ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ…ಆಶ್ರಯ ಯೋಜನೆಗೆ ಮೀಸಲಾದ ಜಮೀನು ಒತ್ತುವರಿ ತೆರುವು…ಮಳೆಯಲ್ಲೂ ಕಾರ್ಯಾಚರಣೆ…
- TV10 Kannada Exclusive
- August 19, 2023
- No Comment
- 253

ಮೈಸೂರು,ಆ19,Tv10 ಕನ್ನಡ

ಬೆಳ್ಳಂಬೆಳಗ್ಗೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದವರಿಗೆ ಮೈಸೂರು ತಾಲೂಕು ತಹಸೀಲ್ದಾರ್ ಬಿ.ಎನ್.ಗಿರೀಶ್ ಶಾಕ್ ಕೊಟ್ಟಿದ್ದಾರೆ.ಆಶ್ರಯ ಯೋಜನೆಗಾಗಿ ಮಂಜೂರಾಗಿದ್ದ ಸರ್ಕಾರಿ ಗೋಮಾಳ ರಕ್ಷಿಸಿದ್ದಾರೆ.ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾದ ಹಸು ಕೊಟ್ಟಿಗೆಗಳನ್ನ ನೆಲಸಮ ಮಾಡಿ ತೆರುವುಗೊಳಿಸಿದ್ದಾರೆ.ಮಳೆಯನ್ನೂ ಲೆಕ್ಕಿಸದ ತಹಸೀಲ್ದಾರ್ ತೆರುವು ಕಾರ್ಯಾಚರಣೆ ನಡೆಸಿದ್ದಾರೆ.
ಮೈಸೂರು ತಾಲೂಕು ಇಲವಾಲ ಹೋಬಳಿ ಆನಂದೂರು ಗ್ರಾಮದ ಸರ್ವೆ ನಂ 6 ಮೂಲತಃ ಸರ್ಕಾರಿ ಗೋಮಾಳ.1996 ರಲ್ಲಿ ಆಶ್ರಯ ಯೋಜನೆಗಾಗಿ 4 ಎಕ್ರೆ ಮಂಜೂರಾಗಿತ್ತು.ಸದರಿ ಜಮೀನಿನಲ್ಲಿ ಆನಂದೂರು ಗ್ರಾಮದ ಗವಿರಂಗೇಗೌಡ ಹಾಗೂ ಇತರರು 20 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಸದರಿ ಜಮೀನಿನಲ್ಲಿ ಹಸು ಕೊಟ್ಟಿಗೆ ಸಹ ನಿರ್ಮಿಸಲಾಗಿದೆ.ಬೆಳಗಿನ ಮಳೆಯಲ್ಲೂ ಸಹ ತೆರುವು ಕಾರ್ಯಾಚರಣೆ ಪೂರ್ಣಗೊಳಿಸಿ ಸರ್ಕಾರಿ ಜಮೀನನ್ನ ರಕ್ಷಿಸಿದ್ದಾರೆ.
ತಹಸೀಲ್ದಾರ್ ಟಿ.ಎನ್.ಗಿರೀಶ್ ಗೆ ತಾಲೂಕು ಪಂಚಾಯ್ತಿ ಇ.ಓ.ಗಿರೀಶ್,ಭೂ ದಾಖಲೆಗಳ ಸಹಾಯಕ ನಿರ್ದೇಶಕ ಚಿಕ್ಕಣ್ಣ,ತಾಲೂಕು ಸರ್ವೇಯರ್ ವೆಂಕಟೇಶ್,ಉಪತಹಸೀಲ್ದಾರ್ ಕುಬೇರ್,ರಾಜಸ್ವ ನಿರೀಕ್ಷಕರಾದ ಶಿವಕುಮಾರ್ ಸೇರಿದಂತೆ ಇತರರು ಸಾಥ್ ನೀಡಿದರು…