ಶಂಕಿತ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿ…ಸಾರ್ವಜನಿಕರಿಗೆ ಉದಯಗಿರಿ ಇನ್ಸ್ಪೆಕ್ಟರ್ ರಾಜು ಮನವಿ…

ಶಂಕಿತ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿ…ಸಾರ್ವಜನಿಕರಿಗೆ ಉದಯಗಿರಿ ಇನ್ಸ್ಪೆಕ್ಟರ್ ರಾಜು ಮನವಿ…

ಮೈಸೂರು,ಜು30,Tv10 ಕನ್ನಡ

ಮೈಸೂರು,ಜು30,Tv10 ಕನ್ನಡ

ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನವಾದ ಬೆನ್ನ ಹಿಂದೆಯೇ ಮೈಸೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ದುಷ್ಕರ್ಮಿಗಳ ಸೆದೆಬಡಿಯಲು ನೈಟ್ ಬೀಟ್ ವ್ಯವಸ್ಥೆಯನ್ನ ಮತ್ತಷ್ಟು ಬಿಗಿ ಪಡಿಸುತ್ತಿದ್ದಾರೆ.ಈಗಾಗಲೇ ಜಾರಿಯಲ್ಲಿರುವ ಸ್ಮಾರ್ಟ್ ಈ ಬೀಟ್ ವ್ಯವಸ್ಥೆಯನ್ನ ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿದ್ದಾರೆ.ಉದಯಗಿರಿ ಠಾಣೆ ಪೊಲೀಸರು ಸಾರ್ವಜನಿಕರ ನೆರವನ್ನೂ ಕೋರಿದ್ದಾರೆ. ಅಪರಿಚಿತ ಹಾಗೂ ಶಂಕಿತ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.ಮಾಹಿತಿದಾರರ ವಿವರವನ್ನ ಗೌಪ್ಯತೆಯಿಂದ ಕಾಪಾಡುವುದಾಗಿ ಭರವಸೆ ನೀಡಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯ ರಾತ್ರಿ ಗಸ್ತು ಕರ್ತವ್ಯದ ಸಿಬ್ಬಂದಿಗೆ ಶಕ್ತಿನಗರದ ಪಾರ್ಕ್ ಸಮೀಪ ಇನ್ಸ್ಪೆಕ್ಟರ್ ಪಿ. ಕೆ. ರಾಜು ರವರು ಕರ್ತವ್ಯದ ಹಂಚಿಕೆಯನ್ನು ಮಾಡಿ ನಂತರ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ.
ಶಕ್ತಿನಗರದ ನಾಗರೀಕರೊಂದಿಗೆ ಪೊಲೀಸ್ ಸಿಬ್ಬಂದಿಗಳು ಸಂಭಾಷಣೆ ನಡೆಸಿ ಈ ಹಿಂದೆ ರಾತ್ರಿ ಗಸ್ತಿನ ಸಿಬ್ಬಂದಿಗಳು ಪಾಯಿಂಟ್ ಬುಕ್ ನಲ್ಲಿ ಸಹಿ ಮಾಡುವ ವ್ಯವಸ್ಥೆಯ ಬದಲಾಗಿ ಪೊಲೀಸ್ ಇಲಾಖೆಯ ವತಿಯಿಂದ ಜಾರಿಗೆ ತಂದಿರುವ ಸ್ಮಾರ್ಟ್ ಈ ಬೀಟ್ ವ್ಯವಸ್ಥೆಯ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬುವ ಪೊಲೀಸರ ಕೆಲಸಕ್ಕೆ ಪ್ರಶಂಸೆಗಳ ಸುರಿಮಳೆಯಾಗಿದೆ.ಈ ವೇಳೆ ಸಬ್ ಇನ್ಸ್ಪೆಕ್ಟರ್ ಸುನಿಲ್ ಹಾಗೂ ಸಿಬ್ಬಂದಿಗಳು ಹಾಜರಿದ್ದು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬಿದ್ದಾರೆ.

ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಮಾರ್ಗದರ್ಶನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಹಾಗೂ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ ಉಸ್ತುವಾರಿಯಲ್ಲಿ ಎಸಿಪಿ ಶಾಂತಮಲ್ಲಪ್ಪ ನೇತೃತ್ವದಲ್ಲಿ ಉದಯಗಿರಿ ಠಾಣಾ ಪೊಲೀಸರು ರಾತ್ರಿ ಗಸ್ತನ್ನ ಬಿಗಿಗೊಳಿಸಿದ್ದಾರೆ…

Spread the love

Related post

ಕಾಂಗ್ರೆಸ್ ಮುಖಂಡೆ ಭೀಕರ ಕೊಲೆ…ಪತಿಯಿಂದಲೇ ಕೃತ್ಯ…

ಕಾಂಗ್ರೆಸ್ ಮುಖಂಡೆ ಭೀಕರ ಕೊಲೆ…ಪತಿಯಿಂದಲೇ ಕೃತ್ಯ…

ಕಾಂಗ್ರೆಸ್ ಮುಖಂಡೆ ಭೀಕರ ಕೊಲೆ…ಪತಿಯಿಂದಲೇ ಕೃತ್ಯ… ಬನ್ನೂರು,ಮೇ21,Tv10 ಕನ್ನಡ ಮೈಸೂರು ಜಿಲ್ಲೆಯ ಬನ್ನೂರಿನ ತುರಗನೂರಿನಲ್ಲಿ ಕಾಂಗ್ರೆಸ್ ಮುಖಂಡೆಯ ಭೀಕರ ಕೊಲೆಯಾಗಿದೆ. ಪತಿಯಿಂದ ಕೃತ್ಯ ನಡೆದಿದೆ. ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದವಿದ್ಯಾ…
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ…ಸಾವಿರಾರು ಭಕ್ತರು ಭಾಗಿ…

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ…ಸಾವಿರಾರು ಭಕ್ತರು…

ಮೈಸೂರು,ಮೇ19,Tv10 ಕನ್ನಡ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದು ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಸಾಂಗವಾಗಿ ನೆರವೇರಿತು.ಮೈಸೂರು ಸೇರಿದಂತೆ‌ ರಾಜ್ಯ,ಹೊರ ರಾಜ್ಯಗಳಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ದಂಪತಿಗಳು…
ಸಾಲ ವಸೂಲಿಗೆ ಬಟ್ಟೆಬಿಚ್ಚಿನಿಂತು ಗೃಹಿಣಿಯನ್ನ ಬಾ ಎಂದು ಕರೆದ ಭೂಪ…ನೊಂದ ಮಹಿಳೆಯಿಂದ ಪ್ರಕರಣ ದಾಖಲು…

ಸಾಲ ವಸೂಲಿಗೆ ಬಟ್ಟೆಬಿಚ್ಚಿನಿಂತು ಗೃಹಿಣಿಯನ್ನ ಬಾ ಎಂದು ಕರೆದ ಭೂಪ…ನೊಂದ ಮಹಿಳೆಯಿಂದ…

ಮೈಸೂರು,ಮೇ19,Tv10 ಕನ್ನಡ ಸಾಲ ವಸೂಲಿಗೆ ಬಂದ ಕಿರಾತಕ ಮನೆ ಮುಂದೆ ಬಟ್ಟೆಬಿಚ್ಚಿನಿಂತು ಗೃಹಿಣಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಬಾ ಎಂದು ಕರೆದ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನಹಳ್ಳಿಯಲ್ಲಿ…

Leave a Reply

Your email address will not be published. Required fields are marked *