ಮೈಸೂರು:ಸ್ನೇಹಿತನ ಕೊಲೆ ಆರೋಪಿಯ ತಂದೆ ತಾಯಿ ಅಂತ್ಯಕ್ರಿಯೆಗೆ ಅನುಮತಿ ನೀಡಿದ ನ್ಯಾಯಾಲಯ…
- Crime
- August 22, 2023
- No Comment
- 170
ಮೈಸೂರು,ಆ22,Tv10 ಕನ್ನಡ
ಸ್ನೇಹಿತನ ಕೊಲೆ ಮಾಡಿ ಜೈಲು ಸೇರಿದ್ದ ಆರೋಪಿ ತೇಜಸ್ ಗೆ ಮೃತಪಟ್ಟ ತಂದೆ ತಾಯಿ ಅಂತ್ಯಕ್ರಿಯೆ ನೆರವೇರಿಸಲು ಮೈಸೂರು ನ್ಯಾಯಾಲಯ ಅನುಮತಿ ನೀಡಿದೆ.ಕ್ಷುಲ್ಲಕ ಕಾರಣಕ್ಕೆ ತೇಜಸ್ ಸ್ನೇಹಿತ ಬಾಲರಾಜ್ ಗೆ ಚಾಕುವಿನಿಂದ ಇರಿದು ಕೊಂದ ಆರೋಪದಡಿ ಜೈಲು ಸೇರಿದ್ದ.ಕೃತ್ಯದಲ್ಲಿ ತೇಜಸ್ ತಂದೆ ಸಾಮ್ರಾಟ್ ಸಹ ಭಾಗಿಯಾಗಿ ಮಗನ ಜೊತೆ ಜೈಲು ಸೇರಿದ್ದರು.ತೇಜಸ್ ಹಾಗೂ ಸಾಮ್ರಾಟ್ ಇಬ್ಬರೂ ಜೈಲು ಸೇರಿದ ಹಿನ್ನಲೆ ಮನನೊಂದ ಸಾಮ್ರಾಟ್ ಪತ್ನಿ ಇಂದ್ರಾಣಿ ಆತ್ಮಹತ್ಯೆ ಮಾಡಿಕೊಂಡರು.ಈ ಅಘಾತದಿಂದ ಜೈಲಿನಲ್ಲಿದ್ದ ಸಾಮ್ರಾಟ್ ಹೃದಯಾಘಾತದಿಂದ ಮೃತಪಟ್ಟರು.ಕೊಲೆ ನಡೆದ ಎರಡು ದಿನಗಳ ಅಂತರದಲ್ಲಿ ಆರೋಪಿಯ ತಂದೆ ಹಾಗೂ ತಾಯಿ ಮೃತಪಟ್ಟಿದ್ದಾರೆ.ತಂದೆ ತಾಯಿ ಅಂತ್ಯಕ್ರಿಯೆ ನೆರವೇರಿಸಲು ತೇಜಸ್ ಗೆ ನ್ಯಾಯಾಲಯ ಅನುಮತಿ ನೀಡಿದೆ.
ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ….