ಕೊತ್ತನಹಳ್ಳಿ ಆದಿವಾಸಿ ಕಾಲೋನಿಗೆ ಪರಿಶಿಷ್ಠ ಪಂಗಡಗಳ ಇಲಾಖೆ ಅಧಿಕಾರಿ ದೌಡು…ಹಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಮಹಮದ್ ಷಫೀರ್…Tv10 ಕನ್ನಡ ಇಂಪ್ಯಾಕ್ಟ್…
- TV10 Kannada Exclusive
- August 4, 2023
- No Comment
- 122
ನಂಜನಗೂಡು,ಆ4,Tv10 ಕನ್ನಡ
ಅಭಿವೃದ್ದಿ ಕಾಣದೆ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾದ ನಂಜನಗೂಡು ತಾಲೂಕು ಕೊತ್ತನಹಳ್ಳಿ ಆದಿವಾಸಿ ಕಾಲೋನಿ ನಿವಾಸಿಗಳ ಸಮಸ್ಯೆಗಳನ್ನ ಪ್ರಸಾರ ಮಾಡಿದ ಕೆಲವೇ ಗಂಟೆಗಳಲ್ಲಿ ಪರಿಶಿಷ್ಠ ಪಂಗಡಗಳ ಇಲಾಖೆ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಿದ್ದಾರೆ.ಮೂಲಭೂತ ಸೌಕರ್ಯಗಳನ್ನ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.ಇದು TV 10 ಕನ್ನಡ ವಾಹಿನಿ ಸುದ್ದಿಯ ಇಂಪ್ಯಾಕ್ಟ್.
ಇಂದು ಬೆಳಿಗ್ಗೆ ಕೊತ್ತನಹಳ್ಳಿ ಆದಿವಾಸಿ ಕಾಲೋನಿ ಜನರ ಸಂಕಷ್ಟಗಳ ಬಗ್ಗೆ Tv10 ಸುದ್ದಿ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿತ್ತು.ಮೂಲಭೂತ ಸಂಕರ್ಯಗಳಿಂದ ಆದಿವಾಸಿ ಜನ ವಂಚನೆಗೆ ಒಳಗಾಗಿದ್ದಾರೆಂದು ಪ್ರಸಾರ ಮಾಡಲಾಗಿತ್ತು.ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳು ಬರ್ತಾರೆ ನಂತರ ಇತ್ತ ತಿರುಗಿಯೂ ನೋಡಲ್ಲ ಎಂದು ಆರೋಪಿಸಲಾಗಿತ್ತು.ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಪರಿಶಿಷ್ಠ ಪಂಗಡಗಳ ಇಲಾಖೆ ಅಧಿಕಾರಿ ಸಿಬ್ಬಂದಿಗಳ ಸಮೇತ ಕೊತ್ತನಹಳ್ಳಿ ಕಾಲೋನಿಗೆ ದೌಡಾಯಿಸಿದ್ದಾರೆ.ಹಾಡಿ ನಿವಾಸಿಗಳ ಸಮಸ್ಯೆಗಳ ಮಾಹಿತಿ ಪಡೆದಿದ್ದಾರೆ.ಶೀಘ್ರದಲ್ಲಿ ಮೂಲಭೂತ ಸೌಕರ್ಯಗಳನ್ನ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.ಹಾಡಿಯ ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆಯುವುದಾಗಿ ಅಭಯ ನೀಡಿದ್ದಾರೆ.ಇದು Tv10 ಕನ್ನಡ ವರದಿಯ ಫಲಶೃತಿ…