಕೆ ಆದೇಶಿಸಿದ್ದಾರೆ.ನಿಗದಿತ ಅವಧಿಯಲ್ಲಿ ಅಧಿಕಾರಿಗಳಿಂದ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಿರುವ ಉಪಲೋಕಾಯುಕ್ತರು ಅಧಿಕಾರಿಗಳಿಗೆ ಛಾಟಿ ಬೀಸಿದ್ದಾರೆ.

ಜೂನ್ 17 ರಂದು ಉಪಲೋಕಾಯುಕ್ತರಾದ ಫಣೀಂದ್ರ ರವರು ಮೈಸೂರಿಗೆ ಮೂರು ದಿನಗಳ ಭೇಟಿ ನೀಡಿದ್ದರು.ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಇದೇ ವೇಳೆ ಲೋಕಾಯುಕ್ತರು ಕೆ.ಆರ್.ಆಸ್ಪತ್ರೆ,ಚೆಲುವಾಂಬ ಆಸ್ಪತ್ರೆ,ಬಾಲಕಿಯರ ಮಂದಿರ ಹಾಗೂ ಬಾಲಕರ ಮಂದಿರಕ್ಕೂ ಧಿಢೀರ್ ಭೇಟಿ ನೀಡಿದ್ದರು. ಭೇಟಿ ವೇಳೆ ಕಂಡುಬಂದ ಅವ್ಯವಸ್ಥೆ,ಉದಾಸೀನತೆ,ಬೇಜವಾಬ್ದಾರಿ,ಸೂಕ್ತ ನಿರ್ವಹಣೆಯಲ್ಲಿ ವಿಫಲತೆ ಬಗ್ಗೆ ವೀಕ್ಷಿಸಿದ್ದರು.ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟಗಳನ್ನ ಕಣ್ಣಾರೆ ಕಂಡಿದ್ದರು.ಓಷಧಿಗಳ ಕೊರತೆ,ಸಿಬ್ಬಂದಿಗಳ ದುರ್ವರ್ತನೆ,ಅವ್ಯವಸ್ಥೆಗಳನ್ನ ಸವಿವರವಾಗಿ ಪಟ್ಟಿಮಾಡಿದ್ದರು.

ಬಾಲಕ ಹಾಗೂ ಬಾಲಕಿಯರ ಮಂದಿರದಲ್ಲೂ ಸಹ ಇಂತಹ ದೃಶ್ಯಗಳೇ ಕಂಡು ಬಂದಿತ್ತು.ಗುಣಮಟ್ಟದ ಆಹಾರ ಮತ್ತು ಬಟ್ಟೆ ನೀಡದಿರುವುದು,ಹುಳಮಿಶ್ರಿತ ಪದಾರ್ಥಗಳನ್ನ ಬಳಸುತ್ತಿರುವುದು ಸೇರಿದಂತೆ ಹಲವಾರು ಅಂಶಗಳು ಉಪಲೋಕಾಯುಕ್ತರ ಮನಸ್ಸಿಗೆ ನಾಟಿತ್ತು.ಎಲ್ಲಾ ಕರ್ಮಕಾಂಡಗಳನ್ನ ಪಟ್ಟಿ ಮಾಡಿದ ಉಪಲೋಕಾಯುಕ್ತರು ಪ್ರಧಾನ ಕಚೇರಿಗೆ ಪತ್ರ ಬರೆದು ಜವಾಬ್ದಾರಿಯುತ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ…

Spread the love

Related post

ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ ಹೆಜ್ಜೆಯಂತ ಗರುತು ಪತ್ತೆ…ಕುಟುಂಬಸ್ಥರಲ್ಲಿ ಆತಂಕ…

ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ…

ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ ಹೆಜ್ಜೆಯಂತ ಗರುತು ಪತ್ತೆ…ಕುಟುಂಬಸ್ಥರಲ್ಲಿ ಆತಂಕ… ನಂಜನಗೂಡು,ಮೇ26,Tv10 ಕನ್ನಡ ಜಮೀನಿಗೆ ತೆರಳಿದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ…
ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ ಆಚರಣೆ…

ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ…

ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ ಆಚರಣೆ… ಮೈಸೂರು,ಮೇ26,Tv10 ಕನ್ನಡ ಶ್ರೀಗಣಪತಿ ಸಚ್ಚಿದಾನಂದ ಶ್ರೀಗಳ 84 ನೇ ಹುಟ್ಟುಹಬ್ಬ ಆಶ್ರಮದಲ್ಲಿ ಸಂಭ್ರಮದಿಂದ ನೆರವೇರುತ್ತಿದೆ.ವಿವಿಧ…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವರಾದ ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಬೈರತಿ ಸುರೇಶ್, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಹಿರಿಯ ಕಾಂಗ್ರೆಸ್ ಮುಖಂಡರೂ ಹರಿಯಾಣ ಉಸ್ತುವಾರಿ ಬಿ.ಕೆ.ಹರಿಪ್ರಸಾದ್ ಮತ್ತು ಕಾನೂನು ಸಲಹೆಗಾರರಾದ ಪೊನ್ನಣ್ಣ ಸೇರಿ ಹಲವು ಪ್ರಮುಖರ ಜೊತೆಗೆ ದೆಹಲಿಯ ಕನ್ನಡ ಭವನದಲ್ಲಿ ಬೆಳಗಿನ ಉಪಹಾರ ಸವಿದರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವರಾದ ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಬೈರತಿ…

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವರಾದ ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಬೈರತಿ ಸುರೇಶ್, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಹಿರಿಯ ಕಾಂಗ್ರೆಸ್ ಮುಖಂಡರೂ ಹರಿಯಾಣ ಉಸ್ತುವಾರಿ ಬಿ.ಕೆ.ಹರಿಪ್ರಸಾದ್ ಮತ್ತು ಕಾನೂನು ಸಲಹೆಗಾರರಾದ…

Leave a Reply

Your email address will not be published. Required fields are marked *