ಪೇಪರ್ ಬಟ್ಟೆ ಚೀಲಗಳನ್ನು ಬಳುಸುವುದರಿಂದ ಪರಿಸರ ರಕ್ಷಣೆ ಮಾಡಲು ಸಾದ್ಯ -ಲಯನ್ ಎನ್ . ಜಯಪ್ರಕಾಶ್ ಕರೆ**

ಪೇಪರ್ ಬಟ್ಟೆ ಚೀಲಗಳನ್ನು ಬಳುಸುವುದರಿಂದ ಪರಿಸರ ರಕ್ಷಣೆ ಮಾಡಲು ಸಾದ್ಯ -ಲಯನ್ ಎನ್ . ಜಯಪ್ರಕಾಶ್ ಕರೆ**
ಭೂಮಿಯ ಪರಿಸರದಲ್ಲಿ ಪ್ಲಾಸ್ಟಿಕ್ ವಸ್ತುಗಳು ಮತ್ತು ಕಣಗಳು ಅಂದರೆ ಪ್ಲಾಸ್ಟಿಕ್ ಬಾಟಲಿಗಚಳು ಚೀಲಗಳು ಶೇಖರಣೆಯಾಗಿ ಅದು ಮಾನವರು , ವನ್ಯ ಜೀವಿಗಳು ಮತ್ತು ಅವುಗಳ ಅವಾಸಸ್ಥಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಇಡೀ ಪರಿಸರವನ್ನು ಪ್ಲಾಸ್ಟಿಕ್ ನಾಶ ಮಾಡುವ ಸಾಧ್ಯತೆ ಇದೆ ಎಂದು ಲಯನ್ಸ್ ಅಂತರಾಷ್ಟ್ರೀಯ 317 ಜಿ ನ ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಯ ಜಿಲ್ಲಾಧ್ಯಕ್ಷರಾದ ಲಯನ್ ಎನ್ ಜಯಪ್ರಕಾಶ್ ರವರು ಇಂದು ಪೇಪರ್ ಬ್ಯಾಗ ದಿನದ ಪ್ರಯುಕ್ತ ಗ್ರಾಹಕರಿಗೆ ಪೇಪರ್ ಮತ್ತು ಬಟ್ಟೆ ಚೀಲಗಳನ್ನು ನೀಡುವ ಮೂಲಕ ಪ್ಲಾಸ್ಟಿಕ್ ಮುಕ್ತ ಜಾಗೃತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಲಯನ್ಸ್ ಕ್ಲಬ್ ಆಫ್ ಅಂಬಾಸಿಡರ್ ಸಂಸ್ಥೆಯ ಅಧ್ಯಕ್ಷರಾದ ಲಯನ್ ಎಚ್ ಸಿ ಕಾಂತರಾಜುರವರು ಮಾತನಾಡಿ ಕೊಳೆತ ಪ್ಲಾಸ್ಟಿಕ್ ತ್ಯಾಜ್ಯವು ನೇರ ಬಳಕೆ ಪರೋಕ್ಷ ಬಳಕೆಯಿಂದ ಭೂಮಿ, ಜಲ,ಸಾಗರಗಳು ಭಾದಿಸುವ ಕಾರಣದಿಂದ ಆದಷ್ಟು ಮಟ್ಟಿಗೆ ಬಟ್ಟೆ ಪೇಪರ್ ಚೀಲಗಳನ್ನು ಬಳಸಿದರೆ ಮುಂದಿನ ಜನಾಂಗಕ್ಕೆ ಆರೋಗ್ಯಕರವಾದ ಪರಿಸರವನ್ನು ಸಂರಕ್ಷಿಸಬಹುದೆಂದು ಹೇಳಿದರು.
ಲಯನ್ಸ್ 317ಜಿ ಜಿಲ್ಲೆಯ ಸಂಪುಟ ಕಾರ್ಯದರ್ಶಿಯಾದ ಲಯನ್ ಟಿ.ಹೆಚ್ ವೆಂಕಟೇಶ್ ಹೊಸ ಲಯನ್ಸ್ ಜಿಲ್ಲೆಯ ವತಿಯಿಂದ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಈ ವರ್ಷ ಹೆಚ್ಚು ಹೆಚ್ಚು ಆಯೋಜನೆ ಮಾಡಿ ಸಾರ್ವಜನಿಕರಲ್ಲಿ ಮನಃ ಪರಿವರ್ತನೆ ಆಗುವ ರೀತಿಯಲ್ಲಿ ಜಾಗೃತಿ ಉಂಟು ಮಾಡಲು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಿ ಆರ್ ದಿನೇಶ್ ಖಜಾಂಚಿ ವಿಷ್ಣು ಸದಸ್ಯರಾದ ಮಕಾಳ ಶಿವಕುಮಾರ್, ಭಾಸ್ಕರನಂದ ,ಅಮರ ಭವಾನಿ, ರವಿಚಂದ್ರ, ಅರುಣ್, ಅಮ್ಮಾಡಿ ಮಹದೇವ್ ,ಡಾಕ್ಟರ್ ಕಿಶೋರ್ ಹಾಜರಿದ್ದರು .

Spread the love

Related post

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…

Leave a Reply

Your email address will not be published. Required fields are marked *