ಕಾಲುವೆಗೆ ಉರುಳಿಬಿದ್ದ ಟಾಟಾ ಇಂಡಿಕಾ…ನಾಲ್ವರು ಸಾವು…ಬದುಕುಳಿದ ಚಾಲಕ…

ಕಾಲುವೆಗೆ ಉರುಳಿಬಿದ್ದ ಟಾಟಾ ಇಂಡಿಕಾ…ನಾಲ್ವರು ಸಾವು…ಬದುಕುಳಿದ ಚಾಲಕ…

ಮಂಡ್ಯ,ಜು30,Tv10 ಕನ್ನಡ

ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಇಂಡಿಕಾ ಕಾಲುವೆಗೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಕಾಡುಕೊತ್ತನಹಳ್ಳಿ ಸಮೀಪ ನಡೆದಿದೆ. ನಿನ್ನೆ ರಾತ್ರಿ 8:30 ಗಂಟೆ ಸಮಯದಲ್ಲಿ ದುರ್ಘಟನೆ ನಡೆದಿದೆ. ಗಾಮನಹಳ್ಳಿ ಗ್ರಾಮದ ಬನ್ನೂರು ಮಂಡ್ಯ ರಸ್ತೆಯಿಂದ ಗ್ರಾಮದ ನಡುವೆ ಹಾದು ಹೋಗಿರುವ ದೊಡ್ಡ ಮಲಗೂಡು ರಸ್ತೆಯಲ್ಲಿ ಕಾಡುಕೊತ್ತನಹಳ್ಳಿಗೆ ತಿರುಗುವ ವಿಸಿ ನಾಲೆಯ ತಿರುವಿನಲ್ಲಿರುವ ಕಾಲುವೆಗೆ ಕಾರು ಉರುಳಿ ಬಿದ್ದಿದೆ. ಗಾಮನಹಳ್ಳಿ ಗ್ರಾಮದಿಂದ ಬನ್ನೂರು ತಾಲೂಕು ಗೊರವನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದ ಟಾಟಾ ಇಂಡಿಕಾ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದೆ. ಕಾರು ಚಾಲಕ ಮನೋಜ್ ತಕ್ಷಣ ಹೊರಗೆ ಹಾರಿದ ಪರಿಣಾಮ ಪಾರಾಗಿದ್ದಾನೆ. ಕಾರಿನಲ್ಲಿದ್ದ ಗಾಮನಹಳ್ಳಿ ವಾಸಿ ಮಹದೇವಮ್ಮ(60) ಗೊರವನಹಳ್ಳಿ ವಾಸಿಗಳಾದ ರೇಖಾ (40 ) ಮಮತಾ(45) ಹಾಗೂ ಸಂಜನಾ (19) ಮೃತಪಟ್ಟಿದ್ದಾರೆ.ಮೃತರು ಒಂದೇ ಕುಟುಂಬದವರು.
ಮೃತದೇಹಗಳನ್ನ ನೀರಿನಿಂದ ಮೇಲಕ್ಕೆ ಎತ್ತಿದ್ದು ಸ್ಥಳಕ್ಕೆ ಅರಕೆರೆ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…

Spread the love

Related post

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ FDA ಲೋಕಾ ಬಲೆಗೆ…30 ಸಾವಿರ ಲಂಚ ಸ್ವೀಕರಿಸುವ ವೇಳೆ ಲಾಕ್…

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ FDA ಲೋಕಾ ಬಲೆಗೆ…30 ಸಾವಿರ…

ಪಿರಿಯಾಪಟ್ಟಣ,ಮೇ16,Tv10 ಕನ್ನಡ ಆಹಾರ ಸರಬರಾಜು ಮಾಡಿದ ಬಿಲ್ ಪಾವತಿಸಲು 30 ಸಾವಿರ ಲಂಚ ಸ್ವೀಕರಿಸುತ್ತಿದ್ದ ಪಿರಿಯಾಪಟ್ಟಣ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕ ವಿಜಯ್ ಕುಮಾರ್…
ಭದ್ರತೆಗಾಗಿ ನೀಡಿದ್ದ ಚೆಕ್ ದುರುಪಯೋಗ ಆರೋಪ…ಪಾಲಿಕೆ ಸೀನಿಯರ್ ಮೆಡಿಕಲ್ ಆಫೀಸರ್ ವಿರುದ್ದ ವಂಚನೆ ಪ್ರಕರಣ ದಾಖಲು…

ಭದ್ರತೆಗಾಗಿ ನೀಡಿದ್ದ ಚೆಕ್ ದುರುಪಯೋಗ ಆರೋಪ…ಪಾಲಿಕೆ ಸೀನಿಯರ್ ಮೆಡಿಕಲ್ ಆಫೀಸರ್ ವಿರುದ್ದ…

ಮೈಸೂರು,ಮೇ15,Tv10 ಕನ್ನಡ ವ್ಯವಹಾರದ ನಿಮಿತ್ತ ನೀಡಿದ್ದ ಮುಂಗಡ ಹಣಕ್ಕೆ ಭದ್ರತೆಗಾಗಿ ನೀಡಿದ್ದ ಚೆಕ್ ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನಲೆ ಮೈಸೂರು ಮಹಾನಗರ ಪಾಲಿಕೆ ಸೀನಿಯರ್ ಮೆಡಿಕಲ್ ಆಫೀಸರ್ ವಿರುದ್ದ…
ಮಂಡ್ಯ:ಬಾಲಕಿಯರ ಕ್ರೀಡಾ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ…

ಮಂಡ್ಯ:ಬಾಲಕಿಯರ ಕ್ರೀಡಾ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ…

ಮಂಡ್ಯ:ಬಾಲಕಿಯರ ಕ್ರೀಡಾ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ… ಮಂಡ್ಯ,ಮೇ13,Tv10 ಕನ್ನಡ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಇಂದು ಮಂಡ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಬಾಲಕಿಯರ ಕ್ರೀಡಾ ವಸತಿನಿಲಯಕ್ಕೆ ಭೇಟಿ ನೀಡಿ…

Leave a Reply

Your email address will not be published. Required fields are marked *